ಕರ್ನಾಟಕ

karnataka

ಗುರುವಾರದ ರಾಶಿ ಭವಿಷ್ಯ: ಈ ರಾಶಿಯವರು ಸತತ ಪ್ರಯತ್ನದಿಂದ ಇಂದು ಯಶಸ್ಸು ಗಳಿಸುತ್ತೀರಿ!

By

Published : May 18, 2023, 5:09 AM IST

ಗುರುವಾರದ ರಾಶಿ ಭವಿಷ್ಯ ಹೀಗಿದೆ ನೋಡಿ...

ರಾಶಿ ಭವಿಷ್ಯ
ರಾಶಿ ಭವಿಷ್ಯ

ಮೇಷ : ಹಳೆಯ, ಆತ್ಮೀಯ ನೆನಪುಗಳು ಇಂದು ನಿಮ್ಮ ಮನಸ್ಥಿತಿಯನ್ನು ನಿರ್ಧರಿಸುತ್ತವೆ, ಅವು ನೀವು ಕೆಲಸದೊಂದಿಗೆ ಹೇಗೆ ವ್ಯವಹರಿಸುತ್ತೀರಿ ಎಂದು ತೋರುತ್ತವೆ, ಅವು ಇತರರಿಗೆ ನಿಮ್ಮ ಮಧುರವಾದ ಭಾಗವನ್ನು ಇತರರಿಗೆ ಕಾಣುವಂತೆ ಮಾಡುತ್ತವೆ. ನೀವು ಹಣದೊಂದಿಗೆ ಜಾಗರೂಕತೆ ವಹಿಸುತ್ತೀರಿ ಮತ್ತು ಅದನ್ನು ಉಳಿಸುವ ಕುರಿತು ಪ್ರಯತ್ನಿಸುತ್ತೀರಿ.

ವೃಷಭ : ಇಂದು ನೀವು ಅತಿಯಾದ ಆಕ್ರಮಣಶೀಲತೆ, ಪ್ರಾಬಲ್ಯದಿಂದ ವರ್ತಿಸುತ್ತೀರಿ. ನಿಮ್ಮ ಆಕ್ರಮಣಶೀಲತೆಯನ್ನು ನಿಯಂತ್ರಿಸುವುದು ಅಗತ್ಯ. ಹೊಸ ಉದ್ಯಮಗಳು ಮತ್ತು ಜವಾಬ್ದಾರಿಗಳಿಗೆ ಇದು ಸೂಕ್ತವಾದ ದಿನವಲ್ಲ. ಆದ್ದರಿಂದ ಯಾವುದೇ ಹೊಸದನ್ನು ಪ್ರಯತ್ನಿಸದಿರಿ. ಸ್ನೇಹಪರವಾಗಿ ಮಾತನಾಡಿ.

ಮಿಥುನ : ನಿಮ್ಮ ಆಕ್ರಮಣಕಾರಿ ಸ್ವಭಾವದಿಂದ ನೀವು ಜನರೊಂದಿಗೆ ವಾದವಿವಾದದಲ್ಲಿ ಸಿಲುಕಿಕೊಳ್ಳುತ್ತೀರಿ. ಈ ಜನರು ನಿಮ್ಮ ಶತೃತ್ವದಿಂದಾಗಿ ನಿಮ್ಮ ಪ್ರತಿಷ್ಠೆಗೆ ಧಕ್ಕೆ ತರುತ್ತಾರೆ. ಆದಾಗ್ಯೂ, ನೀವು ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತೀರಿ. ಅವರು ನಿಮ್ಮ ಬೌದ್ಧಿಕ ಔನ್ನತ್ಯದಿಂದ ಕೈ ಚೆಲ್ಲಬೇಕಾಗುತ್ತದೆ. ಎಚ್ಚರದಿಂದಿರಿ.

