ಕರ್ನಾಟಕ

karnataka

ETV Bharat / bharat

ಗುಂಟೂರು ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಗಳಿಗೆ ಭಾರಿ ಮೊತ್ತದ ಆರ್ಥಿಕ ನೆರವು! - Organizers of the Uyyuru Foundation

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಟಿಡಿಪಿ ಪಕ್ಷದ ವತಿಯಿಂದ ನಡೆಯುತ್ತಿದ್ದ ಉಡುಗೊರೆ ವಿತರಣೆ ಕಾರ್ಯಕ್ರಮದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಇದೀಗ ಭರಪೂರ ಪರಿಹಾರ ಸಿಗುತ್ತಿದೆ.

ಗುಂಟೂರು ಕಾಲ್ತುಳಿತ ಪ್ರಕರಣ
ಗುಂಟೂರು ಕಾಲ್ತುಳಿತ ಪ್ರಕರಣ

By

Published : Jan 2, 2023, 1:12 PM IST

ಗುಂಟೂರು (ಆಂಧ್ರ ಪ್ರದೇಶ): ಜಿಲ್ಲೆಯಲ್ಲಿ ತೆಲುಗು ದೇಶ ಪಾರ್ಟಿ (ಟಿಡಿಪಿ) ವತಿಯಿಂದ ಬಡವರಿಗೆ ಸಂಕ್ರಾಂತಿ ನಿಮಿತ್ತ ಉಡುಗೊರೆ ನೀಡಲಾಗುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಮೂವರು ಮೃತಪಟ್ಟಿದ್ದರು. ಇದೀಗ ಮೃತರ ಕುಟುಂಬಕ್ಕೆ ಭಾರಿ ಮೊತ್ತದ ಪರಿಹಾರ ಘೋಷಣೆ ಮಾಡಲಾಗಿದೆ.

20 ಲಕ್ಷ ರೂಪಾಯಿ ಪರಿಹಾರ:ಉಯ್ಯೂರು ಪ್ರತಿಷ್ಠಾನದ ಸಂಘಟಕರು ಉಡುಗೊರೆ ವಿತರಣೆಯ ಕಾರ್ಯಕ್ರಮದಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಉಯ್ಯೂರು ಶ್ರೀನಿವಾಸ್ ಬಹಿರಂಗಪಡಿಸಿದ್ದಾರೆ. ಅಲ್ಲದೇ ಕುಟುಂಬ ಸದಸ್ಯರ ಯೋಗಕ್ಷೇಮವನ್ನು ನೋಡಿಕೊಳ್ಳಲಾಗುವುದು ಮತ್ತು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಸಂಪೂರ್ಣ ಭರಿಸುವುದಾಗಿ ತಿಳಿಸಿದರು.

2 ಲಕ್ಷ ರೂ. ಪರಿಹಾರ ಘೋಷಿಸಿದ್ದ ಸಿಎಂ:ಟಿಡಿಪಿ ನಾಯಕ ಚಂದ್ರಬಾಬು ಕೂಡ ಪಕ್ಷದ ಪರವಾಗಿ ರೂಪಾಯಿ 5 ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ. ಈ ಘಟನೆಗೆ ಸಿಎಂ ಜಗನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಟಿಡಿಪಿಯ ಮತ್ತೊಬ್ಬ ನಾಯಕ ಕೊವೆಲಮುಡಿ ರವೀಂದ್ರ ಅವರು ಮೃತರ ಕುಟುಂಬಗಳಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ರೂ.1 ಲಕ್ಷ ಆರ್ಥಿಕ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ಗುಂಟೂರಿನಲ್ಲಿ ಜನತಾ ವಸ್ತ್ರ ವಿತರಣೆ ವೇಳೆ ಮೃತಪಟ್ಟವರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಎನ್‌ಟಿಆರ್ ಟ್ರಸ್ಟ್ ನಿರ್ದೇಶಕ ಮನ್ನವ ಮೋಹನಕೃಷ್ಣ ಘೋಷಿಸಿದ್ದಾರೆ. ಮನ್ನವ ಮೋಹನಕೃಷ್ಣ ಚಾರಿಟೇಬಲ್ ಟ್ರಸ್ಟ್ ಮೂಲಕ ಗಾಯಾಳುಗಳಿಗೆ ನೆರವು ಸಹ ನೀಡಲಾಗುವುದು. ಅಲ್ಲದೇ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದ್ದಾರೆ.

ಏನಿದು ಘಟನೆ?: ಭಾನುವಾರ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (ಟಿಡಿಪಿ) ಗುಂಟೂರು ಜಿಲ್ಲೆಯಲ್ಲಿ ಬಡವರಿಗೆ ಸಂಕ್ರಾಂತಿ ನಿಮಿತ್ತ ಚಂದ್ರಣ್ಣ ಉಡುಗೊರೆ ವಿತರಣೆ ಮಾಡುತ್ತಿತ್ತು. ಈ ವೇಳೆ ಕಾಲ್ತುಳಿತ ಉಂಟಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದರು. ಅಲ್ಲದೇ ಇನ್ನೂ ಕೆಲವರು ಗಾಯಗೊಂಡಿದ್ದರು.

ಇದೇ ರೀತಿಯ ಘಟನೆ ಡಿಸೆಂಬರ್​ 28 ರಂದೂ ನಡೆದಿತ್ತು. ಚಂದ್ರಬಾಬು ನಾಯ್ಡು ರೋಡ್​ ಶೋ ನಡೆಸುವ ವೇಳೆ ಕಾಲ್ತುಳಿತ ಉಂಟಾಗಿ 8 ಜನ ಸಾವಿಗೀಡಾಗಿದ್ದರು. ಅಲ್ಲದೇ ಹಲವರು ಗಾಯಗೊಂಡಿದ್ದರು.

ABOUT THE AUTHOR

...view details