ಕರ್ನಾಟಕ

karnataka

ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ವಿಚಾರವನ್ನು ಕೇಂದ್ರ-ರಾಜ್ಯ ಒಟ್ಟಾಗಿ ಚರ್ಚಿಸಬೇಕು: ಸೀತಾರಾಮನ್​

By

Published : Mar 5, 2021, 8:36 PM IST

ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ ಒಂದು ಧರ್ಮಸಂಕಟವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ವಿಚಾರವಾಗಿ ಒಟ್ಟಾಗಿ ಚರ್ಚಿಸಬೇಕು ಎಂದು ತಿಳಿಸಿದ್ದಾರೆ.

FM Sitharaman
FM Sitharaman

ನವದೆಹಲಿ:ದೇಶಾದ್ಯಂತ ಕಳೆದ ಕೆಲ ದಿನಗಳಿಂದ ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕರು ಪ್ರತಿದಿನ ಹಿಡಿಶಾಪ ಹಾಕುತ್ತಿದ್ದಾರೆ. ಇದೇ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ದಾರೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೆಹಲಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್​, ಪೆಟ್ರೋಲ್​, ಡೀಸೆಲ್​ ಮೇಲಿನ ತೆರಿಗೆ ಕಡಿತಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಚರ್ಚೆ ನಡೆಸುವ ಅವಶ್ಯಕತೆ ಇದೆ ಎಂದಿರುವ ಅವರು, ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿದೆ ಎಂಬ ವಿಷಯ ಒಪ್ಪಿಕೊಂಡಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಗ್ರಾಹಕರ ಅವಶ್ಯಕತೆ ನಮಗೆ ಅರ್ಥವಾಗಿದೆ. ಆದರೆ ಈಗ ಸರ್ಕಾರಕ್ಕೆ ಭೀಕರ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಏನೇನು ತೆರಿಗೆ ಸಂಗ್ರಹಿಸುತ್ತದೋ ಅದರಲ್ಲಿ 41%ರಷ್ಟು ರಾಜ್ಯಗಳಿಗೆ ಹೋಗುತ್ತದೆ ಎಂದರು.

ಇದನ್ನೂ ಓದಿ: ತೈಲ ಬೆಲೆ ಸತತ ಏರಿಕೆ... ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?

ತೈಲ ದರದ ಮೇಲೆ ಕೇಂದ್ರ ಅಬಕಾರಿ ಸುಂಕ ವಿಧಿಸಿದರೆ, ರಾಜ್ಯಗಳು ವ್ಯಾಟ್​ ಹಾಗೂ ವಿವಿಧ ದರ ವಿಧಿಸುತ್ತವೆ. ಹೀಗಾಗಿ ಕೆಲವೊಂದು ರಾಜ್ಯಗಳಲ್ಲಿ ಹೆಚ್ಚಿನ ವ್ಯಾಟ್​ ಇರುವ ಕಾರಣ ದರ ಏರಿಕೆಯಾಗಿದೆ ಎಂದು ಅವರು ಹೇಳಿದರು. ಈ ಹಿಂದೆ ಕೂಡ ಇದೇ ವಿಚಾರವಾಗಿ ಮಾತನಾಡಿದ್ದ ನಿರ್ಮಲಾ, ಚಿಲ್ಲರೆ ಇಂಧನ ಬೆಲೆಯನ್ನು ಗ್ರಾಹಕರಿಗೆ ಸಮಂಜಸವಾದ ಮಟ್ಟದಲ್ಲಿ ಇಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತನಾಡಬೇಕು ಎಂದಿದ್ದರು.

ABOUT THE AUTHOR

...view details