ಕರ್ನಾಟಕ

karnataka

ETV Bharat / bharat

ರಾಣಿ ಎಲಿಜಬೆತ್​ಗೂ ಇಷ್ಟವಾಗಿತ್ತು ಮುತ್ತಿನನಗರಿ.. ಹೈದರಾಬಾದ್​ನಲ್ಲಿ ಬ್ರಿಟನ್​ ಕ್ವೀನ್ ಹೆಜ್ಜೆ ಗುರುತು - ಹೈದರಾಬಾದ್​ನಲ್ಲಿ ಬ್ರಿಟನ್​ ಕ್ವೀನ್ ಹೆಜ್ಜೆ ಗುರುತು

1983ರ ನವೆಂಬರ್ 20 ರಂದು ರಾಣಿ ದಂಪತಿಯ ಮದುವೆ ವಾರ್ಷಿಕೋತ್ಸವ ದಿನವಾಗಿತ್ತು. ಹೀಗಾಗಿ ಬೊಲ್ಲಾರಂ ಬಳಿಯ ಹೋಲಿ ಟ್ರಿನಿಟಿ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮೆಡ್ಚಾಲ್ ಸಮೀಪದ ದೇವರಾಯಂಜಲ್ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಣಿ ಚಾಲನೆ ನೀಡಿದ್ದರು.

Queen of Britain
ರಾಣಿ ಎಲಿಜಬೆತ್

By

Published : Sep 10, 2022, 1:29 PM IST

ಹೈದರಾಬಾದ್: ಬ್ರಿಟನ್​​ನ ದೀರ್ಘಾವಧಿಯ ರಾಣಿ ಎಲಿಜಬೆತ್-II ಅವರು ಹೈದರಾಬಾದ್​ನೊಂದಿಗೆ ಒಂದು ವಿಶೇಷ ಸಂಬಂಧ ಹೊಂದಿದ್ದರು. 40 ವರ್ಷಗಳ ಹಿಂದೆ ಭಾರತಕ್ಕೆ ಬಂದಾಗ ಅವರು ಹೈದರಾಬಾದ್​ಗೂ ಭೇಟಿ ನೀಡಿದ್ದರು. ಆಗ ಇಲ್ಲಿನ ಸರ್ಕಾರದ ಆದರಾತಿಥ್ಯ ಮತ್ತು ಜನತೆಯ ಪ್ರೀತಿಗೆ ಅವರು ಮರುಳಾಗಿದ್ದರು. ಹಿತಕರವಾದ ಹೈದರಾಬಾದ್ ತನಗೆ ತುಂಬಾ ಇಷ್ಟವಾಗಿದೆ ಮತ್ತು ಈ ಪ್ರವಾಸವನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದರು.

ಕಾಮನ್​ವೆಲ್ತ್​ ಸಮ್ಮೇಳನ ಉದ್ಘಾಟನೆಗೆ ಬಂದಿದ್ದರು ಕ್ವೀನ್: 1983 ರಲ್ಲಿ ರಾಣಿ ಎಲಿಜಬೆತ್-2 ದೆಹಲಿಯಲ್ಲಿ ನಡೆದ 48 ನೇ ಕಾಮನ್‌ವೆಲ್ತ್ ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಹತ್ತು ದಿನಗಳ ಭೇಟಿಯಲ್ಲಿ ಮೂರು ದಿನಗಳ ಕಾಲ ಹೈದರಾಬಾದ್‌ನಲ್ಲಿ ತಂಗಿದ್ದರು. ನವೆಂಬರ್ 18, 1983 ರ ರಾತ್ರಿ ಅವರು ತಮ್ಮ ಪತಿ ಪ್ರಿನ್ಸ್ ಫಿಲಿಪ್ ಅವರೊಂದಿಗೆ ವಿಶೇಷ ವಿಮಾನದಲ್ಲಿ ಹೈದರಾಬಾದ್‌ಗೆ ಬಂದರು. ಅಂದಿನ ಮುಖ್ಯಮಂತ್ರಿ ಎನ್ ಟಿಆರ್ ಮತ್ತು ರಾಜ್ಯಪಾಲ ರಾಮಲಾಲ್ ರಾಣಿಯವರನ್ನು ಸ್ವಾಗತಿಸಿದ್ದರು. ಬೇಗಂಪೇಟೆ ವಿಮಾನ ನಿಲ್ದಾಣ ಪ್ರದೇಶ ರಾಣಿಯ ದರ್ಶನಕ್ಕೆ ಬಂದ ಜನರಿಂದ ತುಂಬಿ ತುಳುಕುತ್ತಿತ್ತು. ಬೊಲ್ಲಾರಂನಲ್ಲಿರುವ ರಾಷ್ಟ್ರಪತಿ ಭವನದಲ್ಲಿ ರಾಣಿ ದಂಪತಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು.

