ನವದೆಹಲಿ: ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸೇರಿ ನಾಲ್ವರ ವಿರುದ್ಧದ ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಐಎನ್ಎಕ್ಸ್ ಮೀಡಿಯಾ ಹಗರಣ: ಮಾಜಿ ಸಚಿವ ಪಿ.ಚಿದಂಬರಂ ವಿಚಾರಣೆ ಮೇ 4ಕ್ಕೆ ಮುಂದೂಡಿಕೆ - ಐಎನ್ಎಕ್ಸ್ ಮೀಡಿಯಾ ಹಗರಣ.
ನ್ಯಾಯಾಲಯವು ಸಹ - ಆರೋಪಿ ಪೀಟರ್ ಮುಖರ್ಜಿಯ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನೂ ಸಹ ಮುಂದೂಡಿತು. ಇದೇ ಪ್ರಕರಣ ಸಂಬಂಧ ಪಿ. ಚಿದಂಬರಂ ಮತ್ತು ಇತರರಿಗೆ ಇದೇ ಕೋರ್ಟ್ ಈ ಹಿಂದೆ ಸಮನ್ಸ್ ಜಾರಿಗೊಳಿಸಿತ್ತು.

ಐಎನ್ಎಕ್ಸ್ ಮೀಡಿಯಾ ಹಗರಣ
ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಎಂ.ಕೆ ನಾಗ್ಪಾಲ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಇನ್ನು ವಿಚಾರಣೆಗೆ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ವರ್ಚ್ಯುಯಲ್ ಮೂಲಕ ಹಾಜರಾಗಿದ್ದರು.
ಇದರ ನಡುವೆ ನ್ಯಾಯಾಲಯವು ಸಹ - ಆರೋಪಿ ಪೀಟರ್ ಮುಖರ್ಜಿಯಾ ಅವರ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನೂ ಸಹ ಮುಂದೂಡಿತು. ಇದೇ ಪ್ರಕರಣ ಸಂಬಂಧ ಪಿ. ಚಿದಂಬರಂ ಮತ್ತು ಇತರರಿಗೆ ಇದೇ ನ್ಯಾಯಾಲಯವು ಈ ಹಿಂದೆ ಸಮನ್ಸ್ ಜಾರಿಗೊಳಿಸಿತ್ತು.