ಕರ್ನಾಟಕ

karnataka

ETV Bharat / bharat

ಪಶ್ಚಿಮ ಬಂಗಾಳದಲ್ಲಿ ಕೆಂಪು ದಾಸವಾಳ ಹೂವಿಗೆ ಭಾರಿ ಡಿಮ್ಯಾಂಡ್, ಗಗನಕ್ಕೇರಿದ ಬೆಲೆ - ಪಶ್ಚಿಮ ಬಂಗಾಳದಲ್ಲಿ ಏರಿಕೆ

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೈಗೊಳ್ಳುವ ಕಾಳಿ ಪೂಜೆಗೆ ಕೆಂಪು ದಾಸವಾಳ ಕಡ್ಡಾಯ. ಈ ಹೂವನ್ನು ಸಮರ್ಪಿಸದೇ ಮೂಡುವ ಪೂಜೆ ಅಪೂರ್ಣ ಎಂಬ ಭಾವ ಪಶ್ಚಿಮ ಬಂಗಾಳ ಜನರಲ್ಲಿದೆ.

hibiscus flower  price raising in west bengal during kali puja
hibiscus flower price raising in west bengal during kali puja

By ETV Bharat Karnataka Team

Published : Nov 9, 2023, 12:33 PM IST

ಕೊಲ್ಕತ್ತಾ:ಹಬ್ಬದ ಸಮಯದಲ್ಲಿ ಹೂವಿನ ಬೆಲೆ ದುಬಾರಿಯಾಗುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ ಏರಿಕೆಯಾಗುತ್ತಿರುವ ಹೂವಿನ ದರ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮಲ್ಲಿಗೆ, ಕಮಲ, ಸೇವಂತಿಗೆ ಸೇರಿದಂತೆ ಪ್ರಮುಖ ಹೂವುಗಳ ಬೆಲೆ ಗಗನಕ್ಕೇರುತ್ತವೆ. ಆದರೆ, ಇಲ್ಲಿ ಒಂದು ಸಾವಿರ ಕೆಂಪು ದಾಸವಾಳ ಹೂವಿನ ಬೆಲೆ 1,000 ರೂಪಾಯಿ ತಲುಪಿದೆ. ಈ ಬೆಳವಣಿಗೆ ಗ್ರಾಹಕರು ಹುಬ್ಬೇರುವಂತೆ ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಕಾಳಿ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ಈ ಪೂಜೆಗೆ ಕೆಂಪು ದಾಸವಾಳ ಹೂವಿಲ್ಲದೇ ಸಂಪೂರ್ಣವಾಗದು. ಇದೇ ಕಾರಣಕ್ಕೆ ಕಳೆದೊಂದು ವಾರದಿಂದ ಈ ಹೂವಿಗೆ ಬಂಗಾರದ ಬೆಲೆ ಬಂದಿದೆ. ಎಂದಿಗಿಂತ ಬೆಲೆ ಐದು ಪಟ್ಟು ಹೆಚ್ಚಾಗಿದೆ.

ಹೂವು ಮಾರಾಟಗಾರರು ಮಾತನಾಡಿ, "ಈ ಬಾರಿ ಅವಧಿಪೂರ್ವವಾಗಿ ಚಳಿಗಾಲ ಆರಂಭವಾಗಿದೆ. ಇದು ಕೆಂಪು ದಾಸವಾಳ ಹೂವಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಬೆಲೆ ಏರಿಕೆಗೆ ಇದು ಕಾರಣ" ಎಂದರು. ಸಾಮಾನ್ಯವಾಗಿ ಪ್ರತಿವರ್ಷ ಕಾಳಿ ಪೂಜೆಗೂ ಮುನ್ನ ಕೆಂಪು ದಾಸವಾಳ ಹೂವಿನ ಬೆಲೆ ಏರಿಕೆಯಾಗುತ್ತದೆ. ಕಳೆದ ವಾರ 60 ರಿಂದ 40ರೂಗೆ ಮಾರಾಟವಾಗುತ್ತಿದ್ದ ದಾಸವಾಳ ಹೂವಿನ ಬೆಲೆ ಈಗ 350 ರಿಂದ 400 ರೂ.ನಂತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎಂದು ಅವರು ತಿಳಿಸಿದರು.

ಭಾನುವಾರ ಕಾಳಿ ಪೂಜೆ ನಡೆಯಲಿದೆ. ಈ ಸಂದರ್ಭದಲ್ಲಿ ಹೂವಿನ ಬೆಲೆ ಮತ್ತಷ್ಟು ಏರಿಕೆ ಕಾಣಲಿದೆ. ಸಾವಿರ ಹೂವಿಗಳಿಗೆ ಸಾವಿರ ರೂಪಾಯಿಯಂತೆ ಮಾರಾಟವಾದರೂ ಅಚ್ಚರಿಯಿಲ್ಲ ಎಂದು ಅವರು ಭವಿಷ್ಯ ನುಡಿದರು.

ಬೇಡಿಕೆ ಹೆಚ್ಚಳ-ಉತ್ಪನ್ನ ಕುಸಿತ: ಈ ಬಾರಿ ಕೆಂಪು ದಾಸವಾಳ ಅನಿರೀಕ್ಷಿತವಾಗಿ ರೀತಿ ದರ ಏರಿಕೆ ಕಂಡಿರುವುದಕ್ಕೆ ಕಾರಣ ಉತ್ಪಾದನೆ ಕುಸಿತ. ಹೂ ಬೆಳೆಗಾರರು ಸಾಮಾನ್ಯ ದರಕ್ಕೆ ಚಿಲ್ಲರೆ ಮಾರಾಟದಾರರಿಗೆ ಮಾರಾಟ ಮಾಡಿದ್ದಾರೆ. ಅವರು ಮತ್ತಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಂತಿಮವಾಗಿ, ಗ್ರಾಹಕರಿಗೆ ದಾಸವಾಳ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದರು.

ದೀಪಾವಳಿ ಸಮಯದಲ್ಲಿ ಋತುಮಾನದ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯ ಹೂವುಗಳಿಗಿಂತ ಚೆಂಡು ಹೂವು ಮತ್ತು ದಾಸವಾಳಕ್ಕೆ ಬೇಡಿಕೆ ಜಾಸ್ತಿ. ಪ್ರಸಕ್ತ ಋತುಮಾನದಲ್ಲಿ ಈ ಹೂವಿನಿಂದಾಗಿ ಬೆಳೆಗಾರರು ಕೈತುಂಬಾ ಸಂಪಾದಿಸುತ್ತಾರೆ. ಇಡೀ ಮಾಸಾಂತ್ಯದವರೆಗೆ ಕೆಂಪು ದಾಸವಾಳ ಹೂವಿನ ಬೇಡಿಕೆ ದೇಶದೆಲ್ಲೆಡೆ ಕಾಣಬಹುದು ಎನ್ನುತ್ತಾರೆ ಹೂವಿನ ಮಾರಾಟಗಾರರು (ಐಎಎನ್​ಎಸ್​)

ಇದನ್ನೂ ಓದಿ: ಮುಂಬೈಯಲ್ಲೂ ಹೆಚ್ಚುತ್ತಿದೆ ವಾಯು ಮಾಲಿನ್ಯ; ಜೆ.ಜೆ.ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ರತ್ಯೇಕ ಒಪಿಡಿ

ABOUT THE AUTHOR

...view details