ಕರ್ನಾಟಕ

karnataka

ವ್ಯಾಕ್ಸಿನೇಷನ್​ ಆದ್ಯತೆ ಪಟ್ಟಿಯಲ್ಲಿ ಮಾಧ್ಯಮದವರನ್ನೂ ಸೇರಿಸಿ: ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದ ಸಂಸದ

By

Published : Jan 17, 2021, 7:10 AM IST

ಸಾಂಕ್ರಾಮಿಕ ಭೀತಿಯಲ್ಲೂ ಶ್ರಮಿಸುತ್ತಿರುವ ಮಾಧ್ಯಮದವರನ್ನೂ ಕೋವಿಡ್​ ಲಸಿಕೆ ಪಡೆಯಲು ಆದ್ಯತೆಯ ವಿಭಾಗದಲ್ಲಿ ಸೇರಿಸಿಕೊಳ್ಳಬೇಕೆಂದು ಬಿಜೆಪಿ ಸಂಸದ ಶಂಕರ್ ಲಾಲ್ವಾನಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರನ್ನು ಕೋರಿದ್ದಾರೆ.

Include media persons in priority list for vaccination
ವ್ಯಾಕ್ಸಿನೇಷನ್​ ಆದ್ಯತೆಯ ಪಟ್ಟಿಯಲ್ಲಿ ಮಾಧ್ಯಮದವರನ್ನೂ ಸೇರಿಸಿ:

ಇಂದೋರ್ (ಮಧ್ಯಪ್ರದೇಶ): ದೇಶಾದ್ಯಂತ ಕೊರೊನಾ ವಾರಿಯರ್ಸ್​ಗೆ ಕೋವಿಡ್ ಲಸಿಕೆ ವಿತರಣೆ ಕಾರ್ಯ ಪ್ರಾರಂಭವಾಗಿದ್ದು, ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ಶ್ರಮಿಸಿದ ಮಾಧ್ಯಮದವರನ್ನೂ ಆದ್ಯತೆಯ ವಿಭಾಗದಲ್ಲಿ ಸೇರಿಸಿಕೊಳ್ಳುವಂತೆ ಬಿಜೆಪಿ ಮುಖಂಡ ಸಂಸದ ಲಾಲ್ವಾನಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರನ್ನು ಒತ್ತಾಯಿಸಿದ್ದಾರೆ.

"ಕೋವಿಡ್​ನ ಕಠಿಣ ಸಮಯಲ್ಲಿ ಮಾಧ್ಯಮ ವ್ಯಕ್ತಿಗಳು ಸಹ ಶ್ರಮಿಸುತ್ತಿದ್ದಾರೆ. ಅವರಿಗೆ ಕೊರೊನಾ ಲಸಿಕೆಯನ್ನು ಆದ್ಯತೆಯ ಮೇರೆಗೆ ಒದಗಿಸುವಂತೆ ನಾನು ವಿನಂತಿಸುತ್ತೇನೆ, ಇದರಿಂದ ಅವರು ಯಾವುದೇ ಆತಂಕವಿಲ್ಲದೆ ತಮ್ಮ ಕೆಲಸವನ್ನು ಮುಂದುವರಿಸಬಹುದು" ಎಂದು ಇಂದೋರ್‌ನ ಸಂಸದ ಲಾಲ್ವಾನಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ ಲಸಿಕೆ ನೀಡುವಲ್ಲಿ ಭಾರತವು ಒಂದು ಉದಾಹರಣೆ ನೀಡಿದೆ. ಮುಂಚೂಣಿ ಕಾರ್ಮಿಕರಿಗೆ ದೇಶಾದ್ಯಂತ ಲಸಿಕೆ ಪ್ರಾರಂಭವಾದ ಕಾರಣ ನಾನು ನಿಮ್ಮನ್ನು ಅಭಿನಂದಿಸುತ್ತೇನೆ" ಎಂದು ಎಂದಿದ್ದಾರೆ.

ಇಡೀ ಪ್ರಪಂಚವನ್ನೇ ಸಂಕಷ್ಟಕ್ಕೆ ದೂಡಿದ ಮಹಾಮಾರಿ ಕೊರೊನಾಗೆ ಭಾರತದಲ್ಲಿ ಲಸಿಕೆಗಳು ಸಿದ್ಧವಾಗಿದ್ದು, ವಿಶ್ವದ ಅತಿದೊಡ್ಡ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದ್ದಾರೆ.

ABOUT THE AUTHOR

...view details