ಕರ್ನಾಟಕ

karnataka

ETV Bharat / bharat

ಹಣಕಾಸು ಕೊರತೆ: ಇಲ್ಲಿ ಟಿಬಿ ರೋಗಿಗಳಿಗೆ ಔಷಧದ ಅಭಾವ? - ಟಿಬಿ ಔಷಧಿಗಳ ಕೊರತೆ

ಮಧ್ಯಪ್ರದೇಶದಲ್ಲಿ 1.60 ಲಕ್ಷಕ್ಕೂ ಹೆಚ್ಚು ಕ್ಷಯ ರೋಗಿಗಳು ಕಳೆದ ಮೂರು ತಿಂಗಳಿನಿಂದ ಟಿಬಿ ಔಷಧಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಔಷಧಗಳನ್ನು ಖರೀದಿಸಲು ಹಣ ಬಂದಿದ್ದು, ಶೀಘ್ರದಲ್ಲೇ ರೋಗಿಗಳಿಗೆ ಲಭ್ಯವಾಗಲಿದೆ ಎಂದು ಟಿಬಿ ನಿಯಂತ್ರಣ ಅಧಿಕಾರಿ ತಿಳಿಸಿದ್ದಾರೆ.

Representative image
ಸಾಂದರ್ಭಿಕ ಚಿತ್ರ

By

Published : Jan 11, 2023, 4:53 PM IST

ಭೋಪಾಲ್ (ಮಧ್ಯಪ್ರದೇಶ): ಕಳೆದ ಮೂರು ತಿಂಗಳಿನಿಂದ ಕ್ಷಯರೋಗ ಔಷಧಗಳ ತೀವ್ರ ಕೊರತೆ ಮಧ್ಯಪ್ರದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆರೋಗ್ಯದ ಅಪಾಯವನ್ನು ಹೆಚ್ಚಿಸಿದೆ. ಇದರ ಪರಿಣಾಮವಾಗಿ, 1.60 ಲಕ್ಷಕ್ಕೂ ಹೆಚ್ಚು ಟಿಬಿ ರೋಗಿಗಳು ಬದಲಿ ಔಷಧಗಳನ್ನು ಅವಲಂಬಿಸಿದ್ದಾರೆ. ಸೂಕ್ತ ಔಷಧಗಳ ಕೊರತೆಯಿಂದ ರೋಗಿಗಳು ಗುಣಮುಖರಾಗಲು ವಿಳಂಬವಾಗುತ್ತಿದೆ ಎನ್ನಲಾಗಿದೆ.

ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ:ಈ ಮಧ್ಯೆ ಬದಲಿ ಔಷಧಗಳನ್ನು ಬಳಸುವುದರಿಂದ ಟಿಬಿ ಸೋಂಕುಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗವೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಸಮಿತಿಯು ರಾಜ್ಯ ಆರೋಗ್ಯ ಇಲಾಖೆಯಿಂದ ವರದಿ ಕೇಳಿದೆ. ಟಿಬಿ ಚಿಕಿತ್ಸೆಯಲ್ಲಿ ಬಳಸಲಾಗುವ ನಾಲ್ಕು ಜೆನೆರಿಕ್ ಔಷಧಗಳಲ್ಲಿ ಕಳೆದ ಮೂರು ತಿಂಗಳಿನಿಂದ ಪೈರಾಜಿನಮೈಡ್ ಮತ್ತು ರಿಫಾಂಪಿಸಿನ್ ಕೊರತೆಯಿದೆ ಎಂದು ಹೇಳಲಾಗುತ್ತದೆ.

ಟಿಬಿ ಔಷಧಗಳ ಖರೀದಿಗೆ ಹಣದ ಕೊರತೆಯನ್ನು ಮಧ್ಯಪ್ರದೇಶ ಆರೋಗ್ಯ ಇಲಾಖೆ ಎದುರಿಸುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರದಿಂದ ಹಣದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು. ಆದರೆ, ಟಿಬಿ ಬದಲಿ ಔಷಧಗಳ ಸೇವನೆ ಆರೋಗ್ಯಕರ ಅಭ್ಯಾಸವಲ್ಲ ಎಂದು ವೈದ್ಯರು ಹೇಳುತ್ತಾರೆ. "ಕಳೆದ ಎರಡು ತಿಂಗಳಿಂದ, ನಾನು ನಾಲ್ಕರಲ್ಲಿ ಕೇವಲ ಎರಡು ಟಿಬಿಯ ಜೆನೆರಿಕ್ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಆರೋಗ್ಯ ಕೇಂದ್ರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ’’ ಎಂದು ಟಿಬಿ ರೋಗಿಯೊಬ್ಬರು ಹೇಳಿದ್ದಾರೆ.

