ಕರ್ನಾಟಕ

karnataka

ETV Bharat / bharat

'ದೆವ್ವಗಳೆರಡು ಕೊಲೆ ಮಾಡುವ ಬೆದರಿಕೆ ಹಾಕ್ತಿವೆ'.. ರಕ್ಷಣೆಗೆ ಪೊಲೀಸರ ಮೊರೆ ಹೋದ ವ್ಯಕ್ತಿ! - ರಕ್ಷಣೆಗೆ ಪೊಲೀಸರ ಮೊರೆ

ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ದೆವ್ವಗಳೆರಡು ಕೊಲೆ ಮಾಡುವ ಬೆದರಿಕೆ ಹಾಕುತ್ತಿವೆ ಎಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

Man FIR
Man FIR

By

Published : Jun 30, 2021, 4:46 PM IST

ಪಂಚ ಮಹಲ್​(ಗುಜರಾತ್​):ಪೊಲೀಸ್ ಠಾಣೆಯಲ್ಲಿ ಚಿತ್ರ - ವಿಚಿತ್ರವಾದ ಪ್ರಕರಣ ದಾಖಲಾಗುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊರ್ವ ದಾಖಲು ಮಾಡಿರುವ ಪ್ರಕರಣ ಅವೆಲ್ಲವು ಗಳಿಗಿಂತಲೂ ವಿಭಿನ್ನವಾಗಿದೆ.

ಗುಜರಾತ್​​ನ ಪಂಚ ಮಹಲ್​​ನ ಘಟನೆ ಇದಾಗಿದ್ದು, ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ದೆವ್ವಗಳೆರಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕ್ತಿವೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಇದರ ಜತೆಗೆ ತಮಗೆ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾನೆ. ಪಂಚ ಮಹಲ್​ನ ಜೋತ್ವಾಡ್​ ಗ್ರಾಮದಲ್ಲಿನ ವ್ಯಕ್ತಿ ಈ ರೀತಿಯಾಗಿ ಜಂಬುಘೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾನೆ.

ಠಾಣೆಯಲ್ಲಿ ದೂರು ದಾಖಲಿಸಿದ ವ್ಯಕ್ತಿ

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವ್ಯಕ್ತಿಯ ವಿಚಾರಣೆಗೊಳಪಡಿಸಿದಾಗ ಆತ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ವಿಷಯ ಗೊತ್ತಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ವ್ಯಕ್ತಿಯ ಸಹೋದರ, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಆತ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿರಿ: Amul milk price hike: ದೇಶದೆಲ್ಲೆಡೆ ನಾಳೆಯಿಂದ ಹೊಸ ಬೆಲೆ ಜಾರಿ

ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಬರಿಯಾ ಎಂಬ ವ್ಯಕ್ತಿಯನ್ನ ಮನೋವೈದ್ಯರಿಂದ ಕೌನ್ಸೆಲಿಂಗ್​ಗೆ ಒಳಪಡಿಸಲಾಗುವುದು ಎಂದಿದ್ದಾರೆ.

ABOUT THE AUTHOR

...view details