ಕರ್ನಾಟಕ

karnataka

ETV Bharat / bharat

ಮಹಿಳೆಗೆ ಗಲ್ಲುಶಿಕ್ಷೆ: ನೇಣಿಗೇರಿಸುವ ವ್ಯಕ್ತಿ ಪವನ್ ಜಲ್ಲಾಡ್ ಹೇಳಿದ್ದೇನು!? - ಉತ್ತರ ಪ್ರದೇಶದ ಶಬ್ನಮ್​

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಸಲ ಮಹಿಳೆಯೊಬ್ಬಳನ್ನ ಗಲ್ಲಿಗೇರಿಸಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಗಲ್ಲಿಗೇರಿಸುವ ವ್ಯಕ್ತಿ ಪವನ್ ಜಲ್ಲಾಡ್ ಮಾತನಾಡಿದ್ದಾರೆ.

Pawan Jallad
Pawan Jallad

By

Published : Feb 17, 2021, 4:50 PM IST

ಮೀರತ್​:ಲವರ್​ ಜತೆ ಸೇರಿ ತನ್ನ ಕುಟುಂಬದ 7 ಮಂದಿಯ ಕೊಲೆ ಮಾಡಿರುವ ಶಬ್ನಮ್​ಗೆ ಗಲ್ಲಿಗೇರಿಸಲು ತಯಾರಿ ನಡೆಸಿದ್ದು, ಡೆತ್​ ವಾರೆಂಟ್​ ಲಭ್ಯವಾಗುತ್ತಿದ್ದಂತೆ ಮಥುರಾದ ಜೈಲಿನಲ್ಲಿ ನೇಣುಗಂಬಕ್ಕೇರಿಸಲಾಗುವುದು.

ಓದಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು.. ಯಾರು ಈ ಶಬ್ನಮ್​!? ಏನು ಆಕೆ ಎಸಗಿದ ಅಪರಾದ!?

2018ರ ಏಪ್ರಿಲ್​ 14-15ರ ತಡರಾತ್ರಿ ಶಬ್ನಮ್​ ತನ್ನ ಲವರ್ ಸಲೀಂ ಜತೆ ಸೇರಿ ಕುಟುಂಬದ ತಂದೆ, ತಾಯಿ, ಸಹೋದರಿ ಹಾಗೂ ಸಹೋದರರು ಸೇರಿದಂತೆ ಏಳು ಮಂದಿಯ ಬರ್ಬರ ಕೊಲೆ ಮಾಡಿದ್ದರು. ಇದಾದ ಬಳಿಕ ಸುಪ್ರೀಂಕೋರ್ಟ್​ ಮರಣದಂಡನೆ ವಿಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಇದೀಗ ಆಕೆಯನ್ನ ಗಲ್ಲಿಗೇರಿಸಲು ಎಲ್ಲ ರೀತಿಯ ತಯಾರಿ ನಡೆಸಲಾಗಿದ್ದು, ಗಲ್ಲಿಗೇರಿಸುವ ವ್ಯಕ್ತಿ ಪವನ್​ ಜಲ್ಲಾಡ್​ ಮಾಹಿತಿ ಹಂಚಿಕೊಂಡಿದ್ದಾರೆ.

ಪವನ್ ಜಲ್ಲಾಡ್ ಮಾತು

ಮಥುರಾ ಜೈಲು ಅಧಿಕಾರಿಗಳು ಇಲ್ಲಿಯವರೆಗೆ ತಮ್ಮೊಂದಿಗೆ​ ಸಂಪರ್ಕ ಸಾಧಿಸಿಲ್ಲ ಎಂದಿರುವ ಪವನ್​, ಡೆತ್ ವಾರೆಂಟ್​ ಜೈಲರ್​ಗಳ ಕೈಗೆ ಸಿಗುತ್ತಿದ್ದಂತೆ ಅವರು ತಮ್ಮೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ತಾವು ಶಬ್ನಮ್​ ಅವರನ್ನ ಗಲ್ಲಿಗೇರಿಸಲು ಹಿಂಜರಿಯವುದಿಲ್ಲ ಎಂದಿದ್ದು, ಇದು ತಮ್ಮ ಕರ್ತವ್ಯ ಎಂದಿದ್ದಾರೆ.

ಮಥುರಾಗೆ ತೆರಳಿದ ನಂತರ ಪವನ್​ ಗಲ್ಲಿಗೇರಿಸುವ ಜಾಗದ ಪರಿಶೀಲನೆ ನಡೆಸಲಿದ್ದು, ಇದಾದ ಬಳಿಕ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ.

ABOUT THE AUTHOR

...view details