ಕರ್ನಾಟಕ

karnataka

By

Published : Apr 14, 2021, 4:32 PM IST

ETV Bharat / bharat

ಕುಂಭಮೇಳದಲ್ಲಿ ಉಳ್ಳವರಿಗೊಂದು.. ಉಳಿದವರಿಗೊಂದು.. ಈ ಅಸಮಾನತೆಯ ವಿರುದ್ಧ ಭಕ್ತರ ಆಕ್ಷೇಪ

ರಾಮ್ ಘಾಟ್‌ನಲ್ಲಿ ಹೋಟೆಲ್ ಬುಕ್ ಮಾಡಲಾಗಿದೆ. ಕುಟುಂಬವು ಹರ್ ಕಿ ಪೌರಿ ಬಳಿಯ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಆಡಳಿತ ವ್ಯವಸ್ಥೆಯ ಈ ಅಸಮಾನತೆಯನ್ನು ಕುಂಭಮೇಳಕ್ಕೆ ಬಂದ ಇತರ ಭಕ್ತರು ಆಕ್ಷೇಪಿಸಿದ್ದಾರೆ..

gupta-brothers-convoys-entry-in-zero-zone-of-kumbh-mela-raises-objection
gupta-brothers-convoys-entry-in-zero-zone-of-kumbh-mela-raises-objection

ಹರಿದ್ವಾರ (ಉತ್ತರಾಖಂಡ) :ಕುಂಭಮೇಳದ ಶೂನ್ಯ ವಲಯದಲ್ಲಿ ಯಾವುದೇ ವಾಹನವನ್ನು ಅನುಮತಿಸಬಾರದು ಎಂದು ಉತ್ತರಾಖಂಡ ಸರ್ಕಾರವು ಮೊದಲೇ ನಿರ್ಧರಿಸಿದ್ದರೂ ಕೈಗಾರಿಕೋದ್ಯಮಿಗಳಾದ ಗುಪ್ತಾ ಸಹೋದರರ ಬೆಂಗಾವಲು ವಾಹನಗಳು ಆ ಪ್ರದೇಶ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ.

ಆರು ವಾಹನಗಳಿಗೆ ಮಾತ್ರ ಅನುಮತಿ ನೀಡಿದ್ದರೂ ಗುಪ್ತಾ ಸಹೋದರರ ಹತ್ತು ವಾಹನಗಳು ಈ ವಲಯವನ್ನು ಪ್ರವೇಶಿಸಿವೆ. ಇದಲ್ಲದೆ ಆಡಳಿತವು ಬೆಂಗಾವಲು ವಾಹನಗಳಿಗೆ ಪೊಲೀಸ್ ಬೆಂಗಾವಲು ಕೂಡ ಒದಗಿಸಲಾಗಿದೆ.

ಹರಿದ್ವಾರದ ಎರಡು ಪ್ರಮುಖ ಹೋಟೆಲ್‌ಗಳನ್ನು ಗುಪ್ತಾ ಸಹೋದರರು ಕುಂಭ ಮೇಳದಲ್ಲಿ ಭಾಗಿಯಾಗಲು ಸುಲಭವಾಗುವಂತೆ ಕಾಯ್ದಿರಿಸಿದ್ದಾರೆ. ರಾಮ್ ಘಾಟ್‌ನಲ್ಲಿ ಹೋಟೆಲ್ ಬುಕ್ ಮಾಡಲಾಗಿದೆ. ಕುಟುಂಬವು ಹರ್ ಕಿ ಪೌರಿ ಬಳಿಯ ಹೋಟೆಲ್‌ನಲ್ಲಿ ಉಳಿದುಕೊಂಡಿದೆ. ಆಡಳಿತ ವ್ಯವಸ್ಥೆಯ ಈ ಅಸಮಾನತೆಯನ್ನು ಕುಂಭಮೇಳಕ್ಕೆ ಬಂದ ಇತರ ಭಕ್ತರು ಆಕ್ಷೇಪಿಸಿದ್ದಾರೆ.

ABOUT THE AUTHOR

...view details