ಕರ್ನಾಟಕ

karnataka

ETV Bharat / bharat

ಸ್ವಾತಂತ್ರ್ಯೋತ್ಸವ: ಶೌರ್ಯ ಮೆರೆದ ಯೋಧರಿಗೆ ಅಶೋಕ್​, ಕೀರ್ತಿ, ಶೌರ್ಯ ಚಕ್ರ ಘೋಷಣೆ - ಅಶೋಕ ಚಕ್ರ ಘೋಷಣೆ

ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಾಗಿಟ್ಟಿರುವ ವೀರ ಯೋಧರಿಗೆ ಕೇಂದ್ರ ಸರ್ಕಾರ ವಿವಿಧ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದೆ.

Ashok Chakra
Ashok Chakra

By

Published : Aug 14, 2021, 3:30 PM IST

ನವದೆಹಲಿ: ಗಡಿಯಲ್ಲಿ ಭಯೋತ್ಪಾದಕರ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಮೇಜರ್​ ಅರುಣ್ ಕುಮಾರ್ ಪಾಂಡೆ ಅವರಿಗೆ ಶೌರ್ಯ ಚಕ್ರ ನೀಡಿ, ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷ ಜೂನ್​ ತಿಂಗಳಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರ ದಾಳಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಇವರ ಶೌರ್ಯಕ್ಕೆ ಮೆಚ್ಚಿ ಇದೀಗ ಮಹತ್ವದ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಉಳಿದಂತೆ ಎಎಸ್​ಐ ಬಾಬು ರಾಮ್​ ಅವರಿಗೆ ಅಶೋಕ್​ ಚಕ್ರ, ಕಾನ್ಸ್​ಟೇಬಲ್​ ಅಲ್ತಾಫ್​ ಹುಸೇನ್​ ಭಟ್​ ಅವರಿಗೆ ಕೀರ್ತಿ ಚಕ್ರ ಹಾಗೂ ಎಸ್​​ಪಿಒ ಶಹಬಾಜ್​​ ಅಹ್ಮದ್​ ಅವರಿಗೆ ಶೌರ್ಯ ಚಕ್ರ ಘೋಷಣೆ ಮಾಡಲಾಗಿದ್ದು, ಎಲ್ಲರಿಗೂ ಮರಣೋತ್ತರವಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ.

ಇದನ್ನೂ ಓದಿರಿ: ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 21 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

ಇತರ ಯೋಧರ ಜೀವ ಉಳಿಸಿದ್ದಕ್ಕಾಗಿ ಹಾಗೂ ಓರ್ವ ಉಗ್ರನನ್ನ ಹೊಡೆದು ಹಾಕಿದ್ದಕ್ಕಾಗಿ ಕ್ಯಾಪ್ಟನ್​​​ ಅಶುತೋಷ್​ ಕುಮಾರ್​​ (18 ಮದ್ರಾಸ್​ ರೆಜಿಮೆಂಟ್​ನ ಕ್ಯಾಪ್ಟನ್​) ಅವರಿಗೆ ಶೌರ್ಯ ನೀಡಲಾಗಿದೆ. ಕಳೆದ ವರ್ಷ ನವೆಂಬರ್ನಲ್ಲಿ ಜಮ್ಮು- ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆ ವೇಳೆ ಸೇನಾ ತುಕಡಿ ಮುನ್ನಡೆಸಿದ್ದರು.

ABOUT THE AUTHOR

...view details