ಕರ್ನಾಟಕ

karnataka

ETV Bharat / bharat

ಹುಡುಗಿಯರಿಂದ ಇದು ಸಾಧ್ಯವಿಲ್ಲ ಎಂದವರ ಮಧ್ಯೆ ಪ್ರತಿಭೆ ತೋರಿಸಿದ ದಿಟ್ಟೆ; ಇದು ಹೈದರಾಬಾದ್​ ಯುವತಿ ಕಥೆ - ಕೆಲಸ ಮಾಡುವುದರಿಂದ ಹಿಂಜರಿಯುವವರ ಸಂಖ್ಯೆ

ಸಿಎ ಮಾಡುವುದು ಸಾಮಾನ್ಯವಲ್ಲ. ಅದಕ್ಕೆ ಕಠಿಣ ಶ್ರಮ ಮತ್ತು ದೃಢತೆ ಅವಶ್ಯ. ಈ ಸಿಎ ಪರೀಕ್ಷೆಯಲ್ಲಿ ಟಾಪ್​ ರ್ಯಾಂಕ್​ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ ಹೈದ್ರಾಬಾದ್​ ಯುವತಿ

Etv Bharat
Etv Bharat

By

Published : Feb 3, 2023, 2:27 PM IST

Updated : Feb 3, 2023, 2:50 PM IST

ಹೈದರಾಬಾದ್​: ಕಷ್ಟ ಎಂದರೆ ಆ ಕೆಲಸ ಮಾಡುವುದರಿಂದ ಹಿಂಜರಿಯುವವರ ಸಂಖ್ಯೆ ಹೆಚ್ಚು. ಆದರೆ, ಇದಕ್ಕೆ ಅಪವಾದ ಎನ್ನುವಂತಿದ್ದರೆ ಬಂಗಾರು ಲಕ್ಷ್ಮಿ ಪ್ರಸನ್ನ ಕಷ್ಟಗಳನ್ನು ಮೆಟ್ಟಿನಿಂತು ಸಾಧನೆ ಮಾಡಿ ಹಲವರಿಗೆ ಪ್ರೇರಣೆ ಆಗಿದ್ದಾರೆ ಈ ಯುವತಿ. ಚಾರ್ಟೆಡ್​ ಅಕೌಂಟೆಂಟ್​​ (ಸಿಎ) ಮಾಡುವುದು ಹುಡುಗಿಯರಿಗೆ ಕಷ್ಟ ಎನ್ನುವವರ ಮಧ್ಯ ಆಲ್​ ಇಂಡಿಯಾ ಮಟ್ಟದಲ್ಲಿ ಟ್ಯಾಪ್​ ರ‍್ಯಾಂಕ್​​​​ ಗಳಿಸುವ ಮೂಲಕ ದಿಟ್ಟ ಉತ್ತರ ನೀಡಿದ್ದಾಳೆ 18 ವರ್ಷದ ಯುವತಿ.

ಸಾಧಕಿ ಹಿನ್ನೆಲೆ ಏನು?:ನಮ್ಮದು ಹೈದರಾಬಾದ್​, ನಮ್ಮ ಪೋಷಕರು ರಂಗ ರೆಡ್ಡಿ ಜಿಲ್ಲಾ ನ್ಯಾಯಾಲಯದಲ್ಲಿ ಹಿರಿಯ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಕೋರ್ಟ್​​ಗೆ ಚಾರ್ಟೆಡ್​ ಅಕೌಂಟೆಡ್​ ಬರುತ್ತಿದ್ದನ್ನು ನೋಡುತ್ತಿದ್ದ ಪೋಷಕರಿಗೆ ತಮ್ಮ ಮಗಳನ್ನು ಸಿಎ ಮಾಡಬೇಕು ಎಂಬ ಕನಸು ಶುರುವಾಯಿತು. ಈ ಕೋರ್ಸ್​ ಕುರಿತು ಮಾಹಿತಿ ಪಡೆದರು. ಅದರಂತೆ ಸಿಎ ಆಗುವ ಕನಸು ಕೂಡ ನನ್ನನ್ನಲಿ ಮೊಳಕೆ ಒಡೆಯಿತು. ಈ ವೇಳೆ, ಸಿಎ ಬಲು ಕಷ್ಟ. ಹುಡುಗಿಯರಿಂದ ಇದು ಸಾಧ್ಯವಿಲ್ಲ ಎಂಬ ನಿರುತ್ಸಾಹದ ಮಾತುಗಳು ಕೂಡ ಎಲ್ಲರಿಂದ ಕೇಳಿ ಬಂದವು ಎನ್ನುತ್ತಾರೆ ಬಂಗಾರು ಲಕ್ಷ್ಮಿ ಪ್ರಸನ್ನ