ಕರ್ಕಾಟಕ : ನೀವು ಹೊಸ ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಅವರೊಂದಿಗೆ ಸಂತೋಷದ ಸಮಯ ನಿಮ್ಮದಾಗುತ್ತದೆ, ಆದರೆ ಕೆಲ ಚಿಂತೆ ಅಥವಾ ಒತ್ತಡ ನಿಮ್ಮನ್ನು ಹಿಂದಕ್ಕೆಳೆಯುತ್ತದೆ. ಆದಾಗ್ಯೂ, ಈ ಎಲ್ಲ ಚಿಂತೆಗಳು ನೀವು ಸಂಜೆ ನಿಮ್ಮ ಮಿತ್ರರೊಂದಿಗೆ ನಿರಾಳತೆ ಅನುಭವಿಸುವಾಗ ದೂರ ಹೋಗುತ್ತವೆ.

ಸಿಂಹ : ಇಂದು, ನಿಮ್ಮ ಜೀವನವಿಡೀ ನೀವು ಕಾಯುತ್ತಿದ್ದ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶವಿದೆ. ನಿಮ್ಮ ಸಂಗಾತಿಗೆ ಸುಂದರ ಉಡುಗೊರೆ ನೀಡುವ ಸಾಧ್ಯತೆ ಇದೆ. ನೀವು ಕಲೆಯ ಕುರಿತು ಹೆಚ್ಚು ಗಮನ ನೀಡುತ್ತೀರಿ ಮತ್ತು ಈ ಹೊಸದಾಗಿ ಬಂದಿರುವ ಶ್ಲಾಘನೆಯನ್ನು ಗರಿಷ್ಠ ಮಟ್ಟದಲ್ಲಿ ಪ್ರದರ್ಶಿಸಲು ಸಮರ್ಥರಾಗುತ್ತೀರಿ.

ಕನ್ಯಾ : ಇಂದು ವೆಚ್ಚಗಳು ನಿಯಂತ್ರಣವಿಲ್ಲದೆ ಏರುತ್ತವೆ, ಮತ್ತು ಅವುಗಳು ಬಹುತೇಕ ವ್ಯರ್ಥವಾಗಿರುತ್ತವೆ. ಆದಾಗ್ಯೂ, ಧನಾತ್ಮಕ ಶಕ್ತಿಗಳು ವೇಗ ಪಡೆಯುತ್ತಿವೆ, ಮತ್ತು ಅವುಗಳನ್ನು ನಿಮ್ಮ ವೈಯಕ್ತಿಕ ಹಾಗೂ ವೃತ್ತಿ ಕ್ಷೇತ್ರಗಳಲ್ಲಿ ಪೂರ್ಣ ಬಳಕೆ ಮಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ.

ತುಲಾ : ನಿಮ್ಮ ಪ್ರೀತಿಪಾತ್ರರೊಂದಿಗೆ ಹತ್ತಿರವಾಗಲು ಇಂದು ಸೂಕ್ತವಾದ ದಿನವಾಗಿದೆ. ನೀವಿಬ್ಬರೂ ನಿಮ್ಮ ಒತ್ತಡದ ಕಾರ್ಯಗಳ ನಡುವೆಯೂ ಒಟ್ಟಾಗಿ ಕಾಲ ಕಳೆಯಲು ಶಕ್ತರಾಗುತ್ತೀರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಂಜೆ ಕಾಲ ಕಳೆಯುತ್ತೀರಿ. ಇಂದು ನೀವು ಮಾನಸಿಕವಾಗಿಯೂ ಶಕ್ತಿಯುತವಾಗಿರುತ್ತೀರಿ. ಈ ದಿನವನ್ನು ಸಮರ್ಥವಾಗಿ ಬಳಸಿಕೊಳ್ಳಿರಿ.

ವೃಶ್ಚಿಕ : ಇಂದು ನಿಮ್ಮ ಎಲ್ಲ ರಕ್ಷಣೆಗಳನ್ನು ಹೆಚ್ಚಿಸಿ ಮತ್ತು ಜಾಗರೂಕರಾಗಿರಿ. ಯಾರಿಗೋ ಉದ್ದೇಶಿಸಿದ ದಾಳಿಯೊಂದು ನಿಮ್ಮ ದಾರಿಯತ್ತ ತಿರುಗಬಹುದು. ಆದರೆ ನಿಮ್ಮ ಎಚ್ಚರ ನಿಮ್ಮನ್ನು ಸಂಕಷ್ಟದಿಂದ ರಕ್ಷಿಸುತ್ತದೆ. ಹಳೆಯ ನೀತಿಕಥೆಗಳಂತೆ ಈ ಅನುಭವಗಳು ಅವುಗಳಲ್ಲಿ ಪಾಠವನ್ನು ಒಳಗೊಂಡಿರುತ್ತವೆ.

