ಜೈಪುರ/ ರಾಜಸ್ಥಾನ: ಉನ್ನತ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಪಾತ್ರವನ್ನು ಒಪ್ಪಿಕೊಂಡಿರುವ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಐಐಟಿಗಳು, ಐಐಎಂಗಳು, ಇಸ್ರೋ ಮತ್ತು ಇಂತಹ ಇತರ ಸಂಸ್ಥೆಗಳು ನೆಹರು ಅವರ ದೂರದೃಷ್ಟಿಯ ಧ್ಯೋತಕವಾಗಿವೆ ಎಂದು ಹೊಗಳಿದ್ದಾರೆ.
ಬನ್ಸ್ವಾರದ ಗೋವಿಂದ್ ಗುರು ಬುಡಕಟ್ಟು ವಿಶ್ವವಿದ್ಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರಗಳು ಉನ್ನತ ಶಿಕ್ಷಣದತ್ತ ಗಮನ ಹರಿಸಿದ್ದರಿಂದ ಹಲವಾರು ಭಾರತೀಯ ವೈದ್ಯರು ಮತ್ತು ಎಂಜಿನಿಯರ್ಗಳು ಜಾಗತಿಕವಾಗಿ ಖ್ಯಾತಿ ಗಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಭಾರತ ಸಾಧಿಸಿರುವ ಡಿಜಿಟಲ್ ಕ್ರಾಂತಿಯು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ದೃಷ್ಟಿ ಮತ್ತು ಆಲೋಚನೆಗಳಿಂದಾಗಿ ಪರಿಣಾಮ ಬೀರಿವೆ ಎಂದರು. ನೆಹರು ಅವರ ಅಧಿಕಾರಾವಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದತ್ತ ಹೆಚ್ಚು ಗಮನ ಹರಿಸಲಾಗಿದ್ದು, ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಲಾಯಿತು. ಅವರ ನಂತರ, ಸಹ ಕಾಂಗ್ರೆಸ್ ಸರ್ಕಾರಗಳು ಅವರ ದೃಷ್ಟಿಕೋನವನ್ನೇ ಮುಂದುವರಿಸಿಕೊಂಡು ಬಂದವು ಎಂದು ಗೆಹ್ಲೋಟ್ ಹೇಳಿದ್ರು.