ಕರ್ನಾಟಕ

karnataka

ETV Bharat / bharat

ಭಾರತ - ಬಾಂಗ್ಲಾ ಸಂಬಂಧ ಬಲಪಡಿಸಲು "ಸ್ನೇಹ ಸೈಕಲ್ ರ‍್ಯಾಲಿ" - ಭಾರತ-ಬಾಂಗ್ಲಾ ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧ ಬಲಪಡಿಸಲು ಸ್ನೇಹ ಸೈಕಲ್ ರ‍್ಯಾಲಿ

ಬಾಂಗ್ಲಾದೇಶದ ಪಕ್ಕದ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸೋಂ, ತ್ರಿಪುರ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂ ಮೂಲಕ ರ‍್ಯಾಲಿ ಸಂಚರಿಸಲಿದ್ದು, ಮಾರ್ಚ್ 20 ರಂದು ಸಿಲ್ಕೋರ್ ಗಡಿಯಲ್ಲಿ ಕೊನೆಗೊಳ್ಳಲಿದೆ. ಈ ಸೈಕಲ್ ರ‍್ಯಾಲಿಯು ನಿತ್ಯ 90 ರಿಂದ 100 ಕಿಲೋಮೀಟರ್ ದೂರ ಕ್ರಮಿಸಲಿದೆ.

friendship cycle rally on india and Bangladesh
ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧ ಬಲಪಡಿಸಲು "ಸ್ನೇಹ ಸೈಕಲ್ ರ‍್ಯಾಲಿ"

By

Published : Jan 11, 2021, 8:50 AM IST

Updated : Jan 11, 2021, 9:31 AM IST

24 ಪರಗಣ ( ಪಶ್ಚಿಮ ಬಂಗಾಳ) : ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧ ಬಲಪಡಿಸಲು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಮುಜೀಬ್ ಉರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಬಿಎಸ್ಎಫ್​ನ ದಕ್ಷಿಣ ಬಂಗಾಳ ಗಡಿನಾಡು "ಸ್ನೇಹ ಸೈಕಲ್ ರ‍್ಯಾಲಿ" ಹಮ್ಮಿಕೊಳ್ಳಲಾಗಿದೆ.

ಭಾರತ - ಬಾಂಗ್ಲಾ ಸಂಬಂಧ ಬಲಪಡಿಸಲು "ಸ್ನೇಹ ಸೈಕಲ್ ರ‍್ಯಾಲಿ"

ಸೈಕಲ್ ರ‍್ಯಾಲಿಯನ್ನು ನಿವೃತ್ತ ಜನರಲ್ ಶಂಕರ್ ರಾಯ್ ಚೌಧರಿ ಹಾಗೂ ಹಿರಿಯ ಬಿಎಸ್ಎಫ್ ಅಧಿಕಾರಿಗಳು ಮತ್ತು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ ಹಿರಿಯ ಅಧಿಕಾರಿಗಳು ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. 24 ಪರಗಣ ಜಿಲ್ಲೆಯ ಗಟಿ ಭಾಗದಿಂದ ಸೈಕಲ್ ರ‍್ಯಾಲಿ ಪ್ರಾರಂಭವಾಗಿದ್ದು, ಇದು 66 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ರ‍್ಯಾಲಿಯಲ್ಲಿ, ಗಡಿ ಭದ್ರತಾ ಪಡೆಯ 13 ಸಿಬ್ಬಂದಿ 4,097 ಕಿ.ಮೀ ದೂರವನ್ನು ಕ್ರಮಿಸಲಿದ್ದಾರೆ.

ಓದಿ : ಪಾರ್ವತಿ ನದಿಯಲ್ಲಿ ಚಿನ್ನ ಹಾಗೂ ಬೆಳ್ಳಿ ನಾಣ್ಯಗಳಿವೆಯೆಂದು ಮಣ್ಣು ಅಗೆಯುತ್ತಿರುವ ಜನ!

ಬಾಂಗ್ಲಾದೇಶದ ಪಕ್ಕದ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸೋಂ, ತ್ರಿಪುರ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂ ಮೂಲಕ ರ‍್ಯಾಲಿ ಸಂಚರಿಸಲಿದ್ದು, ಮಾರ್ಚ್ 20 ರಂದು ಸಿಲ್ಕೋರ್ ಗಡಿಯಲ್ಲಿ ಕೊನೆಗೊಳ್ಳಲಿದೆ. ಈ ಸೈಕಲ್ ರ‍್ಯಾಲಿಯು ಪ್ರತಿ ದಿನ 90 ರಿಂದ 100 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ.

Last Updated : Jan 11, 2021, 9:31 AM IST

ABOUT THE AUTHOR

...view details