ಚಂಡೀಗಢ (ಹರಿಯಾಣ): ಆಸ್ಪತ್ರೆಗಳಿಗೆ ವಿಐಪಿಗಳ ಭೇಟಿಯ ಸಮಯದಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆ ಮತ್ತು ದಾಖಲಾತಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಹರಿಯಾಣದ ಎಲ್ಲಾ ಜಿಲ್ಲೆಗಳ ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ (CMO) ಆರೋಗ್ಯ ಸಚಿವ ಅನಿಲ್ ವಿಜ್ ನಿರ್ದೇಶನ ನೀಡಿದ್ದಾರೆ.
ಜಿಂದ್ ಸಿವಿಲ್ ಆಸ್ಪತ್ರೆಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಬರುತ್ತಾರೆಂದು ಅಧಿಕಾರಿಗಳು ಕೆಲವು ಕಟ್ಟುನಿಟ್ಟಾದ ಪ್ರೋಟೋಕಾಲ್ಗಳನ್ನು ಜಾರಿಗೆ ತಂದಿದ್ದು, ಇದು ರೋಗಿಗಳ ಚಿಕಿತ್ಸೆಗೆ ಸ್ವಲ್ಪ ಅನಾನುಕೂಲತೆಯನ್ನುಂಟು ಮಾಡಿತ್ತು.