ಕರ್ನಾಟಕ

karnataka

ಈ ಯುವತಿ ವರಿಸಿದ್ದು ಅಂತಿಂಥ ಗಂಡನ್ನಲ್ಲ, ಕೇಳಿದರೆ ಅಚ್ಚರಿಯಾಗೋದು ಪಕ್ಕಾ!

By

Published : Jul 24, 2023, 10:21 PM IST

Updated : Jul 24, 2023, 10:27 PM IST

ಉತ್ತರಪ್ರದೇಶದ ಝಾನ್ಸಿಯಲ್ಲಿ ಯುವತಿಯೊಬ್ಬಳು ಶಿವಲಿಂಗವನ್ನು ವಿವಾಹವಾಗಿ ಅಚ್ಚರಿ ಮೂಡಿಸಿದ್ದಾಳೆ. ಪರಶಿವನ ಭಕ್ತೆಯಾದ ಈಕೆ ಇಚ್ಛಾಧಾರಿ ಶಿವನನ್ನೇ ಪತಿಯನ್ನಾಗಿ ಸ್ವೀಕರಿಸಿದ್ದಾಳೆ.

ಶಿವನ ವಿವಾಹವಾದ ಯುವತಿ
ಶಿವನ ವಿವಾಹವಾದ ಯುವತಿ

ಝಾನ್ಸಿ(ಉತ್ತರಪ್ರದೇಶ) :ತನ್ನ ಗಂಡ ಹೀಗಿರಬೇಕು, ಹಾಗಿರಬೇಕು ಅಂಥ ಈಗಿನ ಯುವತಿಯರು ಕನಸು ಕಾಣೋದು ಸಹಜ. ಅದರಲ್ಲಿ ಒಂದು ಹೆಚ್ಚು ಕಮ್ಮಿಯಾದರೂ ಮದುವೆಯನ್ನೇ ತಿರಸ್ಕರಿಸುವವರೂ ಉಂಟು. ಆದರೆ, ಇಲ್ಲೊಬ್ಬ ಯುವತಿಯ ಮದುವೆಯನ್ನು ನೋಡಿದರೆ ಅಚ್ಚರಿಯಾಗೋದು ಪಕ್ಕಾ. ಆಕೆ ವರಿಸಿರುವ ಗಂಡು ಬೇರಾರೂ ಅಲ್ಲ ಸಾಕ್ಷಾತ್​ ಆ ಪರಿಶಿವನೇ..!

ಇದೇನಪ್ಪಾ ವಿಚಿತ್ರ ಅಂತೀರಾ? ನಿಜ, ಉತ್ತರಪ್ರದೇಶದ ಝಾನ್ಸಿ ನಗರದ ನಿವಾಸಿಯಾದ ಗೋಲ್ಡಿ ಎಂಬ ಯುವತಿಯೇ ಈ ಅಚ್ಚರಿ ಮದುವೆಯ ಮಧುವಣಗಿತ್ತಿ. ಈಕೆ ಮದುವೆಯಾಗಿದ್ದು ಶಿವಲಿಂಗವನ್ನು. ಶಿವನನ್ನೇ ತನ್ನ ಪತಿಯೆಂದು ಆಕೆ ಸ್ವೀಕರಿಸಿದ್ದಾಳೆ. ಈ ವಿಚಿತ್ರ, ವಿಶೇಷ ಮದುವೆ ಈಗ ಚರ್ಚಾ ವಿಷಯವಾಗಿದೆ.

ಏನಿದು ಶಿವ- ಗೋಲ್ಡಿ ವಿವಾಹೋತ್ಸವ:ಈ ವಿವಾಹ ಜುಲೈ 23(ಭಾನುವಾರ) ರಂದು ನಡೆದಿದೆ. ಹೆತ್ತವರು, ಬಂಧು ಬಾಂಧವರ ಸಮ್ಮುಖದಲ್ಲಿ ಎಲ್ಲ ವಿವಾಹಗಳಂತೆಯೇ ಅದ್ಧೂರಿಯಾಗಿ ನಡೆದಿದೆ. ಶಿವಲಿಂಗ ಮತ್ತು ಯುವತಿಯನ್ನು ರಥದ ಮೇಲೆ ಬೀದಿ ಉದ್ದಕ್ಕೂ ಮೆರವಣಿಗೆ ಮಾಡಲಾಗಿದೆ. ಜನರು ಅಕ್ಷತೆ ಹಾಕಿ ಆಶೀರ್ವದಿಸಿದ್ದಾರೆ.

