ಕರ್ನಾಟಕ

karnataka

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೆರಿಗೆಗೆ ಯತ್ನಿಸಿದ ವೈದ್ಯರು.. ಬದುಕಲಿಲ್ಲ ಶಿಶು

By

Published : Sep 21, 2022, 7:42 PM IST

ತಮಿಳುನಾಡಿನ ಚೆಂಗಲ್‌ಪೇಟ್ ಜಿಲ್ಲೆಯ ಚುನಂಬೆಡು ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನವಜಾತ ಶಿಶು
ನವಜಾತ ಶಿಶು

ತಮಿಳುನಾಡು:32 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿರುವ ಘಟನೆ ಇಲ್ಲಿನ ಚೆಂಗಲ್‌ಪೇಟ್ ಜಿಲ್ಲೆಯ ಚುನಂಬೆಡು ಗ್ರಾಮದಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿರದ ವೈದ್ಯರು..ಪುಷ್ಪಾ ಎಂಬ ಮಹಿಳೆಯನ್ನು ಸೋಮವಾರ ತಮ್ಮ ಎರಡನೇ ಮಗುವಿನ ಹೆರಿಗೆಗಾಗಿ ಚುನಂಬೇಡು ಪಿಹೆಚ್‌ಸಿಗೆ ದಾಖಲಿಸಲಾಗಿತ್ತು. ಸಂಜೆ 6 ಗಂಟೆ ಸುಮಾರಿಗೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಆದರೆ ಈ ವೇಳೆ ಅಲ್ಲಿನ ವೈದ್ಯ ಡಾ ಆರ್ ಬಾಲು ಅವರು ಆಸ್ಪತ್ರೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ.

ಹಿಂದಿನ ಸ್ಕ್ಯಾನ್‌ನಲ್ಲಿ ಮಗು ಬ್ರೀಚ್ ಪ್ರೆಸೆಂಟೇಶನ್‌ನಲ್ಲಿದೆ ಎಂದು ತೋರಿಸಿದ್ದರಿಂದ (ಅಡಿ ಮೊದಲು) ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಮೂವರು ನರ್ಸ್‌ಗಳು ವೈದ್ಯರ ಸೂಚನೆಯ ಮೇರೆಗೆ ಹೆರಿಗೆಗೆ ಪ್ರಯತ್ನಿಸಿದರು.

ವಿಡಿಯೋ ಕರೆಯಲ್ಲಿ ಸೂಚನೆ ನೀಡಿದ ವೈದ್ಯರು..ದಾದಿಯರೊಂದಿಗೆ ವಿಡಿಯೋ ಕರೆಯಲ್ಲಿದ್ದ ವೈದ್ಯರು ಹಂತ-ಹಂತವಾಗಿ ಸೂಚನೆಗಳನ್ನು ನೀಡಿದರು ಎಂದು ವರದಿಯಾಗಿದೆ. ಆದರೆ ಇದು ಸಂಕೀರ್ಣವಾದ ಪ್ರಕರಣವಾದ್ದರಿಂದ ಅವರು ಭಯಭೀತರಾಗಿದ್ದಾರೆ. ಆದರೆ, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯಕೀಯ ಸಿಬ್ಬಂದಿ ಆಕೆಯನ್ನು ಮಧುರಾಂತಕಂನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬದ ಸದಸ್ಯರಿಗೆ ಸೂಚಿಸಿದ್ದಾರೆ.

ಆರೋಗ್ಯದಲ್ಲಿ ಸ್ಥಿರತೆ..ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಮಹಿಳೆ ಆಂಬ್ಯುಲೆನ್ಸ್‌ನಲ್ಲಿ ಸತ್ತ ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಸವ ಪ್ರಕ್ರಿಯೆಯಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಪುಷ್ಪಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಅವರ ಸ್ಥಿತಿ ಸ್ಥಿರವಾಗಿದೆ.

ಪ್ರಕರಣ ದಾಖಲು, ವೈದ್ಯರ ವರ್ಗಾವಣೆ..ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪುಷ್ಪಾ ಮತ್ತು ಅವರ ಪತಿ ಪಿಎಚ್‌ಸಿಗೆ ಬಂದಿದ್ದಾರೆ ಮತ್ತು ಅವರಿಗೆ ಹೆರಿಗೆ ನೋವು ಇಲ್ಲದ ಕಾರಣ, ಸ್ವಲ್ಪ ಸಮಯದ ನಂತರ ಹಿಂದಿರುಗುವಂತೆ ನರ್ಸ್‌ಗಳು ಸೂಚಿಸಿದ್ದಾರೆ. ಅವರು ಸಂಜೆ ಹಿಂದಿರುಗಿದಾಗ ವೈದ್ಯರು ಲಭ್ಯವಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯ..ಘಟನೆಯ ನಂತರ ಆಕೆಯ ಕುಟುಂಬಸ್ಥರು ಮತ್ತು ಸಂಬಂಧಿಕರು ಮಂಗಳವಾರ ಪ್ರತಿಭಟನೆ ನಡೆಸಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ಚುನಂಬೇಡು ಪೊಲೀಸರು ವೈದ್ಯನ ವಿರುದ್ಧ ಪ್ರಕರಣ ದಾಖಲಿಸಿದ್ದು, ಇದೀಗ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದಿಂದ ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

ಓದಿ:ಲಿಫ್ಟ್​ ನೆಪದಲ್ಲಿ ಬೈಕ್ ಸವಾರನಿಗೆ ವಿಷದ ಇಂಜೆಕ್ಷನ್ ಚುಚ್ಚಿದ ಆರ್​ಎಂಪಿ ವೈದ್ಯ: ಪತ್ನಿ ಫೋನ್​ ಕಾಲ್​ನಲ್ಲಿತ್ತು ಕೊಲೆ ರಹಸ್ಯ!

ABOUT THE AUTHOR

...view details