ಅಯೋಧ್ಯೆ: ಸುಪ್ರೀಂಕೋರ್ಟ್ನ ಆದೇಶದಂತೆ ಅಯೋಧ್ಯೆ ನಗರದ ಧನ್ನಿಪುರ ಗ್ರಾಮದಲ್ಲಿ ಮಸೀದಿಯ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯ ನೆರವೇರಿದೆ. ಇದಕ್ಕೂ ಮೊದಲು ಇಂಡೋ ಗಲ್ಫ್ ಸಾಂಸ್ಕೃತಿಕ ಸಂಘಟನೆ(ಐಐಸಿಎಫ್)ಯ ಸದಸ್ಯರು ಗಿಡಗಳನ್ನು ನೆಟ್ಟಿದ್ದಾರೆ.
ಶಂಕಸ್ಥಾಪನೆ ವೇಳೆ ಈ ಮಸೀದಿ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ, ಬ್ರಿಟಿಷರ ವಿರುದ್ಧ ಅವಧ್ನಲ್ಲಿ ಹೋರಾಡಿದ, ಲೈಟ್ಹೌಸ್ ಆಫ್ ರೆಬೆಲಿಯನ್ ಎಂದು ಕರೆಸಿಕೊಳ್ಳುತ್ತಿದ್ದ ಅಹಮದುಲ್ಲಾ ಶಾ ಅವರಿಗೆ ಅರ್ಪಣೆ ಎಂದು ಐಐಸಿಎಫ್ ಹೇಳಿದೆ.
ಈ ಮೂಲಕ ನಿರ್ಮಾಣವಾಗಲಿರುವ ಮಸೀದಿಯ ಒಂದು ಭಾಗಕ್ಕೆ ಅಹಮದುಲ್ಲಾ ಅವರ ಹೆಸರು ಇಡಲಾಗುತ್ತದೆ ಎಂದು ಐಐಸಿಎಫ್ ಕಾರ್ಯದರ್ಶಿ ಅರ್ಥರ್ ಹುಸೇನ್ ಹೇಳಿದ್ದು, ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದಿದ್ದಾರೆ.