ಕರ್ನಾಟಕ

karnataka

ETV Bharat / bharat

ಕೆಲಸ ಮುಗಿಸಿಕೊಂಡು ಬರುವಾಗ ಪಾರ್ಕ್​ಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ - ಕೆಲಸ ಮುಗಿಸಿಕೊಂಡು ಬರುವಾಗ ಪಾರ್ಕ್​ಗೆ ಎಳೆದೋಯ್ದು ಸಾಮೂಹಿಕ ಅತ್ಯಾಚಾರ

ರಾಜಧಾನಿ ದೆಹಲಿಯಲ್ಲಿ ಮತ್ತೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಹರಿನಗರ ಪ್ರದೇಶದಲ್ಲಿ ಕಾರ್ಖಾನೆಯಿಂದ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಬಾಲಕಿ ಮೇಲೆ ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಕೆಲಸ ಮುಗಿಸಿಕೊಂಡು ಬರುವಾಗ ಪಾರ್ಕ್​ಗೆ ಎಳೆದೋಯ್ದು ಸಾಮೂಹಿಕ ಅತ್ಯಾಚಾರ
ಕೆಲಸ ಮುಗಿಸಿಕೊಂಡು ಬರುವಾಗ ಪಾರ್ಕ್​ಗೆ ಎಳೆದೋಯ್ದು ಸಾಮೂಹಿಕ ಅತ್ಯಾಚಾರ

By

Published : Apr 1, 2022, 8:58 PM IST

Updated : Apr 1, 2022, 10:53 PM IST

ನವದೆಹಲಿ: ಪೊಲೀಸರ ಎಲ್ಲ ಕಠಿಣ ಕ್ರಮಗಳ ಹೊರತಾಗಿಯೂ ಹಾಗೆ ಮಹಿಳೆಯರ ಸುರಕ್ಷತೆಗಾಗಿ ಜಾರಿಗೆ ಬರುತ್ತಿರುವ ಹೊಸ ಯೋಜನೆಗಳ ಹೊರತಾಗಿಯೂ ಮಹಿಳೆಯರ ಮೇಲಿನ ಅಪರಾಧಗಳು ನಿಲ್ಲುವ ಸೂಚನೆ ಕಾಣುತ್ತಿಲ್ಲ. ಪಶ್ಚಿಮ ಜಿಲ್ಲೆಯ ಹರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಬಾಲಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಜರುಗಿದೆ.

ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಬಾಲಕಿ ಖ್ಯಾಲಾ ಪ್ರದೇಶದ ಕಾರ್ಖಾನೆಯಲ್ಲಿ ಕೆಲಸ ಮುಗಿಸಿ ಹರಿನಗರದಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ಹುಡುಗರು ಆಕೆಯನ್ನು ಆ ಪ್ರದೇಶದ ಉದ್ಯಾನದ ಬಳಿ ಬಲವಂತವಾಗಿ ಎಳೆದೊಯ್ದು ಇಬ್ಬರೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ರಾತ್ರಿ ಪೂರ ತಮ್ಮ ಕೃತ್ಯ ಎಸಗಿದ್ದಾರೆ. ಬೆಳಗ್ಗೆ ವಿವಸ್ತ್ರಳಾಗಿದ್ದಾಕೆಯನ್ನು ನೋಡಿದ ಸಾರ್ವಜನಿಕರೊಬ್ಬರು ಆಕೆ ಸಹಾಯಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪಶ್ಚಿಮ ಜಿಲ್ಲಾ ಡಿಸಿಪಿ ಘನಶ್ಯಾಮ್ ಬನ್ಸಾಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಸಂತ್ರಸ್ತ ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಬಾಲಕಿಗೆ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಮೊದಲೇ ತಿಳಿದಿದ್ದಳಂತೆ. ಆ ಹುಡುಗನು ಕೆಲವು ದಿನಗಳ ಹಿಂದೆ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಗ್ರಾಮಗಳಿಗೆ ಸಹಕಾರಿ ಆಂದೋಲನ ಕೊಂಡೊಯ್ಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಅಮಿತ್ ಶಾ

ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ.

Last Updated : Apr 1, 2022, 10:53 PM IST

For All Latest Updates

TAGGED:

ABOUT THE AUTHOR

...view details