ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲೂ ವರುಣನಾರ್ಭಟ.. ರಸ್ತೆಗಳೆಲ್ಲ ಜಲಾವೃತ - ನವದೆಹಲಿ ಭಾರಿ ಮಳೆ,

ರಾಜ್ಯದಲ್ಲಿ ಮಳೆಯಿಂದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮತ್ತೊಂದೆಡೆ ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಗ್ಗೆಯಿಂದ ಭಾರಿ ಮಳೆ ಸುರಿಯುತ್ತಿದೆ. ವರುಣನಾರ್ಭಟದಿಂದ ರಸ್ತೆಗಳೆಲ್ಲ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

Heavy rains cause, Heavy rains cause extensive waterlogging, Heavy rains cause extensive waterlogging in Delhi, Delhi rain Delhi rain news, ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತ, ಭಾರಿ ಮಳೆಯಿಂದಾಗಿ ದೆಹಲಿಯ ಹಲವಾರು ರಸ್ತೆಗಳು ಜಲಾವೃತ, ನವದೆಹಲಿ ಭಾರಿ ಮಳೆ, ನವದೆಹಲಿಯಲ್ಲಿ ಭಾರಿ ಮಳೆ ಸುದ್ದಿ,
ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ವರುಣ ಆರ್ಭಟ

By

Published : Jul 27, 2021, 1:42 PM IST

ನವದೆಹಲಿ:ಬೆಳಗ್ಗೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೆಹಲಿಯ ಪ್ರಮುಖ ರಸ್ತೆಗಳು ನದಿಗಳಂತಾಗಿವೆ. ಧೌಲಾ ಕುವಾನ್, ಮಥುರಾ ರಸ್ತೆ, ಮೋತಿ ಬಾಗ್, ವಿಕಾಸ್ ಮಾರ್ಗ, ರಿಂಗ್ ರಸ್ತೆ, ರೋಹ್ಟಕ್ ರಸ್ತೆ, ಸಂಗಮ್ ವಿಹಾರ್, ಕಿರಾರಿ ಮತ್ತು ಪ್ರಗತಿ ಮೈದಾನದ ಸಮೀಪ ಇರುವ ಕೆಲವು ಪ್ರದೇಶಗಳು ಈಗ ನದಿಯಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಂಬೆಳಗ್ಗೆ ವರುಣನಾರ್ಭಟ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, 16 ದಿನ ತಡವಾಗಿ ಅಂದರೆ ನೈಋತ್ಯ ಮಾನ್ಸೂನ್ ಜುಲೈ 13 ರಂದು ರಾಜಧಾನಿಯನ್ನು ತಲುಪಿದೆ. ಸಾಮಾನ್ಯವಾಗಿ, ಪ್ರತಿ ವರ್ಷ ಮಾನ್ಸೂನ್ ಜೂನ್ 27 ರ ವೇಳೆಗೆ ದೆಹಲಿ ತಲುಪುತ್ತದೆ. ಈ ಬಾರಿ 16 ದಿನಗಳು ತಡವಾಗಿದೆ.

ಮಾನ್ಸೂನ್​​ ಜುಲೈ 8 ರ ವೇಳೆಗೆ ಇಡೀ ದೇಶವನ್ನು ಆವರಿಸಿತು. ಕಳೆದ ವರ್ಷ ಮುಂಗಾರು​ ಜೂನ್ 25 ರಂದು ದೆಹಲಿ ತಲುಪಿ, ಜೂನ್ 29 ರ ವೇಳೆಗೆ ಇಡೀ ದೇಶವನ್ನು ಆವರಿಸಿತ್ತು ಎಂದು ಐಎಂಡಿ ಮಂಗಳವಾರ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿನ ಮಳೆ ಮಾಪಕದಲ್ಲಿ 100 ಮಿ.ಮೀ ದಾಖಲಾಗಿದ್ದು, ದೆಹಲಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ABOUT THE AUTHOR

...view details