ಕರ್ನಾಟಕ

karnataka

By

Published : Feb 25, 2021, 3:27 PM IST

ETV Bharat / bharat

ಭಾರತೀಯ ಸೇನೆಗೆ ವರವಾದ ಆ ಒಂದೇ ಒಂದು ದೃಢ ನಿರ್ಧಾರ... ಏನದು ಮಹತ್ವದ ತೀರ್ಮಾನ!?

ಆಗಸ್ಟ್ 29 ರಿಂದ 30 ರವರೆಗೆ ನಡೆಸಿದ ತ್ವರಿತ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ರೆಜಾಂಗ್ ಲಾ, ರಿಚೆನ್ ಲಾ ಮತ್ತು ಮೊಖ್ಪಾರಿ ಸೇರಿದಂತೆ ಚೀನಾದ ವಶದಲ್ಲಿದ್ದ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು.

Idea to occupy Pangong south bank
ಪ್ಯಾಂಗಾಗ್ ಸರೋವರದ ದಕ್ಷಿಣ ತೀರ ವಶಪಡಿಸಿಕೊಂಡ ಭಾರತ

ನವದೆಹಲಿ : ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುಂದಾದ ಭಾರತದ ನಿರ್ಧಾರ ಇಂಡೋ-ಚೀನಾ ಗಡಿ ಸಂರ್ಘಷದಲ್ಲಿ ಗೇಮ್​​ ಚೇಂಜರ್​ ಆಗಿ ಪರಿಣಮಿಸಿದ್ದು, ಇದರ ಪರಿಣಾಮ ಎರಡೂ ಸೇನೆಗಳು ಗಡಿಯಿಂದ ಹಿಂದೆ ಸರಿದಿವೆ.

ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಸೇರಿದಂತೆ ಮಿಲಿಟರಿ ಕಮಾಂಡರ್‌ಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರ ಪ್ರದೇಶವನ್ನು ವಶಪಡಿಸಿಕೊಳ್ಳುವ ನಿರ್ಧಾರವನ್ನು ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.

ಆಗಸ್ಟ್ 29 ರಿಂದ 30 ರವರೆಗೆ ನಡೆಸಿದ ತ್ವರಿತ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ರೆಜಾಂಗ್ ಲಾ, ರಿಚೆನ್ ಲಾ ಮತ್ತು ಮೊಖ್ಪಾರಿ ಸೇರಿದಂತೆ ಚೀನಾದ ವಶದಲ್ಲಿದ್ದ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಮಿಲಿಟರಿ ಕಮಾಂಡರ್‌ಗಳನ್ನು ಒಳಗೊಂಡ ಈ ಸಭೆಯಲ್ಲಿ ಟಿಬೆಟಿಯನ್ನರು ಸೇರಿದಂತೆ ವಿಶೇಷ ಗಡಿ ಪ್ರದೇಶದ ಪಡೆಗಳನ್ನು ಕಾರ್ಯಾಚರಣೆಗೆ ಬಳಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಓದಿ : ಸೋಷಿಯಲ್​ ಮೀಡಿಯಾಕ್ಕೆ ಮಾರ್ಗಸೂಚಿ ಮೂಲಕ ಕಡಿವಾಣ ಹಾಕಿದ ಕೇಂದ್ರ ಸರ್ಕಾರ

ಚೀನಾ ಸೇನೆಯ ಆಕ್ರಮಣವನ್ನು ಎದುರಿಸುವ ಮಿಲಿಟರಿ ವಿಭಾಗದಲ್ಲಿ ಸಿಡಿಎಸ್ ಜನರಲ್ ರಾವತ್, ಸೇನಾ ಮುಖ್ಯಸ್ಥ ಜನರಲ್ ನರವಣೆ ಮತ್ತು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಆರ್​.ಕೆ.ಎಸ್​ ಭದೌರಿಯಾ ಭಾರತದ ಕಾರ್ಯತಂತ್ರವನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.

ದಕ್ಷಿಣ ತೀರದಲ್ಲಿ ಚೀನಾ ಸೇನೆ ಯಾವುದೇ ಆಕ್ರಮಣ ನಡೆಸದಂತೆ ತಡೆಯುವಲ್ಲಿ, ಪೂರ್ವ ವಲಯದ ಸೇನೆ ಮತ್ತು ಇಂಡೋ - ಟಿಬೆಟಿಯನ್ ಗಡಿ ಭದ್ರತಾ ಪಡೆಗಳ ನಡುವಿನ ನಿಕಟ ಹೊಂದಾಣಿಕೆಯೇ ಕಾರಣ ಎಂದು ಹೇಳಲಾಗಿದೆ. ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹ್ಹಾನ್ ಪೂರ್ವ ಸೇನಾ ಕಮಾಂಡರ್ ಮತ್ತು ಎಸ್.ಎಸ್.ದೇಸ್ವಾಲ್ ಐಟಿಬಿಪಿಯ ಮುಖ್ಯಸ್ಥರಾಗಿದ್ದಾರೆ.

ABOUT THE AUTHOR

...view details