ಶ್ರೀನಗರ: ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು, ಸರ್ಕಾರಿ ಅಧಿಕಾರಿಗಳು ಮತ್ತು ಪತ್ರಕರ್ತರಿಗೆ ಜೀವ ಬೆದರಿಕೆ ಹಾಕುತ್ತಿದ್ದ ಆರೋಪದಡಿ ಐವರನ್ನು ಬಂಧಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಈ ಗ್ಯಾಂಗ್ Kashmirfight.wordpress.com ಟ್ಯಾಗ್ಲೈನ್ನಡಿ ಬೆದರಿಕೆಯೊಡ್ಡುತ್ತಿದ್ದರು ಎನ್ನಲಾಗಿದೆ.
ಬಂಧಿತರನ್ನು ಸನತ್ ನಗರದ ನಜೀಶ್ ಯಸ್ರಾಬ್ ರೆಹಮಾನಿ, ತಬೀಶ್ ಅಕ್ಬರ್ ರೆಹಮಾನಿ, ರಾಜ್ ಬಾಗ್ನ ಸೋಫಿ ಮುಹಮ್ಮದ್ ಅಕ್ಬರ್, ಹಜರತ್ಬಾಲ್ ಮೂಲದ ಪೀರ್ಜಾಡಾ ರಕೀಫ್ ಮಖ್ದೂಮಿ ಮತ್ತು ಪೂಂಚ್ ಪ್ರದೇಶದ ಜಾವೇದ್ ಖಾಲಿದ್ ಎಂದು ಗುರುತಿಸಲಾಗಿದೆ.