ಕರ್ನಾಟಕ

karnataka

By ETV Bharat Karnataka Team

Published : Oct 30, 2023, 11:14 AM IST

ETV Bharat / bharat

ಗ್ರಾಮದ ಮುಖ್ಯಸ್ಥನ ಮನೆಯ ತ್ರಯೋದಶಿ ಆಹಾರ ಸೇವಿಸಿದ 1000 ಮಂದಿಗೆ ಅನಾರೋಗ್ಯ: ವಿಷ ಬೆರಸಿರುವ ಶಂಕೆ!?

ಬರೋಡಾ ಗ್ರಾಮ ಪಂಚಾಯತ್ ಮಾಜಿ ಮುಖ್ಯಸ್ಥ ಲಖನ್ ಸಿಂಗ್ ರಜಪೂತ್ ನಿವಾಸದಲ್ಲಿ ಆಹಾರ ಸೇವಿಸಿದ 1000ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

in-jhansi-702-people-fell-ill-after-eating-trayodashi-food-former-village-head-house-many-higher-center-referrals
in-jhansi-702-people-fell-ill-after-eating-trayodashi-food-former-village-head-house-many-higher-center-referrals

ಝಾನ್ಸಿ( ಉತ್ತರಪ್ರದೇಶ): ಜಿಲ್ಲೆಯ ಬಯೋಡಾ ಗ್ರಾಮದಲ್ಲಿ ಆಯೋಜಿಸಿದ್ದ ತ್ರಯೋದಶಿಯಲ್ಲಿ ಆಹಾರ ಸೇವಿಸಿದ 1000 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ. ತಕ್ಷಣಕ್ಕೆ ಇವರನ್ನು ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಂಭೀರ ಸ್ಥಿತಿಯ ರೋಗಿಗಳನ್ನು ಗ್ವಾಲಿಯರ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಪ್ರಮುಖ ಕಾರಣ ಆಹಾರದಲ್ಲಿ ಯಾರೋ ವಿಷ ಕಲಬೆರಕೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ತನಿಖೆಗೆ ಒತ್ತಾಯಿಸಲಾಗಿದೆ.

ಏನಿದು ಪ್ರಕರಣ?:ಅಕ್ಟೋಬರ್​ 27ರಂದು ಬರೋಡಾ ಗ್ರಾಮ ಪಂಚಾಯತ್ ಮಾಜಿ ಮುಖ್ಯಸ್ಥ ಲಖನ್ ಸಿಂಗ್ ರಜಪೂತ್ ಅವರ ನಿವಾಸದಲ್ಲಿ ತ್ರಯೋದಶಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಹಾರ ಸೇವಿಸಿದ್ದ 2000ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ, ಅತಿಸಾರ ಕಾಣಿಸಿಕೊಂಡಿದೆ. ಈ ವಿಷಯ ಆ ಬಳಿಕ ಕಾಳ್ಗಿಚ್ಚಿನಂತೆ ಹರಡಿದೆ. ಈ ಕುರಿತು ಮಾತನಾಡಿರುವ ಗ್ರಾಮ ಪಂಚಾಯತ್​ ಮಾಜಿ ಮುಖ್ಯಸ್ಥ ಪ್ರಕರಣದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 1000ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಸ್ವಸ್ಥರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಅನಾರೋಗ್ಯಕ್ಕೆ ಈಡಾದವರನ್ನು ಗ್ವಾಲಿಯರ್​ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಝಾನ್ಸಿ ವೈದ್ಯಕೀಯ ಕಾಲೇಜು ಕೂಡ ರೋಗಿಗಳಿಂದ ಭರ್ತಿಯಾಗಿದೆ. ಜೊತೆಗೆ ಸಿಎಚ್​ಸಿಯಲ್ಲೂ ಕೂಡ ಹಲವು ರೋಗಿಗಳನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಮಾಹಿತಿ ಪಡೆದ ಎಸ್‌ಡಿಎಂ ಮನೋಜ್‌ಕುಮಾರ್ ಸರೋಜ್, ವೈದ್ಯಕೀಯ ಅಧೀಕ್ಷಕ ಮಾತಾ ಪ್ರಸಾದ್ ರಜಪೂತ್, ಆಸ್ಪತ್ರೆಗೆ ಆಗಮಿಸಿ ರೋಗಿಗಳ ಸ್ಥಿತಿ ವಿಚಾರಿಸಿದ್ದು, ಗ್ರಾಮದಲ್ಲಿ ಕೂಡ ತನಿಖೆಗೆ ಮುಂದಾಗಿದ್ದಾರೆ.

