ಕರ್ನಾಟಕ

karnataka

Watch.. ಚಿತ್ರ ಪ್ರದರ್ಶನವಾಗ್ತಿದ್ದಾಗಲೇ ನುಗ್ಗಿದ ಮಳೆ ನೀರು, ಸಿನಿಪ್ರಿಯರು ಹೈರಾಣು.. ಪ್ರೇಕ್ಷಕರ ಬೈಕ್​​ ಜಖಂ!

By

Published : Oct 9, 2021, 8:35 PM IST

ಮುತ್ತಿನ ನಗರಿಯಲ್ಲಿ ಸುರಿದ ರಣಭೀಕರ ಮಳೆಯಿಂದಾಗಿ ಅನೇಕ ಅನಾಹುತ ಸಂಭವಿಸಿದ್ದು, ಚಿತ್ರ ಪ್ರದರ್ಶನವಾಗುತ್ತಿದ್ದ ಸಂದರ್ಭದಲ್ಲೇ ಮಳೆ ನೀರು ನುಗ್ಗಿ ಸಮಸ್ಯೆ ಎದುರಾಗಿದೆ.

Heavy Flood flow to cinema theatre
Heavy Flood flow to cinema theatre

ಹೈದರಾಬಾದ್​​(ತೆಲಂಗಾಣ):ತೆಲಂಗಾಣದಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದ್ದು, ರಸ್ತೆಗಳೆಲ್ಲವೂ ಕೆರೆಯಂತಾಗಿ ತುಂಬಿ ಹರಿದಿವೆ. ಇದರಿಂದ ವಾಹನ ಸವಾರರು ತೊಂದರೆಗೊಳಗಾಗಿದ್ದಾರೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿರುವ ಕಾರಣ ಇನ್ನಿಲ್ಲದ ಸಮಸ್ಯೆ ಎದುರಾಗಿದೆ.

ಚಿತ್ರ ಪ್ರದರ್ಶನವಾಗ್ತಿದ್ದಾಗಲೇ ನುಗ್ಗಿದ ಮಳೆ ನೀರು

ಹೈದರಾಬಾದ್​ನ ದಿಲ್​​ಸುಖ್​​ನಗರದಲ್ಲಿರುವ ಶಿವಗಂಗಾ ಥಿಯೇಟರ್​ನಲ್ಲಿ ಏಕಾಏಕಿ ಮಳೆ ನೀರು ನುಗ್ಗಿರುವ ಕಾರಣ ಸಿನಿಪ್ರಿಯರು ತೊಂದರೆಗೊಳಗಾದ ಘಟನೆ ನಡೆದಿದೆ. ಚಿತ್ರ ವೀಕ್ಷಣೆ ಮಾಡ್ತಿದ್ದ ವೇಳೆ ಮಳೆ ನೀರು ಏಕಾಏಕಿ ಚಿತ್ರಮಂದಿರದೊಳಗೆ ನುಗ್ಗಿದೆ. ಈ ವೇಳೆ ಚಿತ್ರಮಂದಿರದ ಕಾಂಪೌಂಡ್​ ಗೋಡೆ ಕುಸಿದು ಬಿದ್ದಿರುವ ಪರಿಣಾಮ ಅನೇಕರ ವಾಹನ ಸಂಪೂರ್ಣವಾಗಿ ಜಖಂಗೊಂಡಿವೆ.

ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಇಂದು ಕೂಡ ಮಳೆಯಾಗಿದ್ದು, ಜನರು ತೊಂದರೆ ಅನುಭವಿಸುವಂತಾಯಿತು.

ಇದನ್ನೂ ಓದಿರಿ:Watch... ರಣಭೀಕರ ಮಳೆಗೆ ಮುತ್ತಿನ ನಗರಿ ತತ್ತರ.. ಹೋಟೆಲ್​, ಪ್ರಮುಖ ಸ್ಥಳಗಳಿಗೂ ನುಗ್ಗಿದ ನೀರು!

ಸಿನಿಮಾ ನೋಡಿ ಹೊರಬಂದಿರುವ ಪ್ರೇಕ್ಷಕರಿಗೆ ವಾಹನಗಳು ಜಖಂಗೊಂಡಿರುವುದನ್ನ ನೋಡಿ ಏಕಾಏಕಿ ಆಘಾತಕ್ಕೊಳಗಾಗಿದ್ದಾರೆ. ಇದೀಗ ಚಿತ್ರಮಂದಿರದ ಆಡಳಿತ ಮಂಡಳಿ ಇವುಗಳ ರಿಪೇರಿ ಮಾಡಿಕೊಡುವುದಾಗಿ ತಿಳಿಸಿದೆ. ಘಟನೆಯಲ್ಲಿ ಸುಮಾರು 50ಕ್ಕೂ ಅಧಿಕ ಬೈಕ್​​​ ಜಖಂಗೊಂಡಿವೆ.

ABOUT THE AUTHOR

...view details