ಕರ್ನಾಟಕ

karnataka

By

Published : Dec 5, 2021, 5:50 AM IST

ETV Bharat / bharat

ಏಕತೆಯ ಸಂದೇಶ: ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು

ಹಜರತ್ ಶಾ ಆಲಂ ದರ್ಗಾದಲ್ಲಿ ಹಿಂದೂ ಸಾಧುಗಳು ಕವ್ವಾಲಿ ಆಯೋಜಿಸುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ.

ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು,Hindu sadhus qawwals performe in darga
ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು

ಅಹಮದಾಬಾದ್‌:ಇಲ್ಲಿನ ಹಜರತ್ ಶಾ ಆಲಂ ದರ್ಗಾದಲ್ಲಿ ಹಿಂದೂ ಸಾಧುಗಳು ಕವ್ವಾಲಿ ಹಾಡಿದ್ದಾರೆ. ಈ ಮೂಲಕ ದರ್ಗಾದಲ್ಲಿ ಏಕತೆಯ ಸಂದೇಶವನ್ನು ಸಾರಿದ್ದಾರೆ. ಕವ್ವಾಲಿಯಲ್ಲಿ ಮುಸ್ಲಿಂ ಸಮುದಾಯವದರು ಪಾಲ್ಗೊಂಡಿದ್ದು ವಿಶೇಷ.

ದರ್ಗಾಗೆ ಹಿಂದೂ ಸಮುದಾಯದವರು ಸೇರಿ ಎಲ್ಲ ಧರ್ಮದವರು ಭೇಟಿ ನೀಡುತ್ತಾರೆ. ಆದ್ರೆ ಇದೀಗ ಹಿಂದೂ ಸಾಧುಗಳು ಮುಂದುವರಿದು ಇಲ್ಲೇ ಕವ್ವಾಲಿ ಹಾಡಿದ್ದಾರೆ. ಮುಸ್ಲಿಂ ಸಮುದಾಯದವರು ಕೂಡ ಇದರಲ್ಲಿ ಪಾಲ್ಗೊಂಡಿದ್ದರು ಎಂದು ದರ್ಗಾದ ಮೌಲ್ವಿ ಸೋಬ್ ಖಾನ್ ಪಠಾಣ್ ತಿಳಿಸಿದ್ದಾರೆ.

ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು

ದೇಶದಲ್ಲಿ ಸಹೋದರತ್ವ ನೆಲೆಸಬೇಕು. ಎಲ್ಲರೂ ಒಟ್ಟಾಗ ಬದುಕಬೇಕು ಎಂದು ಮೌಲ್ವಿ ಆಶಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಿಂದೂ ಸಾಧುಗಳಿಗೆ ಹೂಗುಚ್ಛ ನೀಡಿ ದರ್ಗಾ ಸಿಬ್ಬಂದಿ ಸ್ವಾಗತಿಸಿದರು.

ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು

ABOUT THE AUTHOR

...view details