ಕರ್ನಾಟಕ

karnataka

ETV Bharat / bharat

ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾಗೆ ವೈ+ ಭದ್ರತೆ - ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಮೇಲೆ ಹಲ್ಲೆ

ಚುನಾವಣಾ ಪ್ರಚಾರ ಮುಗಿಸಿ ಹಿಂದಿರುಗುತ್ತಿದ್ದಾಗ ಮೊಯ್ನಾ ಬಜಾರ್​ ಬಳಿ ದಿಂಡಾ ಅವರ ಕಾರನ್ನು ಸುತ್ತುವರೆದ ಅಪರಿಚಿತರ ಗುಂಪು, ಕಲ್ಲು ತೂರಾಟ ನಡೆಸಿ ಕಾರಿನ ಗಾಜುಗಳನ್ನು ಒಡೆದು ಹಾಕಿದೆ..

BJP candidate Ashok Dinda gets Y+ security
ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾಗೆ ವೈ+ ಭದ್ರತೆ

By

Published : Mar 31, 2021, 4:05 PM IST

ಕೊಲ್ಕತ್ತಾ (ಪಶ್ಚಿಮ ಬಂಗಾಳ) : ಎರಡನೇ ಹಂತದ ಮತದಾನಕ್ಕೂ ಮುನ್ನ ಅಪರಿಚಿತರಿಂದ ಹಲ್ಲೆಗೊಳಗಾಗಿದ್ದಾರೆ ಎನ್ನಲಾಗಿರುವ ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಅವರಿಗೆ ವೈ+ ಭದ್ರತೆ ಒದಗಿಸಲಾಗಿದೆ.

ಅಶೋಕ್ ದಿಂಡಾಗೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಭದ್ರತೆ ನೀಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚುನಾವಣಾ ಪ್ರಚಾರ ಮುಗಿಸಿ ಹಿಂದಿರುಗುತ್ತಿದ್ದಾಗ ಮೊಯ್ನಾ ಬಜಾರ್​ ಬಳಿ ದಿಂಡಾ ಅವರ ಕಾರನ್ನು ಸುತ್ತುವರೆದ ಅಪರಿಚಿತರ ಗುಂಪು, ಕಲ್ಲು ತೂರಾಟ ನಡೆಸಿ ಕಾರಿನ ಗಾಜುಗಳನ್ನು ಒಡೆದು ಹಾಕಿದೆ. ಇದರಿಂದ ದಿಂಡಾ ಅವರ ಭುಜಕ್ಕೆ ಗಾಯಗಳಾಗಿವೆ. ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಕಾರ್ಯಕರ್ತರೇ ದಿಂಡಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಓದಿ : ಇಶ್ರತ್ ಜಹಾನ್ ಎನ್​ಕೌಂಟರ್ ಕೇಸ್​: ಕೊನೆಯ ಮೂವರು ಅಧಿಕಾರಿಗಳ ಬಿಡುಗಡೆ

ಮೊಯ್ನಾ ವಿಧಾನಸಭಾ ಕ್ಷೇತ್ರದ ಮತದಾನ ಎರಡನೇ ಹಂತದಲ್ಲಿ ಏಪ್ರಿಲ್ 1ರಂದು ನಡೆಯಲಿದೆ. ಎರಡನೇ ಹಂತದಲ್ಲಿ 19 ಮಹಿಳೆಯರು ಸೇರಿ 171 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ. ಬಂಕುರಾ, ದಕ್ಷಿಣ 24 ಪರಗಣ, ಪುರ್ಬಾ ಮೇದಿನಿಪುರ ಮತ್ತು ಪಶ್ಚಿಮ ಮೇದಿನಿಪುರ ಜಿಲ್ಲೆಗಳ 30 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಗೆ ನಡೆಯಲಿದೆ.

ABOUT THE AUTHOR

...view details