ಕರ್ನಾಟಕ

karnataka

ETV Bharat / bharat

ಸಿಗ್ನಲ್​​ ಸಿಗದೇ ಪರದಾಡುತ್ತಿದ್ದ 62 ಹಳ್ಳಿಗಳಿಗೆ ದೂರಸಂಪರ್ಕ ಸೇವೆ ಕಲ್ಪಿಸಿದ ಸಂಸದ! - ಈಟಿವಿ ಭಾರತ ಕನ್ನಡ

ಡಿಜಿಟಲ್ ಇಂಡಿಯಾದ ಅಡಿ ಉತ್ತರ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಒಟ್ಟು 62 ಹಳ್ಳಿಗಳಲ್ಲಿ ದೂರಸಂಪರ್ಕ ಸೇವೆಯನ್ನು ಕಲ್ಪಿಸಲು ಮೊಬೈಲ್​ ಟವರ್​ ಸ್ಥಾಪಿಸಲಾಯಿತು.

in-a-first-62-villages-in-tamil-nadu-get-mobile-connectivity-thanks-to-dharmapuri-mp-senthilkumar-and-jio
ತಮಿಳುನಾಡು : 62 ಹಳ್ಳಿಗಳಿಗೆ ದೂರಸಂಪರ್ಕ ಸೇವೆ ಕಲ್ಪಿಸಿದ ಸಂಸದ

By

Published : Nov 11, 2022, 10:40 PM IST

ಧರ್ಮಪುರಿ (ತಮಿಳುನಾಡು): ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಉತ್ತರ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಒಟ್ಟು 62 ಹಳ್ಳಿಗಳಲ್ಲಿ ದೂರಸಂಪರ್ಕ ಸೇವೆಯನ್ನು ಕಲ್ಪಿಸಲು ಮೊಬೈಲ್​ ಟವರ್​ನ್ನು ಸ್ಥಾಪಿಸಲಾಯಿತು. ಈ ಮೂಲಕ ಚುನಾವಣಾ ಸಂದರ್ಭ ನೀಡಿದ ಭರವಸೆಯನ್ನು ಧರ್ಮಪುರಿ ಸಂಸದ ಎಸ್‌ ಸೆಂಥಿಲ್‌ಕುಮಾರ್‌ ನೆರವೇರಿಸಿದ್ದಾರೆ.

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ 93.3 ಪ್ರತಿಶತ ಭಾರತೀಯ ಕುಟುಂಬಗಳು ಮೊಬೈಲ್ ಫೋನ್​ಗಳನ್ನು ಹೊಂದಿವೆ. ಪ್ರತಿ ಹತ್ತು ಜನರಲ್ಲಿ ಒಂಬತ್ತಕ್ಕಿಂತ ಹೆಚ್ಚು ಜನರು ಮೊಬೈಲ್ ಫೋನ್ ಹೊಂದಿದ್ದಾರೆ ಎಂದು ದತ್ತಾಂಶ ಸೂಚಿಸುತ್ತದೆ. ಆದರೂ, ಈ ಗ್ರಾಮಗಳ ಯಾವುದೇ ಕುಟುಂಬದ ಸದಸ್ಯರು ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಕನಿಷ್ಠ 10 ಕಿಮೀ ದೂರ ಕ್ರಮಿಸಬೇಕಾದ ಅನಿವಾರ್ಯ ಇತ್ತು. ಮತ್ತು ನಿಗದಿತ ಸಮಯದಲ್ಲಿ ಸಿಗ್ನಲ್​ ಸಿಗುವಂತೆ ಇತ್ತು.

ಈ ಟವರ್​ನ್ನು ಧರ್ಮಪುರಿ ಜಿಲ್ಲಾಧಿಕಾರಿ ಕೆ.ಸಾಂತಿ ಅವರು ಸಂಸದ ಎಸ್‌ ಸೆಂಥಿಲ್‌ಕುಮಾರ್‌ ಸಮ್ಮುಖದಲ್ಲಿ ಉದ್ಘಾಟಿಸಿದರು. ಸದ್ಯ ಅಳವಡಿಸಿರುವ ಮೊಬೈಲ್ ಟವರ್ ಹರೂರು ತಾಲೂಕಿನ ಸಿತೇರಿ ಪಂಚಾಯತ್ ವ್ಯಾಪ್ತಿಯ ಗುಡ್ಡಗಾಡು ಗ್ರಾಮಗಳಿಗೆ ಸೇವೆ ಒದಗಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, 62 ಗ್ರಾಮಗಳ ಜನರಿಗೆ ದೂರಸಂಪರ್ಕಕ್ಕೆ ಅವಕಾಶ ಕಲ್ಪಿಸಿಕೊಟ್ಟ ಸಂಸದರ ಕಾರ್ಯವನ್ನು ಶ್ಲಾಘಿಸಿದರು. ಪಂಚಾಯಿತಿ ವ್ಯಾಪ್ತಿಯ ಎಲ್ಲ 62 ಗ್ರಾಮಗಳಿಗೆರಸ್ತೆ ಸಂಪರ್ಕ ಕಲ್ಪಿಸಲು ಮನವಿ ಮಾಡಲಾಗುವುದು ಇದೇ ವೇಳೆ ಹೇಳಿದರು.

ಇನ್ನು ಈ ಗ್ರಾಮಗಳ ದೀರ್ಘಕಾಲಿಕ ಮೊಬೈಲ್ ಸಂಪರ್ಕ ಸಮಸ್ಯೆಯನ್ನು ಪರಿಹರಿಸುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದ ಸೆಂಥಿಲ್​ ಕುಮಾರ್​, ಸಂಸತ್ತಿನಲ್ಲಿ ಎರಡು ಬಾರಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ, ಇವರ ಬೇಡಿಕೆ ತಿರಸ್ಕರಿಸಲ್ಪಟ್ಟಾಗ ಸೆಂಥಿಲ್‌ಕುಮಾರ್ ಜಿಯೋವನ್ನು ಸಂಸ್ಥೆಯನ್ನು ಸಂಪರ್ಕಿಸಿ ಟವರ್ ಸ್ಥಾಪಿಸಲು ಕೇಳಿಕೊಂಡರು. ಬಳಿಕ ಸ್ಥಳೀಯ ಕಾರ್ಮಿಕರ ಸಹಾಯದಿಂದ ಟವರ್​ ನಿರ್ಮಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಯಿತು.

ಇದನ್ನೂ ಓದಿ :ರೆಡ್​​​ಲೈಟ್​​​​​​​​​ ಏರಿಯಾದಲ್ಲಿ ಹುಟ್ಟಿ ಬೆಳೆದ ಮಹಿಳೆಗೆ ಮಾನವ ಹಕ್ಕುಗಳ ಆಯೋಗದ ಸಲಹಾ ಗುಂಪಿನಲ್ಲಿ ಸ್ಥಾನ

ABOUT THE AUTHOR

...view details