ಸೂರತ್(ಗುಜರಾತ್): ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನವದಂಪತಿ ನೀರುಪಾಲಾಗಿದ್ದು, ಅವರನ್ನು ರಕ್ಷಿಸಲು ತೆರಳಿದ್ದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಸಂಜೆ ಮಹುವಾ ತಾಲೂಕಿನ ಕುಮಕೋಟಾರ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹೊಸದಾಗಿ ಮದುವೆಯಾದ ಹಿನ್ನೆಲೆ, ಸೂರತ್ ಮೂಲದ ದಂಪತಿ ಸೇರಿ ಕುಟುಂಬದ 10 ಮಂದಿ ದರ್ಗಾಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದರು. ಈ ವೇಳೆ, ಅಂಬಿಕಾ ನದಿಯಲ್ಲಿ ನವಜೋಡಿ ಹಾಗೂ ಐವರು ಸ್ನಾನ ಮಾಡುತ್ತಿದ್ದರು. ನೀರಿನ ಸುಳಿಗೆ ಸಿಲುಕಿ ದಂಪತಿ ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಿಸಲು ಐವರು ನೀರಿಗೆ ಧುಮುಕಿದ್ದಾರೆ. ಈ ಪೈಕಿ ಇಬ್ಬರನ್ನು ರಕ್ಷಿಸಿದ್ದು, ಮೂವರು ಮೃತಪಟ್ಟಿದ್ದಾರೆ. ನಾಪತ್ತೆಯಾದ ದಂಪತಿ ಈವರೆಗೆ ಪತ್ತೆಯಾಗಿಲ್ಲ ಎಂದು ಮಹುವಾ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಬಿ.ಎಸ್.ಗಮಿತ್ ಹೇಳಿದ್ದಾರೆ.