ಕರ್ನಾಟಕ

karnataka

By

Published : May 18, 2022, 3:24 PM IST

ETV Bharat / bharat

ತಮಿಳುನಾಡಲ್ಲಿ ಕತ್ತೆಗಳ ಕೃಷಿ: ಡಿಮ್ಯಾಂಡಪ್ಪೋ ಡಿಮ್ಯಾಂಡ್​..  ಲೀಟರ್​ ಹಾಲಿಗೆ 7 ಸಾವಿರ ರೂ.ಬೆಲೆ

ವರದಿಗಳ ಪ್ರಕಾರ ದೇಶದಲ್ಲಿ ಕತ್ತೆಗಳ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪ್ರಾಣಿ ರಕ್ಷಕರು ಹೇಳುತ್ತಾರೆ. ಭಾರತದಲ್ಲಿ ಮೂರು ವಿಧದ ಕತ್ತೆಗಳನ್ನು ಬೆಳೆಸಲಾಗುತ್ತದೆ. ತಮಿಳುನಾಡಿನ ಸ್ಥಳೀಯ ಕತ್ತೆಗಳು ಹಾಗೂ ಉಳಿದವುಗಳು ಮಹಾರಾಷ್ಟ್ರ ಹಾಗೂ ಕಥಿಯಾವಾದಿ ಕತ್ತೆಗಳು ಮತ್ತು ಗುಜರಾತ್ ಹಲಾರಿ ಕತ್ತೆಗಳನ್ನು ಇಲ್ಲಿ ಸಾಕಣೆ ಮಾಡಲಾಗುತ್ತಿದೆ.

For the first time in Tamil Nadu a donkey farm has been started by graduate youth in Tirunelveli
ತಮಿಳುನಾಡಿಲ್ಲಿ ಕತ್ತೆಗಳ ಕೃಷಿ: ಪದವೀಧರ ಕೃಷಿಕನಿಂದ ಹೊಸ ಪ್ರಯೋಗ

ತಿರುನಲ್ವೇಲಿ: ತಮಿಳುನಾಡಿನಲ್ಲಿ ಪ್ರಥಮ ಬಾರಿಗೆ ತಿರುನಲ್ವೇಲಿ ಜಿಲ್ಲೆಯಲ್ಲಿ ಪದವೀಧರ ಯುವಕರಿಂದ ಕತ್ತೆ ಸಾಕಣೆ ಆರಂಭಿಸಲಾಗಿದೆ. ಇದೇ ಮೇ 14 ರಂದು ಜಿಲ್ಲಾಧಿಕಾರಿ ವಿಷ್ಣು ಕತ್ತೆ ಕೃಷಿಗಾಗಿ ರೆಡಿ ಮಾಡಿರುವ ತೋಟವನ್ನು ಉದ್ಘಾಟಿಸಿದರು.

ಭಾರತದಲ್ಲಿ ಕತ್ತೆ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿ ಬದಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಶೇ 62 ಕತ್ತೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ. ಈಗ ಭಾರತದಲ್ಲಿ 1 ಲಕ್ಷದ 40 ಸಾವಿರ ಕತ್ತೆಗಳು ಮಾತ್ರವೇ ಜೀವಂತವಾಗಿವೆ ಎನ್ನಲಾಗುತ್ತಿದೆ. ತಮಿಳುನಾಡಿನಲ್ಲಿ ಕೇವಲ ಒಂದು ಸಾವಿರದ 428 ಕತ್ತೆಗಳು ಜೀವಂತವಾಗಿವೆ ಎಂದು ಹೇಳಲಾಗುತ್ತದೆ.

ತಮಿಳುನಾಡಿಲ್ಲಿ ಕತ್ತೆಗಳ ಕೃಷಿ: ಪದವೀಧರ ಕೃಷಿಕನಿಂದ ಹೊಸ ಪ್ರಯೋಗ

ವರದಿಗಳ ಪ್ರಕಾರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಪ್ರಾಣಿ ರಕ್ಷಕರು ಹೇಳುತ್ತಾರೆ. ಭಾರತದಲ್ಲಿ ಮೂರು ವಿಧದ ಕತ್ತೆಗಳನ್ನು ಬೆಳೆಸಲಾಗುತ್ತದೆ. ತಮಿಳುನಾಡಿನ ಸ್ಥಳೀಯ ಕತ್ತೆಗಳು ಹಾಗೂ ಉಳಿದವುಗಳು ಮಹಾರಾಷ್ಟ್ರ, ಕಥಿಯಾವಾದಿ ಮತ್ತು ಗುಜರಾತ್ ಹಲಾರಿ ಕತ್ತೆಗಳನ್ನು ಇಲ್ಲಿ ಸಾಕಣೆ ಮಾಡಲಾಗುತ್ತಿದೆ.