ಈ ಬಗ್ಗೆ ವೈದ್ಯರು ಹೇಳಿದ್ದಿಷ್ಟು:ಈ ಕುರಿತು ಮಾತನಾಡಿರುವ ಝಾನ್ಸಿ ವೈದ್ಯಕೀಯ ಕಾಲೇಜಿನ ಇಎಂಒ ರವಿ ಶರ್ಮಾ, ಘಟನೆ ನಡೆದ ಹಲವು ಗಂಟೆಗಳ ಬಳಿಕವೂ ಹಲವು ರೋಗಿಗಳ ಆಸ್ಪತ್ರೆಗೆ ದಾಖಲಾಗುತ್ತಿದ್ದು, ವೈದ್ಯಕೀಯ ಕಾಲೇಜಿಗೆ ದಾಖಲಾದ ರೋಗಿಗಳ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇದೀಗ ರೋಗಿಗಳ ಆರೋಗ್ಯ ನಿಯಂತ್ರಣದಲ್ಲಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ರೋಗಿಗಳನ್ನು ವಿಶೇಷ ವಾರ್ಡ್​ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜಕೀಯ ವೈಷಮ್ಯ: ಗ್ರಾಮ ಪಂಚಾಯತ್ ಬರೋಡಾದ ಮಾಜಿ ಮುಖ್ಯಸ್ಥ ಲಖನ್ ಸಿಂಗ್ ರಜಪೂತ್ ಅವರು ತಮ್ಮ ತಂದೆಯ ತ್ರಯೋದಶಿಯಾಗಿ ಸುತ್ತಮುತ್ತಲ 40 ಗ್ರಾಮದ ವಾಸಿಗಳನ್ನು ಔತಣಕ್ಕೆ ಆಹ್ವಾನಿಸಿದ್ದಾರೆ. ಅಲ್ಲದೇ ಶಾಸಕ ಜವಾಹರ್​ ಸಿಂಗ್​ ರಜಪೂತ್​ ಅವರನ್ನು ಆಹ್ವಾನಿಸಲಾಗಿದ್ದು, ಅವರ ಬದಲಾಗಿ ಅವರ ಮಗ ರಾಹುಲ್​ ರಜಪೂರ್​ ಅತಿಥ್ಯ ಸೇವಿಸಿದ್ದಾರೆ. ಅವರು ಕೂಡ ಅನಾರೋಗ್ಯಕ್ಕೆ ಒಳಗಾಗಿದ್ದು, ದೂರು ದಾಖಲಿಸಿದ್ದಾರೆ

ಘಟನೆ ಕುರಿತು ಮಾತನಾಡಿರುವ ರಜಪೂತ್​​​, ರಾಜಕೀಯ ವೈಷಮ್ಯದಿಂದ ಯಾರೋ ಆಹಾರದಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ದೂರು ನೀಡಲಾಗಿದ್ದು, ಆಹಾರ ಪರೀಕ್ಷೆ ಮಾಡಿಸಿ ಆಡಳಿತ ಮಂಡಳಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕೇರಳ ಸ್ಪೋಟ: ಚಿಕಿತ್ಸೆ ಫಲಕಾರಿಯಾಗದೇ 12ರ ಬಾಲಕಿ ಸಾವು. ಮೃತರ ಸಂಖ್ಯೆ 3ಕ್ಕೆ ಏರಿಕೆ

ABOUT THE AUTHOR

...view details