ಕರ್ನಾಟಕ

karnataka

ETV Bharat / bharat

ವಿಶ್ವಸಂಸ್ಥೆಯ ಶಾಂತಿಪಾಲನೆಗೆ ನೀಡಿದ ಕೊಡುಗೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ : ನಾಗರಾಜ್ ನಾಯ್ಡು - ವಿಶ್ವಸಂಸ್ಥೆ ಭದ್ರತಾ ಮಂಡಳಿ

ಯುಎನ್ ಶಾಂತಿಪಾಲನೆ ಬಗ್ಗೆ ಭಾರತದ ಮಾರ್ಗವನ್ನು ಎತ್ತಿ ತೋರಿಸಿದ ನಾಯ್ಡು, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ವಿಶ್ವಸಂಸ್ಥೆಯ ಸಂಘಟನೆಯ ಸ್ಥಿರೀಕರಣ ಕಾರ್ಯಾಚರಣೆಯ ಭಾಗವಾಗಿರುವ ಭಾರತೀಯ ಪಡೆಗಳು ಸ್ಫೋಟ ಸಂಭವಿಸಿದಾಗ ನಾಗರಿಕರು ಮತ್ತು ವಿಶ್ವಸಂಸ್ಥೆಯ ಆಸ್ತಿಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ..

un
un

By

Published : May 25, 2021, 6:34 PM IST

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೋಮವಾರ ವಿಶ್ವಸಂಸ್ಥೆ ಶಾಂತಿಪಾಲಕರ ಸುರಕ್ಷತೆ ಮತ್ತು ಭದ್ರತೆ ಕುರಿತು ನಡೆದ ಚರ್ಚೆಯಲ್ಲಿ ಭಾರತವು ಯುಎನ್ ಶಾಂತಿಪಾಲನೆಯನ್ನು ಬಲಪಡಿಸಲು ಹಲವು ರೀತಿಯಲ್ಲಿ ಕೊಡುಗೆ ನೀಡಿದೆ ಎಂದು ಹೇಳಿದರು.

ಚರ್ಚೆಯಲ್ಲಿ ಮಾತನಾಡಿದ ಯುಎನ್‌ನ ಭಾರತದ ಉಪ ಖಾಯಂ ಪ್ರತಿನಿಧಿ ನಾಗರಾಜ್ ನಾಯ್ಡು ಅವರು, ಸಾಂಕ್ರಾಮಿಕ ಸಮಯದಲ್ಲಿ ಯುಎನ್ ಶಾಂತಿಪಾಲಕರು ವಹಿಸಿದ ಪಾತ್ರವನ್ನು ಶ್ಲಾಘಿಸಿದರು.

ಇದು ಶಾಂತಿಪಾಲನೆಗೆ ತೀವ್ರ ಸವಾಲುಗಳನ್ನು ಒಡ್ಡಿದೆ. "ಈ ವರ್ಷದ ಆರಂಭದಲ್ಲಿ, ಇದು 200,000 ಡೋಸ್ ಮೇಡ್ ಇನ್ ಇಂಡಿಯಾ ಕೋವಿಡ್​ ಲಸಿಕೆಗಳನ್ನು ವಿತರಿಸಿತು, ಇದು 140,000 ಕ್ಷೇತ್ರ ಸಿಬ್ಬಂದಿಗೆ ಲಸಿಕೆ ನೀಡಲು ಸಹಾಯ ಮಾಡಿದೆ" ಎಂದು ಅವರು ಹೇಳಿದರು.

ಸಾಂಕ್ರಾಮಿಕ ಸಮಯದಲ್ಲಿ ದಕ್ಷಿಣ ಸುಡಾನ್‌ನಲ್ಲಿನ ವಿಶ್ವಸಂಸ್ಥೆಯ ಮಿಷನ್ (ಯುಎನ್‌ಎಂಐಎಸ್ಎಸ್) ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ (ಮೊನುಸ್ಕೊ) ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ ಸ್ಟೆಬಿಲೈಸೇಶನ್ ಮಿಷನ್‌ ಅಡಿ ತನ್ನ ಆಸ್ಪತ್ರೆಗಳನ್ನು ನವೀಕರಿಸುವ ಮೂಲಕ ಪ್ರಧಾನ ಕಾರ್ಯದರ್ಶಿಯ ಕರೆಗೆ ಭಾರತ ಸುಲಭವಾಗಿ ಉತ್ತರಿಸಿದೆ" ಎಂದು ನಾಗರಾಜ್ ನಾಯ್ಡು ಹೇಳಿದರು.

