ಕರ್ನಾಟಕ

karnataka

ETV Bharat / bharat

ಕುರುಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಗೀತಾ ಜಯಂತಿ 2023: ಹರಿಯಾಣ ರಾಜ್ಯಪಾಲರಿಂದ ಗೀತಾ ಮಹೋತ್ಸವ ಉದ್ಘಾಟನೆ

International Geeta Jayanti 2023: ಹರಿಯಾಣದ ಕುರುಕ್ಷೇತ್ರದಲ್ಲಿ 2023ರ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಾರಸ್ ಮತ್ತು ಕರಕುಶಲ ಮೇಳವನ್ನು ಉದ್ಘಾಟಿಸಿದರು. ಗೀತಾ ಮಹೋತ್ಸವವು 24 ಡಿಸೆಂಬರ್​ರವರೆಗೆ ಮುಂದುವರಿಯುತ್ತದೆ.

By ETV Bharat Karnataka Team

Published : Dec 7, 2023, 1:33 PM IST

Etv Bharat
Etv Bharat

ಕುರುಕ್ಷೇತ್ರ (ಹರಿಯಾಣ):2023ರ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಇಂದಿನಿಂದ ಆರಂಭವಾಗಿದೆ. ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಬ್ರಹ್ಮ ಸರೋವರದ ತಟದಲ್ಲಿ ನಡೆಯಲಿರುವ ಕರಕುಶಲ ಮತ್ತು ಸಾರಸ್ ಮೇಳವನ್ನು ರಾಜ್ಯಪಾಲ ಭಂಡಾರು ದತ್ತಾತ್ರೇಯ ಉದ್ಘಾಟಿಸಿದರು. ಈ ಕಾರ್ಯಕ್ರಮವು ಡಿಸೆಂಬರ್ 7ರಿಂದ ಪ್ರಾರಂಭವಾಗಿ ಡಿಸೆಂಬರ್ 24ರವರೆಗೆ ಮುಂದುವರಿಯುತ್ತದೆ. ಅಂತಾರಾಷ್ಟ್ರೀಯ ಗೀತಾ ಮಹೋತ್ಸವವನ್ನು ನೋಡಲು ಭಾರತ ಮಾತ್ರವಲ್ಲದೇ ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸಿದ್ದಾರೆ.

ಅಲಂಕಾರಗೊಂಡ ಕುರುಕ್ಷೇತ್ರ ನಗರ

ಕರಕುಶಲ ಮತ್ತು ಸಾರಸ್ ಮೇಳದಲ್ಲಿ 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಕರಕುಶಲ ವಸ್ತುಗಳನ್ನು ಪ್ರದರ್ಶಿಸುತ್ತಾರೆ. ಕ್ರಾಫ್ಟ್ಸ್ ಮತ್ತು ಸಾರಸ್ ಮೇಳವು ಅಂತಾರಾಷ್ಟ್ರೀಯ ಗೀತಾ ಮಹೋತ್ಸವದ ಜನರ ಆಕರ್ಷಣೆಯ ಪ್ರಮುಖ ಕೇಂದ್ರವಾಗಿದೆ. ಈ ವರ್ಷ ಬ್ರಹ್ಮ ಸರೋವರ ದಡದಲ್ಲಿ 600ಕ್ಕೂ ಹೆಚ್ಚು ಕುಶಲಕರ್ಮಿಗಳ ಮಳಿಗೆಗಳನ್ನು ಸ್ಥಾಪಿಸಲಾಗುವುದು. 24 ರಾಜ್ಯಗಳ 250ಕ್ಕೂ ಹೆಚ್ಚು ಕುಶಲಕರ್ಮಿಗಳು ಈ ಮೇಳಕ್ಕೆ ಆಗಮಿಸಿ ತಮ್ಮ ಕಲೆಗಾರಿಕೆ ಪ್ರದರ್ಶಿಸಲಿದ್ದಾರೆ.

ಹರಿಯಾಣದ ಕುರುಕ್ಷೇತ್ರದಲ್ಲಿ ಗಮನಸೆಳೆಯುವ ದೀಪಾಲಂಕಾರ

ಡಿ.17ರಿಂದ 24ರವರೆಗೆ ಪ್ರಮುಖ ಕಾರ್ಯಕ್ರಮ:ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಕುರುಕ್ಷೇತ್ರದ ಬ್ರಹ್ಮಸರೋವರದ ತಟದಲ್ಲಿ ಡಿ.17ರಿಂದ 24ರವರೆಗೆ ಮುಖ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಲವು ರಾಜ್ಯಗಳ ಕಲಾವಿದರು ಆಗಮಿಸಿ ಕಲಾಪ್ರದರ್ಶನ ನೀಡಲಿದ್ದಾರೆ. ಈ ಅವಧಿಯಲ್ಲಿ, ಅಂತಾರಾಷ್ಟ್ರೀಯ ಗೀತಾ ಮಹೋತ್ಸವಕ್ಕೆ ಬರುವ ಜನರನ್ನು ಆಕರ್ಷಿಸುವ ಸಂಸ್ಕೃತಿಕ ಕಾರ್ಯಕ್ರಮಗಳನ್ನು ದೊಡ್ಡದಾಗಿ ಆಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ 8 ದಿನಗಳವರೆಗೆ ಕುರುಕ್ಷೇತ್ರ ಬ್ರಹ್ಮ ಸರೋವರದೊಳಗಿನ ಪುರುಷೋತ್ತಮ ಬಾಗ್‌ನಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ನಡೆಯುತ್ತವೆ. ಸುಮಾರು ಏಳು ರಾಜ್ಯಗಳ 71 ಕಲಾವಿದರು ತಮ್ಮ ವಿಶಿಷ್ಟ ಕಲೆಗಳನ್ನು ಪ್ರದರ್ಶಿಸಲಿದ್ದಾರೆ.

