ಕರ್ನಾಟಕ

karnataka

ETV Bharat / bharat

ಕೋವಿಡ್​ ಲಸಿಕೆಯ ಲಭ್ಯತೆ ಕುರಿತು ಐದು ಆತಂಕಗಳನ್ನು ಹಂಚಿಕೊಂಡ ಭಾರತ - ವಿಶ್ವ ಸಂಸ್ಥೆ ಭದ್ರತಾ ಮಂಡಳಿ ಸಭೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಉದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್​. ಜೈಶಂಕರ್, ಕೋವಿಡ್​ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ಆಶಾಭಾವನೆ ವ್ಯಕ್ತಪಡಿಸಿದರು. ಅಲ್ಲದೇ, ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಭಾರತ ಹಂಚಿಕೊಳ್ಳಲು ಬಯಸುವ ಐದು ಆತಂಕಗಳನ್ನು ಮಂಡಿಸಿದರು.

United Nations Security Council Confrence
ಕೋವಿಡ್​ ಲಸಿಕೆಯ ಕುರಿತು ಆತಂಕ ವ್ಯಕ್ತಪಡಿಸಿದ ಭಾರತ

By

Published : Feb 18, 2021, 3:54 PM IST

ನವದೆಹಲಿ : ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಕೋವಿಡ್ -19 ಲಸಿಕೆಗಳ ಲಭ್ಯತೆ, ಬಳಸಿಕೊಳ್ಳುವಿಕೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮುದಾಯ ಎದುರಿಸುತ್ತಿರುವ ಸವಾಲುಗಳಿಗೆ ಸಂಬಂಧಿಸಿದ ಐದು ಆತಂಕಗಳನ್ನು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ ) ಯಲ್ಲಿ ಭಾರತ ಮಂಡಿಸಿದೆ.

ವಿದೇಶಿ ಗಣ್ಯರ ಸಮ್ಮುಖದಲ್ಲಿ 2523 (2020) ನಿರ್ಣಯದ ಅನುಷ್ಠಾನದ ಕುರಿತು ಮುಕ್ತ ಚರ್ಚೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಯುಎನ್ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, ಕೋವಿಡ್​ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ಸಚಿವ ಜೈ ಶಂಕರ್​ ಆಶಾಭಾವನೆ ವ್ಯಕ್ತಪಡಿಸಿದರು. ಅಲ್ಲದೇ, ಭಾರತ ಹಂಚಿಕೊಳ್ಳಲು ಬಯಸುವ ಐದು ವಿಷಯಗಳನ್ನು ಮಂಡಿಸಿದರು.

ಅವುಗಳಲ್ಲಿ ಮೊದಲನೆಯದು, ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮನ್ವಯದ ಕೊರತೆಯು ಸಂಘರ್ಷ ಪೀಡಿತ ಪ್ರದೇಶಗಳು ಮತ್ತು ಬಡ ದೇಶಗಳಿಗೆ ಸವಾಲಾಗಿದೆ. ಅಂತಾರಾಷ್ಟ್ರೀಯ ರೆಡ್​ ಕ್ರಾಸ್​ ಸಂಸ್ಥೆಯ ಮಾಹಿತಿ ಪ್ರಕಾರ ಆ ಪ್ರದೇಶಗಳಲ್ಲಿ 60 ದಶಲಕ್ಷಕ್ಕೂ ಹೆಚ್ಚು ಜನರು ಅಪಾಯದಲ್ಲಿದ್ದಾರೆ.

ಎರಡನೇಯದಾಗಿ, ಪ್ರಸ್ತುತ, ಜಾಗತಿಕವಾಗಿ ಲಸಿಕೆಗಳ ವಿತರಣೆಯಲ್ಲಿ ಅಸಮಾನತೆಯಿದೆ, ಕೋವಿಡ್​ ಪ್ರಭಾವ ತಗ್ಗಿಸಲು ಲಸಿಕೆಗಳ ಬಳಕೆಯಲ್ಲಿ ಸಮಾನತೆಯು ಮುಖ್ಯವಾಗಿದೆ.

ಓದಿ : ಕಪ್ಪು ವರ್ಣೀಯ ಮಹಿಳೆಯನ್ನು ಸರಕಾರಿ ಮೆಡಿಕೇರ್ ಸಂಸ್ಥೆ ಮುಖ್ಯಸ್ಥೆಯಾಗಿ ಆಯ್ಕೆ ಮಾಡಿದ ಬೈಡನ್

ಮೂರನೆಯದಾಗಿ, ಈ ಅಸಮಾನತೆಯನ್ನು ಹೋಗಲಾಡಿಸಲು ಕೋವಿಡ್​ ಲಸಿಕೆ ಅಭಿಯಾನದ ಚೌಕಟ್ಟಿನೊಳಗೆ ಸಹಕಾರ ಅಗತ್ಯ. ಅದು, ವಿಶ್ವದ ಬಡ ರಾಷ್ಟ್ರಗಳಿಗೆ ಲಸಿಕೆ ಪಡೆಯುವಲ್ಲಿ ಸಹಕರಿಸಲಿದೆ.

ನಾಲ್ಕನೆಯದು ಆರ್ಥಿಕ ದೃಷ್ಟಿಕೋನದಿಂದ ಲಸಿಕೆ ವಿತರಣೆ ವೆಚ್ಚವು ಹೆಚ್ಚಳವಾಗಿದೆ. ಲಸಿಕೆ ಅಸಮಾನತೆ ಪರಿಹರಿಸಲು ಅಂತಾರಾಷ್ಟ್ರೀಯ ಸಮುದಾಯವು ವಿಫಲವಾದರೆ ಸುಮಾರು 9.9 ಟ್ರಿಲಿಯನ್ ಡಾಲರ್​ಗಳಷ್ಟು ನಷ್ಟ ಅನುಭವಿಸುತ್ತದೆ ಎಂದು ಇಂಟರ್​​​ ನ್ಯಾಷನಲ್​ ಚೇಂಬರ್ ಆಫ್ ಕಾಮರ್ಸ್ ಭವಿಷ್ಯ ನುಡಿದಿದೆ.

ಐದನೆಯದಾಗಿ, ಸಾಂಪ್ರದಾಯಿಕ ರೋಗ ನಿರೋಧಕ ಕಾರ್ಯಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ. ಕೋವಿಡ್​ ಸಾಂಕ್ರಾಮಿಕದಿಂದ ಕನಿಷ್ಠ 68 ದೇಶಗಳಲ್ಲಿ ಸುಮಾರು 80 ಮಿಲಿಯನ್ ಮಕ್ಕಳು ದಡಾರ, ಪೋಲಿಯೊ ಅಪಾಯಕ್ಕೆ ಒಳಗಾಗುತ್ತಾರೆ ಎಂದು ಸಚಿವರು ಒತ್ತಿ ಹೇಳಿದರು.

ABOUT THE AUTHOR

...view details