ಕರ್ನಾಟಕ

karnataka

By

Published : Feb 6, 2021, 5:10 PM IST

ETV Bharat / bharat

ನಾವು ಅಧಿಕಾರಕ್ಕೆ ಬಂದರೆ ಶಬರಿಮಲೆ ನಿಯಮ ಉಲ್ಲಂಘಿಸುವವರಿಗೆ 2 ವರ್ಷ ಜೈಲು ಶಿಕ್ಷೆ: ಯುಡಿಎಫ್

ಶಬರಿಮಲೆ ಮೇಲಿನ ನೂತನ ಕಾನೂನುಗಳ ಕರಡು ಪ್ರತಿ ಸಿದ್ಧವಾಗಿದ್ದು, ಇದರ ಪ್ರಕಾರ ಶಬರಿಮಲೆ ನಿಯಮ ಉಲ್ಲಂಘಿಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಶಾಸಕ ತಿರುವಂಚೂರ್​ ರಾಧಾಕೃಷ್ಣನ್​ ಹೇಳಿದರು.

Sabarimala
ಶಬರಿಮಲೆ

ಕೊಟ್ಟಾಯಂ (ಕೇರಳ):ನಾವು ಅಧಿಕಾರಕ್ಕೆ ಬಂದರೆ ಶಬರಿಮಲೆ ದೇವಾಲಯದ ಕುರಿತು ಹೊಸ ಕಾನೂನು ಜಾರಿಗೊಳಿಸುತ್ತೇವೆ ಎಂದು ಕೇರಳದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪಕ್ಷ ಹೇಳಿದೆ.

ಈಗಾಗಲೇ ಶಬರಿಮಲೆ ಮೇಲಿನ ನೂತನ ಕಾನೂನುಗಳ ಕರಡು ಪ್ರತಿ ಸಿದ್ಧವಾಗಿದ್ದು, ಅದನ್ನು ಶಾಸಕ ತಿರುವಂಚೂರ್​ ರಾಧಾಕೃಷ್ಣನ್​ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ರಾಧಾಕೃಷ್ಣನ್, ಹೊಸ ಕಾನೂನಿನ ಪ್ರಕಾರ ಶಬರಿಮಲೆ ನಿಯಮ ಉಲ್ಲಂಘಿಸುವವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ದೇವಾಲಯದ ಸಾರ್ವಭೌಮತ್ವವು ಅರ್ಚಕರ ಕೈಯಲ್ಲಿದ್ದು, ಈ ಕರಡು ಪ್ರತಿಯನ್ನು ಕಾನೂನು ಸಚಿವ ಎ.ಕೆ.ಬಾಲನ್ ಅವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಪ್ರತಿಭಟನಾನಿರತ ರೈತರಿಂದ ಬಾಬಿ ಡಿಯೋಲ್​ರ​​ 'ಲವ್ ಹಾಸ್ಟೆಲ್' ಚಿತ್ರೀಕರಣ ಸ್ಥಗಿತ

ಶಬರಿಮಲೆ ದೇವಾಲಯ ಪ್ರವೇಶ ಕುರಿತ ರಾಜ್ಯ ಸರ್ಕಾರದ ತೀರ್ಪು ಪ್ರಬುದ್ಧವಲ್ಲದ ನಡೆಯಾಗಿದೆ. ನಾವು ಅಧಿಕಾರಕ್ಕೆ ಬಂದರೆ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದರು. ಈ ಹಿಂದೆ ಕಾನೂನು ಸಚಿವ ಎ.ಕೆ.ಬಾಲನ್, ಶಬರಿಮಲೆ ಬಗ್ಗೆ ಕರಡು ಪ್ರಕಟಿಸುವಂತೆ ಯುಡಿಎಫ್​ಗೆ ಸವಾಲೆಸಿದ್ದರು. ಅಲ್ಲದೇ ಈ ಕಾನೂನು ಜಾರಿಯಾಗಲು ಪ್ರಮಾಣವಚನ ದಿನದ ವರೆಗೂ ಯುಡಿಎಫ್ ಕಾಯಬಾರದು ಎಂದಿದ್ದರು.

ABOUT THE AUTHOR

...view details