ಬನಸ್ಕಾಂತ(ಗುಜರಾತ್): ಜಿಲ್ಲೆಯ ಥರದ್ ಧನೇರಾ ಹೆದ್ದಾರಿಯ ಪಾವದಾಸನ್ ಬಳಿ ಕಾರೊಂದು ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶನಿವಾರ ತಡರಾತ್ರಿ ಥರಡ್ ತಾಲೂಕಿನ ಖೇಡಾದಿಂದ ಕುಟುಂಬಸ್ಥರು ಮನೆಗೆ ತೆರಳುತ್ತಿದ್ದ ವೇಳೆ ಪಾವದಾಸನ್ ಬಳಿ ರಸ್ತೆಯಲ್ಲಿ ಕಾರು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಹಾಗೂ ಟ್ರ್ಯಾಕ್ಟರ್ನಲ್ಲಿದ್ದ ಕಾರ್ಮಿಕ ಸ್ಥಳದಲ್ಲೇ ಸಾವಿಗೀಡಾಗಿದ್ದರೆ, ಮೂವರು ಗಾಯಗೊಂಡಿದ್ದಾರೆ.