ಸೌಂದರ್ಯವರ್ಧಕಕ್ಕೆ ಕತ್ತೆ ಹಾಲು ಬಳಕೆ:ಈ ನಡುವೆ ನೆಲ್ಲೈ ಜಿಲ್ಲೆಯ ಪದವೀಧರ ಬಾಬು ನೂರು ಕತ್ತೆಗಳೊಂದಿಗೆ ಫಾರ್ಮ್ ಆರಂಭಿಸಿದ್ದಾರೆ. ಕತ್ತೆಗಳು ಉತ್ಪಾದಿಸುವ ಹಾಲನ್ನು ಬೆಂಗಳೂರಿಗೆ ಮಾರಾಟಕ್ಕೆ ಕಳುಹಿಸಲಾಗುತ್ತದೆ. ಬೆಂಗಳೂರಿನಲ್ಲಿ ಕತ್ತೆ ಹಾಲನ್ನು ಸೌಂದರ್ಯವರ್ಧಕ, ಸಾಬೂನು, ಮುಖದ ಉತ್ಪನ್ನಗಳು ಮತ್ತು ಇತರ ಅನೇಕ ವಸ್ತುಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ.

ತಮಿಳುನಾಡಿಲ್ಲಿ ಕತ್ತೆಗಳ ಕೃಷಿ: ಪದವೀಧರ ಕೃಷಿಕನಿಂದ ಹೊಸ ಪ್ರಯೋಗ

ಅವುಗಳನ್ನು ಭಾರತ ಮತ್ತು ವಿದೇಶಗಳಾದ್ಯಂತ ಮಾರಾಟಕ್ಕೆ ಕಳುಹಿಸಲಾಗುತ್ತದೆ. ಕತ್ತೆ ಹಾಲು ಅಪರೂಪದ ಔಷಧೀಯ ಗುಣಗಳನ್ನು ಹೊಂದಿದೆ. ಇದು ತಾಯಿಯ ಎದೆ ಹಾಲಿಗೆ ಸಮಾನವಾದ ಪೋಷಕಾಂಶವನ್ನು ಹೊಂದಿದೆ ಎಂದು ಬಾಬು ಹೇಳುತ್ತಾರೆ. ಹಾಗಾಗಿ ಪ್ರಪಂಚದಾದ್ಯಂತ ಕತ್ತೆ ಹಾಲಿಗೆ ಯಾವಾಗಲೂ ಬೇಡಿಕೆಯಿದೆ.

ತಮಿಳುನಾಡಿಲ್ಲಿ ಕತ್ತೆಗಳ ಕೃಷಿ: ಪದವೀಧರ ಕೃಷಿಕನಿಂದ ಹೊಸ ಪ್ರಯೋಗ

ತಮಿಳುನಾಡಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಿಯಾಗಿ ಕೆಲಸ ಮಾಡದಿದ್ದರೆ ಅಥವಾ ಸರಿಯಾಗಿ ಅಧ್ಯಯನ ಮಾಡದಿದ್ದರೆ (ಕತ್ತೆಗಳನ್ನು ಬೆಳೆಸಲು ನೀವು ಮಾತ್ರ ಅರ್ಹರು) ಎಂದು ಗದರಿಸುತ್ತಿದ್ದರು. ಆದರೆ, ಪ್ರಾಯೋಗಿಕವಾಗಿ ಕತ್ತೆ ಬೆಳೆಗಾರರು ಹೆಚ್ಚಿನ ಆದಾಯವನ್ನು ಗಳಿಸುವ ಪರಿಸ್ಥಿತಿ.

ತುಳುಕ್ಕಪಟ್ಟಿ ಗ್ರಾಮದಲ್ಲಿ ತೋಟ ಆರಂಭಿಸಿರುವ ಪದವೀಧರ ಯುವಕ ಬಾಬು ಕತ್ತೆಗಳನ್ನು ಬೆಳೆಸುವ ಮೂಲಕ ಉತ್ತಮ ಲಾಭ ಗಳಿಸುತ್ತೇನೆ ಎನ್ನುತ್ತಾರೆ. ಒಂದು ಲೀಟರ್ ಕತ್ತೆ ಹಾಲನ್ನು ಸುಮಾರು 7,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಇದರಿಂದ ದೇಶದಾದ್ಯಂತ ಕತ್ತೆ ಸಾಕಣೆ ಕೇಂದ್ರಗಳನ್ನು ತೆರೆಯಬಹುದು ಮತ್ತು ಹೆಚ್ಚಿನ ಅಭಿವೃದ್ಧಿಯನ್ನೂ ಮಾಡಬಹುದು ಎಂದು ಜಿಲ್ಲಾಧಿಕಾರಿ ವಿಷ್ಣು ಹೇಳುತ್ತಾರೆ.

ಇದನ್ನು ಓದಿ:ಕಾರ್ಖಾನೆಯಲ್ಲಿ ಗೋಡೆ ಕುಸಿದು ದುರಂತ : 9 ಮೃತದೇಹ ಪತ್ತೆ, ಮುಂದುವರೆದ ರಕ್ಷಣಾ ಕಾರ್ಯ

ABOUT THE AUTHOR

...view details