ನಾಲ್ಕು ಔಷಧ ಬಳಕೆ:ಟಿಬಿ ರೋಗಿಗಳ ಚಿಕಿತ್ಸೆಗಾಗಿ ರಿಫಾಂಪಿಸಿನ್, ಎಥಾಂಬಿಟಾಲ್, ಐಎನ್‌ಎಚ್ ಮತ್ತು ಪೈರಾಜಿನಮೈಡ್‌ನಂತಹ ನಾಲ್ಕು ಔಷಧಗಳನ್ನು ಬಳಸಲಾಗುತ್ತದೆ. ರೋಗಿಯು ಆರು ತಿಂಗಳ ಕಾಲ ಈ ಔಷಧಗಳನ್ನು ತೆಗೆದುಕೊಳ್ಳಬೇಕು. ಔಷಧಗಳ ಸೇವನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಎರಡು ತಿಂಗಳುಗಳನ್ನು ತೀವ್ರ ಹಂತ (IP) ಎಂದು ಕರೆಯಲಾಗುತ್ತದೆ ಮತ್ತು ಉಳಿದ ನಾಲ್ಕು ತಿಂಗಳುಗಳನ್ನು ಮುಂದುವರಿಕೆ ಹಂತ ಎಂದು ಕರೆಯಲಾಗುತ್ತದೆ. ತೀವ್ರ ಹಂತವು ರೋಗವನ್ನು ಒಳಗೊಂಡಿರುವ ನಿರ್ಣಾಯಕ ಅವಧಿಯಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ, ಔಷಧಗಳ ಕೊರತೆಯು ರೋಗಿಯ ಆರೋಗ್ಯದ ಅಪಾಯವನ್ನು ಉಂಟುಮಾಡಬಹುದು.

ಸಂಭವನೀಯ ಆರೋಗ್ಯದ ಅಪಾಯವನ್ನು ವಿವರಿಸುತ್ತಾ, ಪ್ರಾದೇಶಿಕ ಉಸಿರಾಟದ ಕಾಯಿಲೆಗಳ ಸಂಸ್ಥೆಯ ವಿಭಾಗದ ಮುಖ್ಯಸ್ಥ ಡಾ.ಲೋಕೇಂದ್ರ ದವೆ​, "ಅರ್ಧ ಚಿಕಿತ್ಸೆಯು ರೋಗದ ಮರುಕಳಿಕೆಯನ್ನು ಉಂಟುಮಾಡಬಹುದು. ಟಿಬಿ ರೋಗಿಗೆ ಚಿಕಿತ್ಸೆಯು ದೀರ್ಘಕಾಲದವರೆಗೆ ಇರಬಹುದು" ಎನ್ನುತ್ತಾರೆ ದವೆ ಹೇಳಿದ್ದಾರೆ.

ಟಿಬಿ ಔಷಧಗಳ ಕೊರತೆಗೆ ಕಾರಣಗಳನ್ನು ನೀಡಿದ ರಾಜ್ಯ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ವರ್ಷಾ ರೈ, "ನಾವು ಔಷಧಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. ಔಷಧಗಳನ್ನು ಖರೀದಿಸಲು ಕೇಂದ್ರ ಸರ್ಕಾರವು ನಮಗೆ ಸಹಾಯ ಮಾಡುತ್ತದೆ. ಔಷಧೀಯ ಸಿಬ್ಬಂದಿಗೆ ಔಷಧ ವಿತರಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ರೋಗಿಗಳು ಮುಷ್ಕರ ನಡೆಸುತ್ತಿದ್ದಾರೆ. ಆದ್ದರಿಂದ ನಾವು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಶೀಘ್ರವೇ ಔಷಧ ಲಭ್ಯ: ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮನೋಜ್ ವರ್ಮಾ ಮಾತನಾಡಿ, ಮಧ್ಯಪ್ರದೇಶದ ಆರೋಗ್ಯ ಇಲಾಖೆಯು ರೋಗಿಗಳಿಗೆ ಆರೋಗ್ಯದ ಅಪಾಯವನ್ನು ಉಂಟುಮಾಡುವ ಟಿಬಿ ಔಷಧಗಳ ಕೊರತೆ ಎದುರಿಸುತ್ತಿದೆ. ಔಷಧ ಖರೀದಿಸಲು ಹಣ ಬಂದಿದ್ದು, ಶೀಘ್ರವೇ ರೋಗಿಗಳಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚಳಿಗಾಲದಲ್ಲಿ ಗರ್ಭಿಣಿಯರು ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಉತ್ತಮ!

ABOUT THE AUTHOR

...view details