ನಾವು ಇಂದು ಮಾತನಾಡುವಾಗಲೂ, ಗೋಮಾ (ಡಿಆರ್​​ಸಿ)ಯಲ್ಲಿ ಬೀಡುಬಿಟ್ಟಿರುವ ಭಾರತೀಯ ಶಾಂತಿಪಾಲನಾ ದಳವು ನಾಯರ್ಗೊಂಗೊ ಪರ್ವತದ ಸ್ಫೋಟದ ನಂತರ ನಾಗರಿಕರ ಜೀವವನ್ನು ಉಳಿಸುತ್ತಿದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ನಾಯ್ಡು ಮತ್ತಷ್ಟು ಪುನರುಚ್ಚರಿಸಿದರು.

ಯುಎನ್ ಶಾಂತಿಪಾಲನೆ ಬಗ್ಗೆ ಭಾರತದ ಮಾರ್ಗವನ್ನು ಎತ್ತಿ ತೋರಿಸಿದ ನಾಯ್ಡು, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ವಿಶ್ವಸಂಸ್ಥೆಯ ಸಂಘಟನೆಯ ಸ್ಥಿರೀಕರಣ ಕಾರ್ಯಾಚರಣೆಯ ಭಾಗವಾಗಿರುವ ಭಾರತೀಯ ಪಡೆಗಳು ಸ್ಫೋಟ ಸಂಭವಿಸಿದಾಗ ನಾಗರಿಕರು ಮತ್ತು ವಿಶ್ವಸಂಸ್ಥೆಯ ಆಸ್ತಿಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.

ಮೊನುಸ್ಕೊ ಭಾರತದ 2200 ಸಿಬ್ಬಂದಿ ಸೇರಿ 14,000 ಮಿಲಿಟರಿ ಸಿಬ್ಬಂದಿಯನ್ನು ಹೊಂದಿದೆ. ಇದಕ್ಕೆ ಅತೀ ಹೆಚ್ಚು ಸೈನಿಕರನ್ನು ಒದಗಿಸುತ್ತಿರುವ ದೇಶ ಭಾರತ ಎಂದು ಅವರು ಹೇಳಿದರು.

ಯುಎನ್ ಶಾಂತಿಪಾಲನೆಗಾಗಿ ಭಾರತವು 64 1.64 ಮಿಲಿಯನ್ ಕೊಡುಗೆ ನೀಡಿದೆ ಮತ್ತು ಆಗಸ್ಟ್​​ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಲಿದೆ.

ಅಲ್ಲದೆ, 2000 ರಲ್ಲಿ ಸ್ಥಾಪಿಸಲಾದ ಭಾರತದ ಯುಎನ್ ಶಾಂತಿಪಾಲನಾ ಕೇಂದ್ರವು ಯುಎನ್ ಶಾಂತಿಪಾಲಕರಿಗೆ ಹೊಸ ತರಬೇತಿ ಮಾಡ್ಯೂಲ್​​ಗಳಿಗಾಗಿ ಸಿ 4 ಐಎಸ್ಆರ್ ಅಕಾಡೆಮಿ ಫಾರ್ ಪೀಸ್ ಆಪರೇಶನ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಿದೆ.

ಈ ವರ್ಷದ ಜನವರಿಯಲ್ಲಿ 15 ರಾಷ್ಟ್ರಗಳನ್ನೊಳಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ತನ್ನ ಎರಡನೇ ಅವಧಿಯನ್ನು ಪ್ರಾರಂಭಿಸಿದೆ.

ಅಂದಿನಿಂದ, ಭಾರತವು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಸೇರಿ ಒಟ್ಟಾರೆ ವಿಶ್ವದ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳಿಗೆ ಸಮಗ್ರ ಪರಿಹಾರವನ್ನು ತರಲು ತನ್ನ ಪ್ರಯತ್ನವನ್ನು ಮಾಡುತ್ತಿದೆ.

ಭಯೋತ್ಪಾದನೆ, ಜಾಗತಿಕ ಭದ್ರತೆ ಮತ್ತು ಮಾನವೀಯತೆಗೆ ಅಪಾಯಕಾರಿಯಾದ ಮಾನವ ಹಕ್ಕುಗಳ ಉಲ್ಲಂಘನೆಯಂತಹ ವಿಷಯಗಳ ವಿರುದ್ಧ ಧ್ವನಿ ಎತ್ತಲು ಭಾರತ ಬದ್ಧವಾಗಿದೆ.

ಆಗಸ್ಟ್ 2021ರಲ್ಲಿ ಭಾರತ ಯುಎನ್‌ಎಸ್‌ಸಿ ಅಧ್ಯಕ್ಷರಾ ರಾಷ್ಟ್ರವಾಗಲಿದ್ದು, 2022 ರಲ್ಲಿ ಮತ್ತೆ ಒಂದು ತಿಂಗಳ ಕಾಲ ಪರಿಷತ್ತಿನ ಅಧ್ಯಕ್ಷತೆ ವಹಿಸಲಿದೆ.

ABOUT THE AUTHOR

...view details