ಆಧ್ಯಾತ್ಮಿಕ ಸಂಘಟನೆಯಾದ ಬ್ರಹ್ಮಕುಮಾರಿ ಜೊತೆಗೆ ಒಡನಾಟ ಹೊಂದಿದ್ದ ಗೋಲ್ಡಿ ಶಿವನ ಮೇಲೆ ಅಪಾರ ಭಕ್ತಿ, ಪ್ರೇಮಿ ಬೆಳೆಸಿಕೊಂಡಿದ್ದಳು. ಚಿಕ್ಕಂದಿನಿಂದಲೂ ಶಿವನ ಆರಾಧಕಳಾಗಿದ್ದ ಈಕೆ, ಇಂತಹ ಪತಿಯೇ ಬೇಕೆಂಬ ಆಸೆಯನ್ನು ಬೆಳೆಸಿಕೊಂಡಿದ್ದಳು. ವಯಸ್ಸಿಗೆ ಬಂದಿರುವ ಈಕೆಗೆ ವಿವಾಹವಾಗಲು ಪೋಷಕರು ಹೇಳಿದಾಗ ತಾನು ನರರೂಪದ ಮಾನವನ ಬದಲಾಗಿ ತನ್ನ ಇಚ್ಛಾರಾಧಕ ಶಿವನನ್ನು ವರಿಸುವುದಾಗಿ ತನ್ನ ಮನದ ಇಂಗಿತವನ್ನು ಹೇಳಿಕೊಂಡಳು.

ಪೋಷಕರು ಕೂಡ ಇದಕ್ಕೆ ಕಿಂಚಿತ್ತು ಅಡ್ಡಿಪಡಿಸದೇ, ಓಕೆ ಅಂದಿದ್ದಾರೆ. ಕುಟುಂಬ ಸದಸ್ಯರು ತಿಂಗಳಿನಿಂದ ಮದುವೆಯ ಎಲ್ಲ ಸಿದ್ಧತೆಗಳನ್ನು ನಡೆಸಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆ, ಕಲ್ಯಾಣ ಮಂಟಪ, ಸಭಾಮಂಟಪವನ್ನು ಗುತ್ತು ಮಾಡಿದ್ದಾರೆ. ಅದರಂತೆ ಜುಲೈ 23 ಭಾನುವಾರ ಸಂಜೆ 5 ಗಂಟೆ ಮುಹೂರ್ತದಲ್ಲಿ, ಮದುಮಗನಂತೆ ಅಲಂಕರಿಸಿದ್ದ ಶಿವಲಿಂಗವನ್ನು ತನ್ನ ಪತಿ ಎಂದು ಆಕೆ ಹೂಮಾಲೆ ಹಾಕಿದ್ದಾಳೆ.

ಇದಾದ ನಂತರ ಬೋಲೆ ಬಾಬಾನ ವಿಗ್ರಹ ಮತ್ತು ಆಕೆಯನ್ನು ರಥದ ಮೇಲೆ ಕೂರಿಸಿಕೊಂಡು, ವಾದ್ಯವೃಂದದ ಸಂಗೀತದೊಂದಿಗೆ ಮೆರವಣಿಗೆ ನಡೆಸಲಾಯಿತು. ಮದುವೆಗೆ ಬಂದ ಬಂಧುಗಳೂ ಅಕ್ಷತೆ ಹಾಕಿ ಆರೈಸಿದರು. ಭೋಜನವನ್ನೂ ಸವಿದರು.

ವಿವಾಹದ ಬಳಿಕ ಈ ಬಗ್ಗೆ ಮಾತನಾಡಿದ ವಧು ಗೋಲ್ಡಿ, ತಾನು ಬಾಲ್ಯದಿಂದಲೂ ಶಿವನನ್ನು ಗಂಡನನ್ನಾಗಿ ಸ್ವೀಕರಿಸುವ ಆಸೆ ಇತ್ತು. ಆ ಆಸೆ ಇಂದು ಈಡೇರಿದೆ. ತನ್ನ ಜೀವನದುದ್ದಕ್ಕೂ ಅವಿವಾಹಿತಳಾಗಿಯೇ ಉಳಿಯುತ್ತೇನೆ. ಶಿವಲಿಂಗದ ಸೇವೆಯಲ್ಲಿ ತನ್ನ ಇಡೀ ಜೀವನ ಕಳೆಯುತ್ತೇನೆ ಎಂದು ಇದೇ ಪ್ರತಿಜ್ಞೆ ಮಾಡಿದಳು. ಶಿವನೊಲುಮೆಗೆ ಗೋಲ್ಡಿ ಪಾತ್ರಳಾಗಲಿ ಎಂಬುದೇ ಸದಾಶಯ.

ಇದನ್ನೂ ಓದಿ:ಸಿಂಗಾಪುರದ 7 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು.. ಜುಲೈ 30 ರಂದು ಪಿಎಸ್​ಎಲ್​ವಿ ನೌಕೆ ನಭಕ್ಕೆ

Last Updated : Jul 24, 2023, 10:27 PM IST

ABOUT THE AUTHOR

...view details