ಕರ್ನಾಟಕ

karnataka

By

Published : Feb 17, 2021, 12:31 PM IST

Updated : Feb 17, 2021, 12:49 PM IST

ETV Bharat / bharat

ಕೊರೊನಾ ಬಗ್ಗೆ ಸರ್ಕಾರ ನಿರ್ಲಕ್ಷ್ಯ, ಅತಿಯಾದ ವಿಶ್ವಾಸ ಹೊಂದಿದೆ: ರಾಹುಲ್ ಗಾಂಧಿ ನೇರಾರೋಪ

ಕೋವಿಡ್ -19 ಬಗ್ಗೆ ತೀವ್ರ ನಿರ್ಲಕ್ಷ್ಯ ಮತ್ತು ಅತಿಯಾದ ವಿಶ್ವಾಸವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಇನ್ನೂ ಮುಗಿದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Rahul
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ

ನವದೆಹಲಿ: ಕೊರೊನಾ ವೈರಸ್ ಅಬ್ಬರ ಇನ್ನೂ ಮುಗಿದಿಲ್ಲ. ಆದರೆ ಈ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರವು ನಿರ್ಲಕ್ಷ್ಯ ವಹಿಸಿದೆ ಮತ್ತು ಅತಿಯಾದ ವಿಶ್ವಾಸವನ್ನು ಹೊಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

''ದಕ್ಷಿಣ ಆಫ್ರಿಕಾದ ಮತ್ತು ಬ್ರೆಜಿಲ್​ನ ಹೊಸ ರೂಪಾಂತರ ಕೊರೊನಾ ವೈರಸ್​ ಭಾರತಕ್ಕೆ ಪ್ರವೇಶಿಸಿವೆ ಎಂದು ವರದಿಯಾದ ನಂತರ ಈ ಅಭಿಪ್ರಾಯಗಳು ದೇಶದಲ್ಲಿ ವ್ಯಕ್ತವಾಗಿವೆ. ಕೋವಿಡ್ -19 ಬಗ್ಗೆ ತೀವ್ರ ನಿರ್ಲಕ್ಷ್ಯ ಮತ್ತು ಅತಿಯಾದ ವಿಶ್ವಾಸವನ್ನು ಭಾರತ ಸರ್ಕಾರ ಹೊಂದಿದೆ. ಇದು ಇನ್ನೂ ಮುಗಿದಿಲ್ಲ" ಎಂದು ರಾಹುಲ್​ ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ SARS-CoV-2 ರೂಪಾಂತರ ವೈರಸ್​ ನಾಲ್ಕು ಜನರಲ್ಲಿ ಪತ್ತೆಯಾಗಿತ್ತು. ಒಬ್ಬರಲ್ಲಿ ಬ್ರೆಜಿಲ್​ನಲ್ಲಿ ಕಂಡುಬಂದ ವೈರಸ್​ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

11,610 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1,09,37,320ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ 1,06,44,858 ಕ್ಕೆ ಏರಿದೆ ಎಂದು ಸಚಿವಾಲಯ ತಿಳಿಸಿದೆ. ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 100 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Last Updated : Feb 17, 2021, 12:49 PM IST

ABOUT THE AUTHOR

...view details