ಕರ್ನಾಟಕ

karnataka

ETV Bharat / bharat

ರಾಜಸ್ಥಾನ ಕಾಂ​ಗ್ರೆಸ್​ ಬಿಕ್ಕಟ್ಟು: ಪಕ್ಷದ ಉಸ್ತುವಾರಿ ಹೊಣೆ ತೊರೆದ ಅಜಯ್​ ಮಾಕನ್​ - ಅಜಯ್​ ಮಾಕನ್​

ರಾಜಸ್ಥಾನ ಕಾಂಗ್ರೆಸ್​ ಉಸ್ತುವಾರಿಯಾಗಿ ಪಂಜಾಬ್​ ಮಾಜಿ ಡಿಸಿಎಂ ಸುಖಜಿಂದರ್​ ಸಿಂಗ್​ ರಾಂಧವ್ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಆದೇಶಿಸಿದ್ದಾರೆ.

rajasthan-congress-in-charge
ಪಕ್ಷದ ಉಸ್ತುವಾರಿ ಹೊಣೆ ತೊರೆದ ಅಜಯ್​ ಮಾಕನ್​

By

Published : Dec 6, 2022, 12:12 PM IST

ಜೈಪುರ(ರಾಜಸ್ಥಾನ):ರಾಜಸ್ಥಾನ ಕಾಂಗ್ರೆಸ್​ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆಯುತ್ತಿದೆ. ಪಕ್ಷದ ಉಸ್ತುವಾರಿ ವಹಿಸಿದ್ದ ಅಜಯ್​ ಮಾಕನ್ ಅವ​ರನ್ನು ಬದಲಿಸಿ, ಆ ಜಾಗಕ್ಕೆ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಜಿಂದರ್​ ಸಿಂಗ್​ ರಾಂಧವ್ ಅವರನ್ನು ನೇಮಕ ಮಾಡಲಾಗಿದೆ. ಇದನ್ನು ಡಿಸಿಎಂ ಸಚಿನ್ ಪೈಲಟ್​ ಸ್ವಾಗತಿಸಿದ್ದಾರೆ.

ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ವೇಳೆ ಶಾಸಕರು, ಮಂತ್ರಿಗಳು ಬಂಡೆದ್ದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಉಸ್ತುವಾರಿಯಾಗಿದ್ದ ಅಜಯ್​ ಮಾಕನ್​ ಸಂಧಾನಕ್ಕೆ ಶತಪ್ರಯತ್ನ ನಡೆಸಿದ್ದರು. ಆದರೆ, ಶಾಸಕರು, ಸಚಿವರು ಇದಕ್ಕೆ ಓಗೊಡಲಿಲ್ಲ. ಕೊನೆಗೆ ಅಶೋಕ್​ ಗೆಹ್ಲೋಟ್​ ಅವರು ಸ್ಪರ್ಧೆಯಿಂದಲೇ ಹಿಂದೆ ಸರಿಯಬೇಕಾಯಿತು.

ಬಂಡೆದ್ದ ನಾಯಕರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅಜಯ್​ ಮಾಕನ್​ ಅವರು ಬೇಸರಿಸಿಕೊಂಡು ಹುದ್ದೆ ತೊರೆಯಲು ಇಚ್ಚಿಸಿದರು. ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ​ ಖರ್ಗೆ ಅವರಿಗೆ ತಮ್ಮನ್ನು ಉಸ್ತುವಾರಿ ಜವಾಬ್ದಾರಿಯಿಂದ ತಪ್ಪಿಸಲು ಮನವಿ ಮಾಡಿದ್ದರು. ಇದನ್ನು ಒಪ್ಪಿರುವ ಕಾಂಗ್ರೆಸ್, ಪಂಜಾಬ್​ ಮಾಜಿ ಡಿಸಿಎಂ ಸುಖಜಿಂದರ್ ಸಿಂಗ್​ರನ್ನು ನೇಮಿಸಿ ಆದೇಶಿಸಲಾಗಿದೆ.

ಓದಿ:ಕೇರಳ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರ ಸಮಿತಿ

ABOUT THE AUTHOR

...view details