ಕರ್ನಾಟಕ

karnataka

ಕುಡಿದ ಮತ್ತಲ್ಲಿ ಎಎಸ್​ಐ ಮೇಲೆ ನಾಲ್ವರು ಯುವಕರಿಂದ ಮಾರಣಾಂತಿಕ ಹಲ್ಲೆ

ಮಧ್ಯರಾತ್ರಿ ರಸ್ತೆಯ ಮೇಲೆ ಮದ್ಯಪಾನ ಮಾಡುತ್ತಿದ್ದ ಯುವಕರಿಗೆ ಬುದ್ಧಿಹೇಳಲು ಹೋದ ಪೊಲೀಸ್​ ಅಧಿಕಾರಿ ಮೇಲೆಯೇ ಯುವಕರು ಮಾರಣಾಂತಿಕ ಹಲ್ಲೆ(youths beat up ASI)ನಡೆಸಿದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

By

Published : Nov 23, 2021, 2:08 PM IST

Published : Nov 23, 2021, 2:08 PM IST

beat up asi
ಯುವಕರಿಂದ ಮಾರಣಾಂತಿಕ ಹಲ್ಲೆ

ನವದೆಹಲಿ:ಮಧ್ಯರಾತ್ರಿ ರಸ್ತೆಯ ಮೇಲೆ ಮದ್ಯಪಾನ ಮಾಡುತ್ತಿದ್ದ ಯುವಕರಿಗೆ ಬುದ್ಧಿಹೇಳಲು ಹೋದ ಪೊಲೀಸ್​ ಅಧಿಕಾರಿ ಮೇಲೆಯೇ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಇಲ್ಲಿನ ಪಶ್ಚಿಮ ವಿಹಾರ್​ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಗರದ ಪೀರ್​ಗಂಡಿ ಮೆಟ್ರೋ ನಿಲ್ದಾಣದ ಮುಂಭಾಗದ ರಸ್ತೆಯ ಮೇಲೆ ಕಾರು ನಿಲ್ಲಿಸಿ, ಅದರ ಮೇಲೆ ಕುಳಿತು ನಾಲ್ವರು ಯುವಕರು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ, ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಅಧಿಕಾರಿ(ಎಎಸ್​ಐ) ಅಲ್ಲಿಗೆ ಬಂದು ಯುವಕರಿಗೆ ಸಾರ್ವಜನಿಕವಾಗಿ ಮದ್ಯಪಾನ ಮಾಡುವುದು ತಪ್ಪು ಎಂದು ತಿಳಿ ಹೇಳಿದ್ದಾರೆ.

ಕುಡಿದ ಮತ್ತಿನಲ್ಲಿದ್ದ ಯುವಕರು ಪೊಲೀಸ್​ ಅಧಿಕಾರಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿ ನಾಲ್ವರು ಯುವಕರು ಪೊಲೀಸ್​ ಅಧಿಕಾರಿಯನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಲ್ಲದೇ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಯ ಪತ್ನಿಗೆ ತಾಜ್​ಮಹಲ್ ಗಿಫ್ಟ್ ನೀಡಿದ ಮಧ್ಯಪ್ರದೇಶದ ನವ ಷಹಜಹಾನ್​

ಈ ವೇಳೆ, ಸ್ಥಳದಲ್ಲಿದ್ದ ಜನರು ಪೊಲೀಸ್​ ಅಧಿಕಾರಿಯನ್ನು ಯುವಕರಿಂದ ರಕ್ಷಿಸಿದ್ದಾರೆ. ಬಳಿಕ ಯುವಕರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡು ಹಲ್ಲೆ ನಡೆಸಿದ ಯುವಕರನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕರನ್ನು ಬುಲಂದ್​ಶಹರ್​ ನಿವಾಸಿಗಳಾದ ಅಮಿತ್​ ರಾಘವ್​, ವಿಜಯ್, ರಾಹುಲ್​ ಮತ್ತು ಬಾಲ್ಸ್ವಾಡೈರಿ ನಿವಾಸಿ ಫಕ್ರುದ್ದೀನ್​ ಎಂದು ಗುರುತಿಸಲಾಗಿದೆ.

ABOUT THE AUTHOR

...view details