ಲ್ಯಾಬ್ ಉದ್ಘಾಟಿಸಿದ್ದ ರಾಣಿ: ಮರುದಿನ ರಾಣಿ ಬಿಎಚ್​ಇಎಲ್​ ಕಾರ್ಖಾನೆಯಲ್ಲಿ ಟರ್ಬೊಮಶಿನರಿ ಲ್ಯಾಬ್ ಅನ್ನು ಉದ್ಘಾಟಿಸಿದರು. ಪಟಂಚೇರುವಿನ ಇಕ್ರಿಸ್ಯಾಟ್‌ನಲ್ಲಿ ಗ್ರಾಮಸ್ಥರು ಬತುಕಮ್ಮನೊಂದಿಗೆ ಅವರನ್ನು ಸ್ವಾಗತಿಸಿದರು. ಸಂಜೆ ಗೋಲ್ಕೊಂಡ ಕೋಟೆಯ ಬಳಿ ಇರುವ ಕುತುಬ್ ಶಾಹಿ ಸಮಾಧಿಗೆ ರಾಣಿ ಭೇಟಿ ನೀಡಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರನ್ನು ಕಂಡು ಜನರತ್ತ ಕೈಬೀಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು.

ರಾಣಿ ಎಲಿಜಬೆತ್​ರನ್ನು ಬರಮಾಡಿಕೊಂಡ ಕ್ಷಣ

ಭಾರತದಲ್ಲಿ ನಡೆದಿತ್ತು ರಾಣಿ ದಂಪತಿಯ ಮದುವೆ ವಾರ್ಷಿಕೋತ್ಸವ: 1983ರ ನವೆಂಬರ್ 20 ರಂದು ರಾಣಿ ದಂಪತಿಯ ಮದುವೆ ವಾರ್ಷಿಕೋತ್ಸವ ದಿನವಾಗಿತ್ತು. ಹೀಗಾಗಿ ಬೊಲ್ಲಾರಂ ಬಳಿಯ ಹೋಲಿ ಟ್ರಿನಿಟಿ ಚರ್ಚ್‌ನಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ನಂತರ ಮಡ್ಚಾಲ್​ ಸಮೀಪದ ದೇವರಾಯಂಜಲ್ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಣಿ ಚಾಲನೆ ನೀಡಿದರು. ನಂತರ ಸೀತಾರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನವೆಂಬರ್ 21ರಂದು ಬೇಗಂಪೇಟೆ ವಿಮಾನ ನಿಲ್ದಾಣದಲ್ಲಿ ರಾಣಿ ದಂಪತಿಯನ್ನು ಅಂದಿನ ರಾಜ್ಯಪಾಲ ರಾಮಲಾಲ್ ದಂಪತಿ, ಮುಖ್ಯಮಂತ್ರಿ ಎನ್‌ಟಿಆರ್, ಪರಿಷತ್ ಪ್ರತಿಪಕ್ಷ ನಾಯಕ ರೋಶಯ್ಯ, ಮಾಜಿ ಮುಖ್ಯಮಂತ್ರಿ ಕಾಸು ಬ್ರಹ್ಮಾನಂದ ರೆಡ್ಡಿ ಬೀಳ್ಕೊಟ್ಟಿದ್ದರು.

ರಾಣಿ ಎಲಿಜಬೆತ್​ರನ್ನು ಬರಮಾಡಿಕೊಂಡ ಕ್ಷಣ

ನೂರಾರು ಪತ್ರಕರ್ತರಿಂದ ವರದಿ: ರಾಣಿಯ ಭೇಟಿಯನ್ನು ವರದಿ ಮಾಡಲು 37 ಬ್ರಿಟಿಷ್ ಪತ್ರಕರ್ತರು ಮತ್ತು 50 ಇತರ ರಾಷ್ಟ್ರೀಯ ಮತ್ತು ವಿದೇಶಿ ಪತ್ರಕರ್ತರು ಹೈದರಾಬಾದ್‌ಗೆ ಬಂದಿದ್ದು ಇತಿಹಾಸ. ಆಗ ರಿಡ್ಜ್ ಹೋಟೆಲ್‌ನಲ್ಲಿ ವಿಶೇಷ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿತ್ತು. 4 ಅಂತಾರಾಷ್ಟ್ರೀಯ ಟ್ರಂಕ್ ಲೈನ್‌ಗಳು ಮತ್ತು ಟೈಪ್ ರೈಟರ್‌ಗಳನ್ನು ವಿಶ್ವದ ಯಾವುದೇ ಭಾಗಕ್ಕೆ ವೇಗವಾಗಿ ಸುದ್ದಿ ಕಳುಹಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯನಗರದ ರಾಜರು ದಿವಂಗತ ಬ್ರಿಟಿಷ್ ರಾಣಿ ಎಲಿಜಬೆತ್-II ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 1961 ರಲ್ಲಿ ಎಲಿಜಬೆತ್ ರಾಣಿ, ಬನಾರಸ್‌ನಲ್ಲಿರುವ ವಿಜಯನಗರಂ ಭವನಕ್ಕೆ ಭೇಟಿ ನೀಡಿದ್ದರು. ಆಗ ಅವರನ್ನು ಪುಸಪತಿ ವಂಶಸ್ಥರಾದ ಪುಸಪತಿ ವಿಜಯರಾಮ ಗಜಪತಿರಾಜು ಸ್ವಾಗತಿಸಿದರು.

ABOUT THE AUTHOR

...view details