ಕರ್ನಾಟಕ

karnataka

ETV Bharat / bharat

ಪತ್ನಿ, ಇಬ್ಬರು ಪುತ್ರಿಯರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್​ ಕಾನ್​​ಸ್ಟೇಬಲ್! - ಗುಂಡು ಹಾರಿಸಿ ಕೊಲೆ

Constable Committed Suicide After killing his wife and Two Children: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಪಿಸ್ತೂಲ್​ನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಪೊಲೀಸ್ ಹೆಡ್​ ಕಾನ್​​ಸ್ಟೇಬಲ್​, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Constable Committed Suicide After killing his wife and Two Children
Constable Committed Suicide After killing his wife and Two Children

By PTI

Published : Oct 5, 2023, 1:29 PM IST

ಕಡಪ (ಆಂಧ್ರಪ್ರದೇಶ):ಪೊಲೀಸ್ ಹೆಡ್​ ಕಾನ್​​ಸ್ಟೇಬಲ್​ವೊಬ್ಬರು ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಗುಂಡಿಕ್ಕಿ ಕೊಂದು ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಕಡಪ ನಗರದಲ್ಲಿ ಗುರುವಾರ ನಡೆದಿದೆ. 55 ವರ್ಷದ ಆಂಧ್ರಪ್ರದೇಶ ಪೊಲೀಸ್ ಹೆಡ್​ ಕಾನ್​​ಸ್ಟೇಬಲ್ ವೆಂಕಟೇಶ್ವರಲು, 45 ವರ್ಷದ ತನ್ನ ಪತ್ನಿ ಮತ್ತು 20 ವರ್ಷದ ಹಿರಿಯ ಮಗಳು ಹಾಗೂ 16 ವರ್ಷದ ಕಿರಿಯ ಮಗಳ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಬಳಿಕ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಮತ್ತು ಮಕ್ಕಳ ಮೃತದೇಹಗಳು ಒಂದೆಡೆ ಪತ್ತೆಯಾದರೆ, ವೆಂಕಟೇಶ್ವರಲು ಅವರ ಮೃತದೇಹ ಮತ್ತೊಂದೆಡೆ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇಲ್ಲಿನ ಸಹಕಾರಿ ಕಾಲೋನಿಯಲ್ಲಿರುವ ವಾಸವಿದ್ದ ಮೃತ ಹೆಡ್​ ಕಾನ್​​ಸ್ಟೇಬಲ್ ವೆಂಕಟೇಶ್ವರಲು ಎರಡನೇ ಟೌನ್ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದರು. ಬುಧವಾರ ತಡರಾತ್ರಿ ಮತ್ತು ಗುರುವಾರ ನಸುಕಿನ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಡೆತ್​ ನೋಟ್​ ಪತ್ತೆಯಾಗಿದೆ.

ಮೃತ ಪೊಲೀಸ್ ಹೆಡ್​ ಕಾನ್​​ಸ್ಟೇಬಲ್ ವೆಂಕಟೇಶ್ವರಲು​ ಅವರ ಹಿರಿಯ ಮಗಳು ಪದವಿಯ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದು, ಕಿರಿಯವಳು 10ನೇ ತರಗತಿಯಲ್ಲಿ ಓದುತ್ತಿದ್ದಳು. ಅವರ ಹೆಂಡತಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು ಎಂದು ಕಡಪ ಉಪ- ವಿಭಾಗೀಯ ಪೊಲೀಸ್ ಅಧಿಕಾರಿ ಎಂ.ಡಿ. ಶರೀಫ್ ಅವರು ಹೇಳಿದ್ದಾರೆ.

ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಹಣ ಕಳೆದುಕೊಂಡಿರುವ ಬಗ್ಗೆ ಮತ್ತು ಕೆಲ ಕೌಟುಂಬಿಕ ಸಮಸ್ಯೆಗಳನ್ನು ಡೆತ್​ ನೋಟ್​ನಲ್ಲಿ ಕಾನ್​​ಸ್ಟೇಬಲ್ ವೆಂಕಟೇಶ್ವರಲು ಉಲ್ಲೇಖ ಮಾಡಿದ್ದಾರೆ. ವೆಂಕಟೇಶ್ವರಲು ಅವರು ರಾತ್ರಿ 11 ಗಂಟೆಯವರೆಗೆ ಠಾಣೆಯಲ್ಲಿದ್ದರು. ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಹಣಕಾಸಿನ ಸಮಸ್ಯೆ ಹಾಗೂ ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ. ಈ ಘಟನೆಯ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗಿದೆ. ಅವರ ಮನೆಯಲ್ಲಿ ಪತ್ತೆಯಾದ ಪ್ರಾಮಿಸರಿ ನೋಟ್ಸ್​ ಮತ್ತು ರಿಜಿಸ್ಟರ್ ಬಾಂಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕಡಪಾ ಡಿಎಸ್ಪಿ ಶರೀಫ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಮೃತ ವೆಂಕಟೇಶ್ವರಲು ಮನೆಗೆ ಕಡಪಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಕೌಶಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು. ನಾಲ್ಕು ಸುತ್ತು ಗುಂಡು ಹಾರಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪುಲಿವೆಂದುಲುವಿನ ಕಾನ್​​ಸ್ಟೇಬಲ್ ವೆಂಕಟೇಶ್ವರಲು ಕಳೆದ ಎರಡು ವರ್ಷಗಳಿಂದ ಕಡಪಾ ಎರಡನೇ ಟೌನ್‌ನಲ್ಲಿ ಹೆಡ್ ಕಾನ್​​ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ:ಮೊಮ್ಮಗಳ ಸಿಟಿ ಸ್ಕ್ಯಾನ್​ ಮಾಡಿಸಲು ಆಸ್ಪತ್ರೆಗೆ ರಿವಾಲ್ವರ್ ತಂದ ಬಿಹಾರ ಶಾಸಕ: 'ಇದು ನನ್ನ ಸ್ಟೈಲ್‌' ಎಂದು ಉದ್ಧಟತನ!

ABOUT THE AUTHOR

...view details