ಕರ್ನಾಟಕ

karnataka

ETV Bharat / bharat

ಬುರೆವಿ ಚಂಡಮಾರುತದ ಎಫೆಕ್ಟ್ : ತಮಿಳುನಾಡು, ಕೇರಳ, ಪುದುಚ್ಚೇರಿಯ ಹಲವು ಭಾಗಗಳಲ್ಲಿ ಮಳೆ - Rain in Kerala

ಉತ್ತರ ಶ್ರೀಲಂಕಾದಿಂದ 70 - 80 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತವು ಇಂದು ಮಧ್ಯಾಹ್ನದ ಹೊತ್ತಿಗೆ ಪಂಬನ್‌ ಕರಾವಳಿ ಸಮೀಪಕ್ಕೆ ತಲುಪಿದ್ದು, ಇಂದು ಪಶ್ಚಿಮ ನೈರುತ್ಯ ದಿಕ್ಕಿನ ಪಂಬನ್ ಕರಾವಳಿಗೆ ಅಪ್ಪಳಿಸಲಿದೆ. ಬಳಿಕ ಪಂಬನ್ ಮತ್ತು ಕನ್ಯಾಕುಮಾರಿ ಮೂಲಕ ದಕ್ಷಿಣ ತಮಿಳುನಾಡು ಕರಾವಳಿ ದಾಟಲಿದೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.

By

Published : Dec 3, 2020, 4:12 PM IST

ಚೆನ್ನೈ: ಬುರೆವಿ ಚಂಡಮಾರುತ ದಕ್ಷಿಣ ತಮಿಳುನಾಡಿನ ಪಂಬನ್ ಮತ್ತು ಕನ್ಯಾಕುಮಾರಿ ಕರಾವಳಿ ಹಾದು ಹೋಗಲು ಅಣಿಯಾಗುತ್ತಿರುವ ಹಿನ್ನೆಲೆ ಬುಧವಾರ ರಾತ್ರಿಯಿಂದ ತಮಿಳುನಾಡು ಪುದುಚೇರಿ ಮತ್ತು ಕೇರಳದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಉತ್ತರ ಶ್ರೀಲಂಕಾದಿಂದ 70-80 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತವು ಪಂಬನ್‌ ಕರಾವಳಿ ಸಮೀಪಕ್ಕೆ ತಲುಪಿದ್ದು, ಇಂದು ಪಶ್ಚಿಮ ನೈರುತ್ಯ ದಿಕ್ಕಿನ ಪಂಬನ್ ಕರಾವಳಿಗೆ ಅಪ್ಪಳಿಸಲಿದೆ. ಬಳಿಕ ಪಂಬನ್ ಮತ್ತು ಕನ್ಯಾಕುಮಾರಿ ಮೂಲಕ ದಕ್ಷಿಣ ತಮಿಳುನಾಡು ಕರಾವಳಿ ದಾಟಲಿದೆ ಎಂದು ಐಎಂಡಿ ಸ್ಪಷ್ಟಪಡಿಸಿದೆ.

ತಮಿಳುನಾಡಿನ ಕಾವೇರಿ ಜಲಾನಯ ಪ್ರದೇಶ ತಿರುವರೂರು ಜಿಲ್ಲೆಯ ಕೊಡವಾಸಲ್, ನಾಗಪಟ್ಟಣಂ, ವೇದರಣ್ಯಂ, ಕಾರೈಕಲ್, ತಿರುಥುರೈಪೂಂಡಿ ಮತ್ತು ರಾಮನಾಥಪುರಂನ ಮುಡುಕುಲತೂರ್​ನಲ್ಲಿ ಬುಧವಾರ ರಾತ್ರಿಯಿಂದ ಇಂದು ಬೆಳಗಿನವರೆಗೂ ಗರಿಷ್ಠ 20 ಸೆಂ.ಮೀ. ಮಳೆಯಾಗಿದೆ.

ಇದನ್ನೂ ಓದಿ: ಬುರೆವಿ ಚಂಡಮಾರುತದ ಎಫೆಕ್ಟ್​: ಬೆಂಗಳೂರಲ್ಲಿ ತುಂತುರು ಮಳೆ

ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಬುರೆವಿ ಚಂಡಮಾರುತ ಕೇರಳದ ತಿರುವನಂತಪುರಂಗೆ ಅಪ್ಪಳಿಸುವ ಸಾಧ್ಯತೆಯಿದೆ. ಹೀಗಾಗಿ, ತಿರುವನಂತಪುರಂ, ಕೊಲ್ಲಂ, ಪತ್ತಾನಂತಿಟ್ಟ, ಆಲಪ್ಪುಝ, ಕೊಟ್ಟಾಯಂ, ಇಡುಕ್ಕಿ ಮತ್ತು ಎರ್ನಾಕುಲಂನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಜಿಲ್ಲೆಗಳಲ್ಲಿ ಡಿಸೆಂಬರ್ 3 ರಿಂದ 5 ರವರೆಗೆ ಭಾರಿ ಮಳೆಯಾಗಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕರಾವಳಿ ಭಾಗಕ್ಕೆ ಎನ್​ಡಿಆರ್​ಎಫ್​ ತಂಡಗಳು ಭೇಟಿ ನೀಡಿ ಸ್ಥಳೀಯರಿಗೆ ಎಚ್ಚರದಿಂದ ಇರುವಂತೆ ಸೂಚಿಸಿವೆ.

ದಕ್ಷಿಣ ಕರಾವಳಿಗೆ ಬುರೆವಿ ಅಪ್ಪಳಿಸಲಿರುವ ಹಿನ್ನೆಲೆ ತಮಿಳುನಾಡು ಮತ್ತು ಕೇರಳದ ಜನರಿಗೆ ಎಲ್ಲ ರೀತಿಯ ಸಹಾಯ ನೀಡಲು ಮೋದಿ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ABOUT THE AUTHOR

...view details