ಗೀತಾ ಮಹೋತ್ಸವದ ಹಿನ್ನೆಲೆ ವಿದ್ಯುತ್​ ದೀಪಾಲಂಕಾರ

ದೀಪೋತ್ಸವ ಮತ್ತು ಸಂತ ಸಮ್ಮೇಳನ: ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಕುರುಕ್ಷೇತ್ರ ಅಭಿವೃದ್ಧಿ ಮಂಡಳಿಯಿಂದ ಸಂತ ಸಮ್ಮೇಳನವನ್ನೂ ಆಯೋಜಿಸಲಾಗುವುದು. ಡಿಸೆಂಬರ್ 22ರಂದು ನಡೆಯಲಿರುವ ಈ ಸಮಾರಂಭದಲ್ಲಿ ಪ್ರಪಂಚದಾದ್ಯಂತದ ಸಂತರು ಮತ್ತು ಮಹಾತ್ಮರು ಈ ಸಮ್ಮೇಳನದಲ್ಲಿ ಭಾಗವಹಿಸಿ ಗೀತಾ ಮಹತ್ವವನ್ನು ತಿಳಿಸುತ್ತಾರೆ. ಡಿಸೆಂಬರ್ 23 ರಂದು ಕುರುಕ್ಷೇತ್ರ ಬ್ರಹ್ಮ ಸರೋವರದ ದಡದಲ್ಲಿ ದೀಪೋತ್ಸವ ಆಚರಿಸಲಾಗುತ್ತದೆ. ಬ್ರಹ್ಮಸರೋವರದಲ್ಲಿ ಒಂದು ಲಕ್ಷ ದೀಪಗಳನ್ನು ಹಚ್ಚಲಾಗುತ್ತದೆ. ಡಿಸೆಂಬರ್ 17ರಂದು ಉಪಾಧ್ಯಕ್ಷ ಜಗದೀಪ್ ಧನಖರ್ ಅವರು ಗೀತಾ ಪೂಜೆಯೊಂದಿಗೆ ಮಹೋತ್ಸವವನ್ನು ಪ್ರಾರಂಭಿಸುತ್ತಾರೆ.

ಅಂತರಾಷ್ಟ್ರೀಯ ಗೀತಾ ಜಯಂತಿ 2023: ಕುರುಕ್ಷೇತ್ರದಲ್ಲಿ ಗೀತಾ ಮಹೋತ್ಸವ ಹರಿಯಾಣ ರಾಜ್ಯಪಾಲರಿಂದ ಉದ್ಘಾಟನೆ

18 ಸಾವಿರ ಮಕ್ಕಳು ಒಟ್ಟಾಗಿ ಗೀತಾ ಮಂತ್ರ ಪಠಣ: ಅಂತಾರಾಷ್ಟ್ರೀಯ ಗೀತಾ ಮಹೋತ್ಸವದಲ್ಲಿ ಡಿ.23ರಂದು ಗೀತಾ ಜಯಂತಿ ದಿನದ ನೆನಪಿಗಾಗಿ 18,000 ಮಕ್ಕಳು ಒಟ್ಟಾಗಿ ಥೀಮ್ ಪಾರ್ಕ್‌ನಲ್ಲಿ ಗೀತಾ ಶ್ಲೋಕ ಪಠಿಸಲಿದ್ದಾರೆ. ಇದರೊಂದಿಗೆ ಹರಿಯಾಣ ಸರ್ಕಾರದ ಇಲಾಖೆಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಹರಿಯಾಣ ಸರ್ಕಾರದ ಇಲಾಖೆಗಳು ಮಾಡಿದ ಕಾರ್ಯಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ರೈತರು ತಮ್ಮ ಪ್ರದರ್ಶನ ಹಾಗೂ ವಿಜ್ಞಾನ ಮತ್ತು ಹೊಸ ಸ್ಟಾರ್ಟ್‌ಅಪ್‌ಗಳನ್ನು ಮಾಡುವ ಯುವಕರು ತಮ್ಮ ಸ್ಟಾರ್ಟ್‌ಅಪ್‌ಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಇದು ಜನರ ಆಕರ್ಷಣೆಯ ಕೇಂದ್ರವಾಗಿದೆ.

ಇದನ್ನೂ ಓದಿ:ಅಯೋಧ್ಯಾ ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ: ಕೊಹ್ಲಿ, ತೆಂಡೂಲ್ಕರ್ ಸೇರಿ 7 ಸಾವಿರ ವಿಐಪಿಗಳಿಗೆ ಆಹ್ವಾನ

ABOUT THE AUTHOR

...view details