ನೋಯ್ಡಾ/ದೆಹಲಿ:ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದ 6 ವರ್ಷದ ಬಾಲಕಿಯ ಮೇಲೆ ಗೂಳಿಗಳು ದಾಳಿ ನಡೆಸಿದ್ದು, ಆಕೆ ಸಾವನ್ನಪ್ಪಿದ್ದಾಳೆ. ನೋಯ್ಡಾದ ಸೆಕ್ಟರ್ 49ರ ಸರ್ದಾರ್ಪುರ ಬಳಿ ಘಟನೆ ನಡೆದಿದೆ.
ರಕ್ಷಾ ಬಂಧನದ ಕಾರಣ ತಂದೆ, ಮಗ, ಮಗಳು ಜಾಕ್ವೆಲಿನ್, ಸೊಸೆ, ಸೋದರಳಿಯ ಹಾಗೂ ಇತರೆ ಸ್ನೇಹಿತರು ನಡೆದುಕೊಂಡು ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಹೋದರನ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಕಾದಾಡುತ್ತಿದ್ದ ಎರಡು ಗೂಳಿಗಳು ಏಕಾಏಕಿ ಬಾಲಕಿ ಮೇಲೆರಗಿವೆ. ಉಳಿದಂತೆ ಇತರೆ ಮೂವರು ಮಕ್ಕಳಿಗೂ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.