ಕರ್ನಾಟಕ

karnataka

ETV Bharat / bharat

ಇಂದು 'ಬುದ್ಧ ನಸುನಕ್ಕ ದಿನ': ಪರಮಾಣು ಅಣ್ವಸ್ತ್ರ ಪರೀಕ್ಷೆಗೆ 25 ನೇ ವರ್ಷಾಚರಣೆ - ಪರಮಾಣು ಅಣ್ವಸ್ತ್ರಗಳ ಪರೀಕ್ಷೆ

1998 ರ ಮೇ 11 ರಂದು ಭಾರತ ಪರಮಾಣು ಅಣ್ವಸ್ತ್ರಗಳ ಪರೀಕ್ಷೆ ನಡೆಸಿತ್ತು. ಇದನ್ನು ಜಗತ್ತಿಗೇ ಗೊತ್ತಾಗದಂತೆ ಗೌಪ್ಯವಾಗಿ ನಡೆಸಲಾಗಿತ್ತು. ದೇಶದ ಇತಿಹಾಸದಲ್ಲಿ ಈ ಮಹತ್ವದ ಸಾಧನೆ ಚಿರಸ್ಥಾಯಿಯಾಗಿ ಉಳಿದಿದೆ.

ಪರಮಾಣು ಅಣ್ವಸ್ತ್ರ ಪರೀಕ್ಷೆ
ಪರಮಾಣು ಅಣ್ವಸ್ತ್ರ ಪರೀಕ್ಷೆ

By

Published : May 11, 2023, 2:25 PM IST

ಜೈಸಲ್ಮೇರ್:ದೇಶದ ಇತಿಹಾಸದಲ್ಲಿ ಮೇ 11 ರ ದಿನವ ಯಾವಾಗಲೂ ವಿಶೇಷ ಕಾರಣಕ್ಕಾಗಿ ನೆನಪಿನಲ್ಲಿರುತ್ತದೆ. 1998 ರ ಈ ದಿನದಂದು ಪೋಖ್ರಾನ್‌ನಲ್ಲಿ ಮೂರು ಪರಮಾಣು ಬಾಂಬ್​ಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಭಾರತದ ಈ ನಡೆಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಕಾರಣ ಭಾರತ ನಡೆಸುವ ಪರಮಾಣು ಪರೀಕ್ಷೆಯ ಸುಳಿವು ನೀಡದೇ ಅಷ್ಟು ಗೌಪ್ಯವಾಗಿ ನಡೆಸಲಾಗಿತ್ತು.

ಭಾರತ ನಡೆಸಿದ ಪರಮಾಣು ಯಶಸ್ವಿ ಪರೀಕ್ಷೆಯನ್ನು ಅಮೆರಿಕದ ಸಿಐಎ ಕೂಡ ಒಪ್ಪಿಕೊಂಡಿತ್ತು. ಇದರ ನಂತರ, ಪ್ರತಿ ವರ್ಷ ಮೇ 11 ಅನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. 1998 ರ ಪರಮಾಣು ಪರೀಕ್ಷೆಯ ಫಲಿತಾಂಶವೇ ಇಂದು ಭಾರತ ಇಂಟರ್​​ ನ್ಯಾಷನಲ್ ಥರ್ಮೊನ್ಯೂಕ್ಲಿಯರ್ ಎಕ್ಸ್​ಪರಿಮೆಂಟಲ್ ರಿಯಾಕ್ಟರ್(ಐಟಿಇಆರ್)​ ನಲ್ಲಿ ಭಾಗಿಯಾಯಿತು. ಪರಮಾಣು ತಂತ್ರಜ್ಞಾನದ ವಿಷಯದಲ್ಲಿ ದೇಶವು ಪ್ರಪಂಚದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ.

