ಕರ್ನಾಟಕ

karnataka

ETV Bharat / bharat

1 ರೂಪಾಯಿಗೆ ಊಟ: ಶಕರ್​ಪುರದಲ್ಲಿ 4 ನೇ 'ಜನ ರಸೋಯಿ' ಕ್ಯಾಂಟೀನ್​ ಉದ್ಘಾಟಿಸಿದ ಗಂಭೀರ್ - ಪೂರ್ವ ದೆಹಲಿ

ನಿರ್ಗತಿಕರು, ಬಡವರಿಗೆ ಹೊಟ್ಟೆ ತುಂಬಾ ಊಟ ನೀಡುವ ದೃಷ್ಟಿಯಿಂದ ಸಂಸದ ಗೌತಮ್ ಗಂಭೀರ್​​, 4 ನೇ ಜನರ ಸೋಯಿಯನ್ನು ಉದ್ಘಾಟಿಸಿದ್ದಾರೆ.

ಗಂಭೀರ್
ಗಂಭೀರ್

By

Published : Oct 23, 2021, 8:38 PM IST

ನವದೆಹಲಿ: ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್,ಬಡವರಿಗೆ, ನಿರ್ಗತಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಮ್ಮ ಕ್ಷೇತ್ರದಲ್ಲಿ ಜನ ರಸೋಯಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿ ನಗರ ವಿಧಾನಸಭಾ ಭಾಗದ ಶಕರಪುರದಲ್ಲಿ ಇಂದು ನಾಲ್ಕನೇ 'ಜನ ರಸೋಯಿ' ಯನ್ನು ಉದ್ಘಾಟಿಸಿದರು.

ಪೂರ್ವ ದೆಹಲಿಯ ವಿವಿಧ ಭಾಗಗಳಲ್ಲಿ ಈ ರೀತಿಯ 10 ಕ್ಯಾಂಟೀನ್​ಗಳನ್ನು ತೆರೆಯಲು ಗಂಭೀರ್ ಯೋಜಿಸಿದ್ದಾರೆ. ಪ್ರತಿ ಊಟಕ್ಕೆ ಒಂದು ರೂಪಾಯಿ ನಿಗದಿಪಡಿಸಲಾಗಿದ್ದು, ಅತ್ಯಂತ ಪೌಷ್ಟಿಕ, ಗುಣಮಟ್ಟ, ಆರೋಗ್ಯಕರ ಮತ್ತು ರುಚಿಕರ ಆಹಾರವಾಗಿರಲಿದೆ. ನಿತ್ಯ 500 ಜನರಿಗೆ ಆಹಾರ ನೀಡಲಾಗುವುದು. ಎರಡನೇ ಬಾರಿ ಆಹಾರ ಸೇವನೆಗೂ ಅವಕಾಶ ಇರಲಿದೆ. ಅನ್ನ, ದಾಲ್, ತರಕಾರಿ ಸಾಂಬಾರು ಇರಲಿದೆ ಎಂದು ಗಂಭೀರ್ ಹೇಳಿದರು.

ಈಗಾಗಲೇ ಗಾಂಧಿ ನಗರ, ಅಶೋಕ್ ನಗರ ಮತ್ತು ವಿನೋದ್ ನಗರದಲ್ಲಿ ಜನ ರಸೋಯಿಯನ್ನು ತೆರೆಯಲಾಗಿದೆ ಎಂದು ಗೌತಮ್ ಅವರ ಕಚೇರಿ ತಿಳಿಸಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಜೊತೆಗೂಡಿ ಗಂಭೀರ್ ಶಕರ್‌ಪುರದಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಕೈಬಿಟ್ಟ ಡಂಪ್ ಸ್ಟೋರ್ ಅನ್ನು ಪುನಃ ಸ್ಥಾಪಿಸುವ ಮೂಲಕ ಜನ್ ರಸೋಯ್ ಅನ್ನು ಉದ್ಘಾಟಿಸಿದರು.

ಇದನ್ನೂ ಓದಿ: 'ಮಹಾ' ಚರ್ಚೆಗೆ ಗ್ರಾಸವಾದ ಮೀಟ್​.. ಶರದ್ ಪವಾರ್ - ಸಿಎಂ ಉದ್ಧವ್ ಠಾಕ್ರೆ ಭೇಟಿ ಹಿಂದಿನ ಉದ್ದೇಶವೇನು?

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಅಧಿಕ ಜನರು ಈ ಯೋಜನೆಯ ಲಾಭ ಪಡೆದಿದ್ದಾರೆ. ಒಂದೊತ್ತಿನ ಊಟಕ್ಕೂ ಪರದಾಡುವವರಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ.

ABOUT THE AUTHOR

...view details