ಕರ್ನಾಟಕ

karnataka

ETV Bharat / bharat

ಈ ಮಹಿಳಾ ಪೊಲೀಸ್ ಠಾಣೆಗೆ ರಾತ್ರಿ 8 ಗಂಟೆಯ ನಂತರ ಪುರುಷರಿಗೆ ನೋ ಎಂಟ್ರಿ! - ಪುರುಷ ಗೃಹ ರಕ್ಷಕ ದಳದ ಸಿಬ್ಬಂದಿಗೆ ಠಾಣೆಯೊಳಗೆ ಪ್ರವೇಶವಿಲ್ಲ

ಉತ್ತರಪ್ರದೇಶದ ಶಾಮ್ಲಿಯ ಮಹಿಳಾ ಠಾಣೆಯ ಗೇಟ್​ನನ್ನು ರಾತ್ರಿ 8 ಗಂಟೆಯ ನಂತರ ಮುಚ್ಚಲಾಗುತ್ತಿದೆಯಂತೆ. ಈ ಠಾಣೆಗೆ ನಿಯೋಜನೆಗೊಂಡಿರುವ ಪುರುಷ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಠಾಣೆ ಒಳಗೆ ಬಿಡುತ್ತಿಲ್ಲವಂತೆ. ಇದರಿಂದ ಅವರಿಗೆ ತೊಂದರೆ ಆಗುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಶಾಮ್ಲಿ ಮಹಿಳಾ ಪೊಲೀಸ್ ಠಾಣೆ
ಶಾಮ್ಲಿ ಮಹಿಳಾ ಪೊಲೀಸ್ ಠಾಣೆ

By

Published : Jul 7, 2022, 4:18 PM IST

Updated : Jul 7, 2022, 4:48 PM IST

ಶಾಮ್ಲಿ (ಉತ್ತರಪ್ರದೇಶ):ಪೊಲೀಸ್ ಇಲಾಖೆಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಗೃಹ ರಕ್ಷಕ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಇದೀಗ ಶಾಮ್ಲಿ ಜಿಲ್ಲೆಯಲ್ಲೂ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಜಿಲ್ಲಾ ಕೇಂದ್ರದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ (ಶಾಮ್ಲಿ ಮಹಿಳಾ ಠಾಣೆ) ನಿಯೋಜನೆಗೊಂಡಿರುವ ಗೃಹ ರಕ್ಷಕರು, ಠಾಣಾಧಿಕಾರಿಯ ಕೆಲ ನಿರ್ಧಾರದಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಅಲ್ಲದೇ ಇಲ್ಲಿ ನಿಯೋಜಿಸಲಾದ ಗೃಹರಕ್ಷಕರನ್ನು ರಾತ್ರಿ 8 ಗಂಟೆಯ ನಂತರ ಠಾಣೆ ಒಳಗೆ ಬಿಡುವುದಿಲ್ಲವಂತೆ.

ರಾತ್ರಿ 8 ಗಂಟೆಯ ನಂತರ ಯಾವುದೇ ವ್ಯಕ್ತಿ ಒಳಗೆ ಹೋಗಬಾರದು ಎಂದು ಎಸ್‌ಎಚ್‌ಒ ಆದೇಶಿಸಿದ್ದಾರೆ. ಆದ್ದರಿಂದ ಪೊಲೀಸ್ ಠಾಣೆಯ ಗೇಟ್​ನನ್ನು ರಾತ್ರಿ ಮುಚ್ಚಲಾಗುತ್ತದೆ ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ನಿಯೋಜನೆಗೊಂಡ ಗೃಹ ರಕ್ಷಕ ಧರ್ಮೇಂದ್ರ ಕುಮಾರ್ ಹೇಳುತ್ತಾರೆ. ಭದ್ರತೆಯಲ್ಲಿ ನಿಯೋಜಿಸಲಾಗಿದ್ದರೂ ಸಹ ಒಳಗೆ ಹೋಗಲು ಅವಕಾಶವಿಲ್ಲ ಎಂದು ಗೃಹ ರಕ್ಷಕರು ಹೇಳಿದರು. ಪೊಲೀಸ್ ಠಾಣೆಯ ಹೊರಗೆ ಸುರಕ್ಷಿತ ಛಾವಣಿಯ ಕೆಳಗೆ ಕುಳಿತುಕೊಳ್ಳಲು ವ್ಯವಸ್ಥೆಯನ್ನೂ ಸಹ ಮಾಡಿಲ್ಲ.

ಮಹಿಳಾ ಪೊಲೀಸ್ ಠಾಣೆಯಲ್ಲಿ ರಾತ್ರಿ ಕರ್ತವ್ಯಕ್ಕೆ ನಿಯೋಜನೆಗೊಂಡ ಇನ್ನೊಬ್ಬ ಗೃಹ ರಕ್ಷಕ ಸುಭಾಷ್ ಮಲಿಕ್ ಮಾತನಾಡಿ, ಯಾವುದೇ ಸೌಲಭ್ಯಗಳಿಲ್ಲದೇ ರಾತ್ರಿಯಲ್ಲಿ ಠಾಣೆಯ ಹೊರಗೆ ಇರುತ್ತೇವೆ. ಈ ಕುರಿತು ಎಲ್ಲ ಹಿರಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ಆದರೆ, ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ.

ಇದನ್ನೂ ಓದಿ:ಸಿಎಂ ಏಕನಾಥ್ ಶಿಂದೆ ಭೇಟಿ ಮಾಡಿದ ಶಿವಸೇನೆಯ 66 ಕಾರ್ಪೋರೇಟರ್ಸ್​​.. ಬಂಡಾಯ ಗುಂಪಿಗೆ ಸೇರ್ಪಡೆ

SHO ಸಂಧ್ಯಾ ವರ್ಮಾ ಹೇಳೋದೇನು?: ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಂಧ್ಯಾ ವರ್ಮಾ ಮಾತನಾಡಿ, ಶಿಷ್ಟಾಚಾರದ ಪ್ರಕಾರ ಗೃಹರಕ್ಷಕರಿಗೆ ರಾತ್ರಿ 8 ಗಂಟೆಯ ನಂತರ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಆದರೆ, ಕೆಲವರು ತಪ್ಪು ಮಾಡುತ್ತಿದ್ದಾರೆ. ಗೃಹ ರಕ್ಷಕರನ್ನು ಹೊರತುಪಡಿಸಿ ಪೊಲೀಸ್ ಠಾಣೆಯಲ್ಲಿರುವ ಎಲ್ಲ ನೌಕರರು ಮಹಿಳೆಯರೇ ಆಗಿದ್ದಾರೆ ಎಂದರು.

ಮತ್ತೊಂದೆಡೆ, ಶಾಮ್ಲಿ ಜಿಲ್ಲೆಯ ಗೃಹರಕ್ಷಕ ದಳದ ಕಮಾಂಡೆಂಟ್ ಕಮಲೇಶ್ ಕುಮಾರ್ ಯಾದವ್ ಮಾತನಾಡಿ, ಈ ವಿಷಯವು ಮೌಖಿಕವಾಗಿ ನನ್ನ ಮುಂದೆ ಬಂದಿದೆ. ತನಿಖೆಯ ಆಧಾರದ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Last Updated : Jul 7, 2022, 4:48 PM IST

ABOUT THE AUTHOR

...view details