ಧನು : ನೀವು ಧಾರ್ಮಿಕ ಉತ್ಸಾಹದಿಂದ ಇರುವುದನ್ನು ನಿರೀಕ್ಷಿಸಿ. ಕಾರ್ಯಕ್ರಮ ಅಥವಾ ಉದ್ಘಾಟನೆಗಾಗಿ ನೀವು ಎಲ್ಲರ ಕೇಂದ್ರಬಿಂದುವಾಗಿರುತ್ತೀರಿ. ಪ್ರಯಾಣದ ಸಾಧ್ಯತೆಗಳಿವೆ, ಆದ್ದರಿಂದ ದೂರದ ವ್ಯಾಪಾರ ಪ್ರವಾಸಕ್ಕಾಗಿ ನಿಮ್ಮ ಬ್ಯಾಗ್ ಗಳನ್ನು ಸಜ್ಜುಗೊಳಿಸಿಕೊಳ್ಳಿ.

ಮಕರ : ಕಳೆದ ಕೆಲ ತಿಂಗಳು ಕಠಿಣವಾಗಿದ್ದು ನೀವು ನಿಮ್ಮ ಬಂಧುಮಿತ್ರರೊಂದಿಗೆ ಸಂತೋಷಪಡುವುದನ್ನು ಕಳೆದುಕೊಂಡಿದ್ದೀರಿ. ನಿಮ್ಮ ಬದ್ಧತೆ ಮತ್ತು ಶ್ರಮ ನಿಮಗೆ ನೀವು ಬಯಸಿದ ಹಂತಕ್ಕೆ ತಂದಿದೆ. ನೀವು ಈಗ ಕುಳಿತುಕೊಂಡು, ಅದರ ಪ್ರತಿಫಲ ಪಡೆಯುವುದು ಮತ್ತು ವೈಭವ ಅನುಭವಿಸುವ ಕಾಲ.

ಕುಂಭ : ಇಂದು ನೀವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸುಲಭ ಎಂದು ಕಾಣುವ ದಿನವಾಗಿದೆ. ಜನರು ಸುಲಭವಾಗಿ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಸರಿಸುವ ಜನರನ್ನು ಕಾಣುತ್ತೀರಿ. ಎಚ್ಚರದಿಂದಿರಿ, ಕಿರಿಕಿರಿ ಅನುಭವಿಸಬೇಡಿ, ನಿಮ್ಮ ದೌರ್ಬಲ್ಯಗಳೇ ನಿಮ್ಮ ಬಲವಾದ ಅಂಶಗಳಾಗುವ ಸುವರ್ಣಾವಕಾಶ ನಿಮಗಾಗಿ ಕಾದಿದೆ.

ಮೀನ : ಇಂದು ನಿಮ್ಮ ತಾರೆಗಳು ಪೂರಕವಾಗಿಲ್ಲದೇ ಇರುವುದರಿಂದ ನಿಮ್ಮ ಹಣಕಾಸು ವ್ಯವಹಾರಗಳ ಕುರಿತು ಒಂದು ಕಣ್ಣಿಡಿ. ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಕುರಿತು ನೀವು ಜಾಗರೂಕತೆಯಿಂದ ಇರುವುದು ಉತ್ತಮ.

ಇದನ್ನೂ ಓದಿ :ಬುಧವಾರದ ಭವಿಷ್ಯ.. ದಾರಿ ತಪ್ಪಿಸುವ ವಿಷಯಗಳನ್ನು ಕಡೆಗಣಿಸಿ, ಸಕಾರಾತ್ಮಕವಾಗಿ ಆಲೋಚಿಸಿ

ABOUT THE AUTHOR

...view details