ಪ್ರತಿಯೊಬ್ಬರು ಬಾಲ್ಯದಿಂದಲೇ ನಾನು ಏನಾದರೂ ವಿಭಿನ್ನವಾಗಿ ಸಾಧನೆ ಮಾಡಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಸಿಎ ಮಾಡುವುದು ಕೂಡ ನನಗೆ ಸವಾಲಾಗಿ ಪರಿಣಮಿಸಿದರೂ ಅದನ್ನೇ ಮಾಡಬೇಕು ಎಂದು ನಿರ್ಧರಿಸಿದೆ. ಇಂಟರ್​ ಪರೀಕ್ಷೆ ಪಾಸ್​ ಆದ ಬಳಿಕ ನಾನು ಮಾಸ್ಟರ್​ ಮೈಂಡ್​ ಆರ್ಗನೈಸೇಷನ್​ ಸೇರಿದೆ. ಬೆಳಗ್ಗೆ 8 ರಿಂದ ಸಂಜೆ 8ರವರೆಗೆ ತರಬೇತಿ ಪಡೆಯುತ್ತಿದ್ದೆ. ವಾರಾಂತ್ಯದಲ್ಲಿ ಪರೀಕ್ಷೆ ಎದುರಿಸುತ್ತಿದ್ದೆ. ಈ ಎಲ್ಲ ಸಮಯಗಳು ಕಷ್ಟವಾಗುತ್ತಿತ್ತು. ಇದು ಒತ್ತಡದ ಭಾವನೆ ಮೂಡಿಸುತ್ತಿತ್ತು. ಆದರೆ, ನಾಲ್ವರಲ್ಲಿ ನಾನು ವಿಭಿನ್ನ ಆಗಬೇಕು ಎಂದು ಕಠಿಣ ಶ್ರಮವಹಿಸಿದೆ. ನಾನು ಪರೀಕ್ಷೆಯಲ್ಲಿ 350ಕ್ಕಿಂತ ಹೆಚ್ಚು ಅಂಕ ನಿರೀಕ್ಷೆ ಮಾಡಿದ್ದೆ. ಆದರೆ, ಸಿಎಂಎ ಫೌಂಡೇಶನ್​ನಲ್ಲಿ 380 ಅಂಕ ಪಡೆಯುವ ಮೂಲಕ ಮೊದಲ ರ‍್ಯಾಂಕ್​​​​​​​​​​​​​​ ಪಡೆದೆ. ಕಠಿಣ ಶ್ರಮ ಯಾವಾಗಲೂ ಫಲ ನೀಡುತ್ತದೆ ಎಂಬುದನ್ನು ಕಾಣುತ್ತಿದ್ದೇನೆ.

ವೃತ್ತಿಪರ ಕೋರ್ಸ್​ ಮಾಡಿ ಸಿಎ ಮಾಡುವ ಮೂಲಕ ಉತ್ತಮ ಸ್ಥಾನ ಪಡೆಯುವುದು ನನ್ನ ಕನಸಾಗಿತ್ತು. ಕೇವಲ ಓದಿನಲ್ಲಿ ಮಾತ್ರವಲ್ಲ. ಪಠ್ಯೇತರ ಚಟುವಟಿಕೆಯಲ್ಲಿ ಕೂಡ ನಾನು ಕ್ರಿಯಾಶೀಲವಾಗಿದ್ದೆ. ಥೈಕ್ವೊಂಡೊನಲ್ಲಿ ನಾನು ಬ್ಲಾಕ್​ ಬೆಲ್ಟ್​ ಪಡೆದಿದ್ದೇನೆ. ಜಿಲ್ಲೆ ಮತ್ತು ರಾಜ್ಯಮಟ್ಟದ ಚಾಂಪಿಯನ್​ಶಿಪ್​ನಲ್ಲಿ ನಾನು ಭಾಗಿಯಾಗಿದ್ದೇನೆ. ಕಥೆ, ಪ್ರಬಂಧವನ್ನು ಬರೆಯುತ್ತೇನೆ.

ಶಾಲಾ ಮತ್ತು ಕಾಲೇಜು ಮಟ್ಟದಲ್ಲಿ ವಿಜ್ಞಾನ ಮೇಳ, ಸೆಮಿನರ್​ ಮತ್ತು ವಿವಿಧ ಚರ್ಚಾ ಸ್ಪರ್ಧೆಗಳಲ್ಲಿ ಭಾಗಿಯಾಗಿ ಬಹುಮಾನಗಳನ್ನು ಪಡೆದಿದ್ದೇನೆ.ನನಗೆ ಒಬ್ಬ ತಮ್ಮ ಇದ್ದಾನೆ. ನಮ್ಮ ಮನೆಯಲ್ಲಿ ಗಂಡು ಮತ್ತು ಹೆಣ್ಣಿನ ತಾರತಮ್ಯವಿಲ್ಲ. ಇದೇ ಕಾರಣದಿಂದ ಸಾಧ್ಯವಾಗದನ್ನು ಸಾಧಿಸಬೇಕು ಎಂಬ ನನ್ನ ಹಂಬಲಕ್ಕೆ ಪ್ರೋತ್ಸಾಹ ಸಿಕ್ಕಿತು. ಕಠಿಣ ಶ್ರಮ, ದೃಢ ನಿರ್ಧಾರವೇ ಯಶಸ್ಸಿನ ಫಾರ್ಮುಖ ಎಂಬುದನ್ನು ಮರೆಯಬಾರದು ಎನ್ನುತ್ತಾರೆ ಬಂಗಾರು ಲಕ್ಷ್ಮಿ ಪ್ರಸನ್ನ.

ಇದನ್ನೂ ಓದಿ: ಅಂಡರ್​ 19 ವನಿತೆಯರ ವಿಶ್ವಕಪ್​: ಇಂಡಿಯಾ ಟೀಂನ ಸೌಮ್ಯಾ ತಿವಾರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

Last Updated : Feb 3, 2023, 2:50 PM IST

ABOUT THE AUTHOR

...view details