ಈ ದಿನ ಏಕೆ ವಿಶೇಷ?:ಇದಕ್ಕೂ ಮೊದಲು ಅಂದರೆ 1995ರಲ್ಲಿ ನಡೆದ ಪರಮಾಣು ಬಾಂಬ್ ಪರೀಕ್ಷೆ ವಿಫಲವಾಗಿತ್ತು. ಅಮೆರಿಕದ ಉಪಗ್ರಹ ಮತ್ತು ಗುಪ್ತಚರ ಸಂಸ್ಥೆಗಳು ಭಾರತದ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡಿತ್ತು. ಅದಕ್ಕಾಗಿಯೇ 1998 ರ ಪರೀಕ್ಷೆಯನ್ನು ತೀರಾ ರಹಸ್ಯವಾಗಿ ನಡೆಸಲಾಯಿತು. ಪ್ರಪಂಚದ ಎಲ್ಲಾ ಗುಪ್ತಚರ ಸಂಸ್ಥೆಗಳು ಭಾರತದ ಮೇಲೆ ಹದ್ದಿನಕಣ್ಣ ಇಟ್ಟಿದ್ದವು. ಆದರೂ ಈ ಕಾರ್ಯಾಚರಣೆಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಮೂರು ಅಣ್ವಸ್ತ್ರಗಳನ್ನು ಪರೀಕ್ಷೆ ಮಾಡಿದ ಬಳಿಕ ಎಲ್ಲ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡಿದ್ದವು. ಇದಾದ ಬಳಿಕ ದೇಶ ಜಗತ್ತಿನ ಪರಮಾಣು ಶಕ್ತಿ ರಾಷ್ಟ್ರವಾಯಿತು.

ಅತ್ಯಂತ ಗೌಪ್ಯ ಕಾರ್ಯಾಚರಣೆ:ಪರಮಾಣು ಪರೀಕ್ಷೆ ನಡೆಸಲು ಭಾರತ ಉದ್ದೇಶಿಸಿದ್ದಾಗ ಅತಿ ಗೌಪ್ಯತೆ ಕಾಪಾಡಲಾಗಿತ್ತು. ದೇಶದ ವಿಜ್ಞಾನಿಗಳು ಬೇರೆ ಉಪಗ್ರಹದಿಂದಲೂ ಇದನ್ನು ಗುರುತಿಸಲು ಅಸಾಧ್ಯವಾಗುವಂತೆ ತಂತ್ರ ರೂಪಿಸಿದ್ದರು. ಎಲ್ಲಾ ವಿಜ್ಞಾನಿಗಳಿಗೆ ಕೋಡ್​​ ಹೆಸರುಗಳನ್ನು ನೀಡಲಾಯಿತು. ಅಬ್ದುಲ್ ಕಲಾಂ ಅವರಿಗೆ ಮೇಜರ್ ಜನರಲ್ ಪೃಥ್ವಿರಾಜ್ ಎಂಬ ಹೆಸರನ್ನು ನೀಡಲಾಗಿತ್ತು. ಭಾರತವು ಮೇ 11 ರಂದು ಮಧ್ಯಾಹ್ನ 3:45 ಕ್ಕೆ ಮೂರು ಪರಮಾಣು ಅಣ್ವಸ್ತ್ರಗಳ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು.

ಇದರೊಂದಿಗೆ 24 ವರ್ಷಗಳ ನಂತರ ಭಾರತ ಮತ್ತೊಮ್ಮೆ ಪರಮಾಣು ಪರೀಕ್ಷೆಯ ಮೂಲಕ ಜಗತ್ತನ್ನು ಬೆರಗುಗೊಳಿಸಿತ್ತು. ನಂತರ ಮೇ 13 ರಂದು ಮತ್ತೆರಡು ಪರೀಕ್ಷೆಗಳನ್ನು ನಡೆಸಲಾಯಿತು. ಸ್ಫೋಟದ ನಂತರ, ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅದನ್ನು ಜಗತ್ತಿಗೆ ತಿಳಿಸಿದಾಗ, ಎಲ್ಲರೂ ಬೆಚ್ಚಿಬಿದ್ದರು. ಇದಾದ ನಂತರ, ಅಮೆರಿಕ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿತು. ಆದರೆ, ಅದ್ಯಾವುದೂ ದೇಶದ ಮೇಲೆ ಪರಿಣಾಮ ಬೀರಲಿಲ್ಲ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಲ್ಲದ ರಾಷ್ಟ್ರವೊಂದು ನಡೆಸಿದ ಮೊಟ್ಟ ಮೊದಲ ದೃಢೀಕೃತ ಪರಮಾಣು ಪರೀಕ್ಷೆ ಇದಾಗಿತ್ತು ಎಂಬುದು ವಿಶೇಷ.

ಓದಿ:Google Bard ಭಾರತದಲ್ಲಿ ಕಾರ್ಯಾರಂಭ: ChatGPT ಗೆ ಗೂಗಲ್ ಪೈಪೋಟಿ

ABOUT THE AUTHOR

...view details