ಕರ್ನಾಟಕ

karnataka

By

Published : Dec 11, 2021, 4:28 PM IST

ETV Bharat / bharat

ರಾವತ್​ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟ: ಕ್ಯಾ. ವರುಣ್​​ ಸಿಂಗ್​​ ಜೀವ ಉಳಿಸಲು ವೈದ್ಯರ ಸರ್ವ ಪ್ರಯತ್ನ: ನಮೋ

ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್​​ ಬಿಪಿನ್​ ರಾವತ್​​ ಸೇರಿದಂತೆ 13 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶದ ಬಲರಾಂಪುರ​ದಲ್ಲಿ ಮಾತನಾಡಿದ ನಮೋ, ಬಿಪಿನ್​ ರಾವತ್​​ ಅವರ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟ ಎಂದು ಹೇಳಿದ್ದಾರೆ.

modi condolences Bipin Rawat
modi condolences Bipin Rawat

ಬಲರಾಂಪುರ್​(ಉತ್ತರ ಪ್ರದೇಶ):ಡಿಸೆಂಬರ್​​ 8ರಂದು ತಮಿಳುನಾಡಿನ ನೀಲಗಿರಿಯಲ್ಲಿ ನಡೆದ ಹೆಲಿಕಾಪ್ಟರ್​​​ ಅಪಘಾತದಲ್ಲಿ ಮೂರು ಸೇನಾ ಪಡೆಗಳ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್ ಅವರ ಧರ್ಮಪತ್ನಿ​​ ಸೇರಿದಂತೆ 13 ಯೋಧರು ಹುತಾತ್ಮರಾಗಿದ್ದಾರೆ. ಮಡಿದ ಎಲ್ಲ ವೀರ ಯೋಧರಿಗೂ ಪ್ರಧಾನಿ ನರೇಂದ್ರ ಮೋದಿ ಇಂದು ಮತ್ತೊಮ್ಮೆ ಸಂತಾಪ ಸೂಚಿಸಿದರು.

ಉತ್ತರ ಪ್ರದೇಶದ ಬಲರಾಂಪುರ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಮೊದಲ ಸಿಡಿಎಸ್​​ ಜನರಲ್​ ಬಿಪಿನ್​ ರಾವತ್​​ ಅವರ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟವಾಗಿದೆ. ದೇಶದ ಸಶಸ್ತ್ರ ಪಡೆ ಸ್ವಾವಲಂಬಿಗಳನ್ನಾಗಿ ಮಾಡಲು ಶ್ರಮಿಸಿದ್ದರು ಎಂದರು.

ಕ್ಯಾಪ್ಟನ್​ ವರುಣ್​ ಸಿಂಗ್​ ಜೀವ ಉಳಿಸಲು ವೈದ್ಯರಿಂದ ಸರ್ವಪ್ರಯತ್ನ ಎಂದ ನಮೋ

ಸೈನಿಕನು ಮಿಲಿಟರಿಯಲ್ಲಿ ಇರುವವರೆಗೆ ಮಾತ್ರ ಸೈನಿಕನಾಗಿ ಇರುವುದಿಲ್ಲ. ಅವರ ಇಡೀ ಜೀವನ ಯೋಧನಾಗಿದ್ದು, ಪ್ರತಿ ಕ್ಷಣವೂ ಶಿಸ್ತು ಮತ್ತು ದೇಶಕ್ಕಾಗಿ ಸಮರ್ಪಿತವಾಗಿರುತ್ತದೆ ಎಂದು ತಿಳಿಸಿದರು. ಬಿಪಿನ್​ ರಾವತ್​​ ಅವರನ್ನ ಕಳೆದುಕೊಂಡಿರುವ ದೇಶ ಶೋಕ, ನೋವಿನಲ್ಲಿದೆ. ಆದರೆ, ದೇಶದ ಅಭಿವೃದ್ಧಿ ತಡೆ ಹಿಡಿಯಲು ಸಾಧ್ಯವಿಲ್ಲ. ಭಾರತೀಯರು ಒಟ್ಟಾಗಿ ಕಷ್ಟಪಟ್ಟು ಕೆಲಸ ಮಾಡ್ತಿದ್ದು, ಪ್ರತಿ ಸವಾಲು ಎದುರಿಸುತ್ತಿದ್ದೇವೆ ಎಂದರು.

ಸೇನಾ ಹೆಲಿಕಾಪ್ಟರ್​ ಅಪಘಾತದಲ್ಲಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್​ ವರುಣ್​​ ಸಿಂಗ್​​ ಅವರ ಜೀವ ಉಳಿಸಲು ವೈದ್ಯರು ಸರ್ವಪ್ರಯತ್ನ ಮಾಡ್ತಿದ್ದಾರೆ. ಅವರ ಜೀವ ಉಳಿಯಲಿ ಎಂದು ಮಾತೆ ಪಟೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಇಡೀ ರಾಷ್ಟ್ರ ಅವರೊಂದಿಗೆ ನಿಂತಿದೆ ಎಂದರು.

ಇದನ್ನೂ ಓದಿರಿ:9,800 ಕೋಟಿ ರೂ. ವೆಚ್ಚ: ನಾಲ್ಕು ದಶಕದಿಂದ ಬಾಕಿ ಇದ್ದ 'ಸರಯೂ ನಹರ್​​ ರಾಷ್ಟ್ರೀಯ'ಯೋಜನೆ ಉದ್ಘಾಟಿಸಿದ ನಮೋ

ಡಿಸೆಂಬರ್​​ 8ರಂದು ತಮಿಳುನಾಡಿನ ವೆಲ್ಲಿಂಗ್ಟನ್​​ನಲ್ಲಿರುವ ಸೇನಾ ಶಾಲೆಗೆ ತೆರಳುತ್ತಿದ್ದ ವೇಳೆ ಬಿಪಿನ್​ ರಾವತ್​ ಹಾಗೂ ಇತರ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​​​ ಪತನಗೊಂಡು, ಭೀಕರ ದುರಂತ ಸಂಭವಿಸಿತ್ತು.

ABOUT THE AUTHOR

...view details