ಕರ್ನಾಟಕ

karnataka

ETV Bharat / bharat

ಮಹದಾಯಿ ನದಿ ನೀರಿನ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.. ಗೋವಾ ಸಿಎಂ ಪ್ರಮೋದ್​ ಸಾವಂತ್​

ಮಹದಾಯಿ ನದಿ ನೀರಿನ ವಿವಾದದ ವಿಷಯದಲ್ಲಿ ತಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಪ್ರಮೋದ್​ ಸಾವಂತ್​ ಹೇಳಿದ್ರು. ಮಹದಾಯಿ ವಿಚಾರದಲ್ಲಿ ಯುದ್ಧವನ್ನು ಗೆಲ್ಲುವವರೆಗೂ ನಾವು ನಿಲ್ಲುವುದಿಲ್ಲ ಎಂದ್ರು. ಗೋವಾ ಮತ್ತು ಕರ್ನಾಟಕವನ್ನು ನದಿ ನೀರಿನ ಹಂಚಿಕೆಯ ವಿವಾದದಲ್ಲಿ ಸಿಲುಕಿಸಲಾಗಿದೆ. ಈ ನದಿಯನ್ನು ಗೋವಾದ ಜೀವನಾಡಿ ಎಂದು ಪರಿಗಣಿಸಲಾಗಿದೆ..

By

Published : Aug 15, 2021, 3:50 PM IST

Pramod Sawant
ಸಿಎಂ ಪ್ರಮೋದ್​ ಸಾವಂತ್​

ಪಣಜಿ :ಗೋವಾ ತನ್ನ ಜನಸಂಖ್ಯೆಯ ಶೇ.90 ಜನರಿಗೆ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಿದ ದೇಶದ ಮೊದಲ ರಾಜ್ಯವಾಗಿದೆ ಎಂದು ಸಿಎಂ ಪ್ರಮೋದ್​ ಸಾವಂತ್​ ತಿಳಿಸಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ ಗೋವಾ ಸಿಎಂ ಈ ಮಾಹಿತಿ ನೀಡಿದ್ದಾರೆ.

ಫ್ರಂಟ್​​ಲೈನ್​ ವರ್ಕರ್ಸ್​​ ಮತ್ತು ಕೋವಿಡ್-19 ವಾರಿಯರ್ಸ್​​ ಪ್ರಯತ್ನದಿಂದಾಗಿ ರಾಜ್ಯವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದೆ ಎಂದು ಸಾವಂತ್​ ಹೇಳಿದ್ರು. ಮುಂದಿನ ತಿಂಗಳಿನಿಂದ ರಾಜ್ಯದ ಜನರು ತಿಂಗಳಿಗೆ 16,000 ಲೀಟರ್​ನಷ್ಟು ನಲ್ಲಿ ನೀರನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಸಾವಂತ್ ಘೋಷಿಸಿದ್ರು. ಮೊಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಮೊದಲ ಹಂತವು ಆಗಸ್ಟ್ 15, 2022ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿ ಕಾರ್ಯಾರಂಭ ಮಾಡಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.

ಇದೇ ವೇಳೆ ಮಹದಾಯಿ ನದಿ ನೀರಿನ ವಿವಾದದ ವಿಷಯದಲ್ಲಿ ತಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಿಎಂ ಪ್ರಮೋದ್​ ಸಾವಂತ್​ ಹೇಳಿದ್ರು. ಮಹದಾಯಿ ವಿಚಾರದಲ್ಲಿ ಯುದ್ಧವನ್ನು ಗೆಲ್ಲುವವರೆಗೂ ನಾವು ನಿಲ್ಲುವುದಿಲ್ಲ ಎಂದ್ರು. ಗೋವಾ ಮತ್ತು ಕರ್ನಾಟಕವನ್ನು ನದಿ ನೀರಿನ ಹಂಚಿಕೆಯ ವಿವಾದದಲ್ಲಿ ಸಿಲುಕಿಸಲಾಗಿದೆ. ಈ ನದಿಯನ್ನು ಗೋವಾದ ಜೀವನಾಡಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದ್ರು.

ಸಾವಂತ್ ತಮ್ಮ ಭಾಷಣದಲ್ಲಿ ಇತ್ತೀಚೆಗೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದ ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವು 2012ರಿಂದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು. ಬಿಜೆಪಿ ನೇತೃತ್ವದ ಆಡಳಿತಾವಧಿಯಲ್ಲಿ ಶೈಕ್ಷಣಿಕ ಪಠ್ಯಕ್ರಮದ ಭಾಗವಾಗಿ ಕೌಶಲ್ಯಗಳಿಗೂ ಸಹ ಒತ್ತು ನೀಡಲಾಗಿದೆ ಎಂದು ತಿಳಿಸಿದ್ರು.

ಗೋವಾದಲ್ಲಿ 12,000 ರೈತರನ್ನು ಸೇರಿಸುವ ಮೂಲಕ ಸಾವಯವ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಿಎಂ ಹೇಳಿದರು. ಡಿಜಿಟಲೀಕರಣದ ಮೂಲಕ ರೈತರನ್ನು ತಲುಪಲು ಇ-ಕೃಷಿ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಈ ವರ್ಷ ರಾಜ್ಯದಲ್ಲಿ ಶ್ವೇತ ಕ್ರಾಂತಿಯ ಭಾಗವಾಗಿ 6,571 ರೈತರಿಗೆ 33 ಕೋಟಿ ರೂಪಾಯಿಗಳ ಸಬ್ಸಿಡಿ ನೀಡಲಾಗಿದೆ ಎಂದರು. ಭಾನುವಾರದಿಂದ ಜಾರಿಗೆ ಬರುವಂತೆ 'ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ' ಯೋಜನೆಯನ್ನು ಗೋವಾದಲ್ಲಿ ಆರಂಭಿಸಲಾಗುವುದು ಎಂದು ಪ್ರಮೋದ್​​ ಸಾವಂತ್​ ಹೇಳಿದರು.

ABOUT THE AUTHOR

...view details