ನವದೆಹಲಿ:'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಯ ಭಾಗವಾಗಿ ಶ್ರೀನಗರದ ದಾಲ್ ಸರೋವರದ ಮೇಲೆ ಏರ್ ಶೋ ನಡೆಸಲು ಭಾರತೀಯ ವಾಯುಪಡೆ ಸಜ್ಜಾಗಿದೆ. ಸೆಪ್ಟೆಂಬರ್ 26ರಿಂದ ಈ ಕಾರ್ಯಕ್ರಮ ಆಯೋಜನೆಗೊಂಡಿದೆ.
ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧ ರಾಜ್ಯದ ಯುವಕರು ಐಎಎಫ್ ಸೇರಲು ಪ್ರೇರೇಪಿಸುವ ಉದ್ದೇಶದಿಂದ ಈ ಏರ್ ಶೋ ಆಯೋಜಿಸಲಾಗಿದ್ದು, ಇದರಲ್ಲಿ ವಿವಿಧ ಶಾಲಾ-ಕಾಲೇಜುಗಳ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳಿಗೆ ಗುಡ್ನ್ಯೂಸ್: ಮೈದಾನಕ್ಕೆ ತೆರಳಿ IPL ವೀಕ್ಷಿಸಲು ಅವಕಾಶ; ಆದ್ರೆ ಈ ಮಾಹಿತಿ ನಿಮಗೆ ತಿಳಿದಿರಲಿ..
ಈ ಬಗ್ಗೆ ಮಾತನಾಡಿರುವ ಐಎಎಫ್ ಅಧಿಕಾರಿ ಪಾಂಡುರಂಗ ಕೆ.ಪೋಲ್, ಕಣಿವೆ ನಾಡಿನ ಯುವಕರನ್ನು ವಾಯುಪಡೆಗೆ ಸೆಳೆಯುವುದು ಇದರ ಉದ್ದೇಶ. ಇದರ ಜೊತೆಗೆ, ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದರು. 'ನಿಮ್ಮ ಕನಸುಗಳಿಗೆ ರೆಕ್ಕೆ ನೀಡಿ' ಎಂಬುದು ಏರ್ಶೋ ಮುಖ್ಯ ಥೀಮ್ ಆಗಿದೆ. ವಿದ್ಯಾರ್ಥಿಗಳ ಜೊತೆಗೆ ಸುಮಾರು 700 ಶಿಕ್ಷಕರು ಈ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.