ಕರ್ನಾಟಕ

karnataka

ETV Bharat / bharat

ಹರಿಯಾಣ: ರೈತರ ಪ್ರತಿಭಟನಾ ಸ್ಥಳದಲ್ಲಿ ಅಗ್ನಿ ಅವಘಡ, ಟೆಂಟ್‌ಗಳು​​ ನಾಶ - Fire breaks out farmers' protest site on Kundli border

ಟೆಂಟ್​​ಗಳಿಗೆ ಬೆಂಕಿ ತಗುಲಿದ್ದರಿಂದಾಗಿ ರೈತರು ಸಂಗ್ರಹಿಸಿಟ್ಟಿದ್ದ ವಸ್ತುಗಳಿಗೆ ಹಾನಿಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

Fire at farmers' protest site on Kundli border, several tents damaged
ರೈತರ ಪ್ರತಿಭಟನಾ ಸ್ಥಳದಲ್ಲಿ ಅಗ್ನಿ ಅವಘಡ: ಹಲವು ಟೆಂಟ್​ಗಳು ನಾಶ

By

Published : Nov 5, 2021, 2:36 PM IST

ಸೋನಿಪತ್ (ಹರಿಯಾಣ):ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಇಲ್ಲಿನ ಕುಂಡ್ಲಿ ಗಡಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಹಲವು ಟೆಂಟ್​​ಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇಲ್ಲಿನ ಜಿ.ಟಿ.ರಸ್ತೆಯ ರಾಸೋಯ್ ಡಾಬಾ ಮುಂಭಾಗ ಅನಾಹುತ ಸಂಭವಿಸಿತು.

ಟೆಂಟ್​​ಗಳಿಗೆ ಬೆಂಕಿ ತಗುಲಿದ್ದರಿಂದಾಗಿ ರೈತರು ಸಂಗ್ರಹಿಸಿಟ್ಟಿದ್ದ ಹಲವು ವಸ್ತುಗಳಿಗೆ ಆಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ರೈತರ ಚಳವಳಿಯನ್ನು ಅಂತ್ಯಗೊಳಿಸಲು ಸರ್ಕಾರ ಷಡ್ಯಂತ್ರ ರೂಪಿಸುತ್ತಿದೆ. ಈ ಘಟನೆಯೂ ಸಹ ಸರ್ಕಾರದ ಪಿತೂರಿ ಎಂದು ರೈತ ಮುಖಂಡ ಜಂಗ್ವೀರ್ ಸಿಂಗ್ ಚೌಹಾಣ್ ಆರೋಪಿಸಿದ್ದಾರೆ. ಇದು ರೈತರ ಒಗ್ಗಟ್ಟು ಒಡೆಯುವುದಿಲ್ಲ ಎಂದರು.

ಇದನ್ನೂ ಓದಿ:ಪಂಜಾಬ್​ನಲ್ಲಿ ಟಿಫಿನ್​ ಬಾಂಬ್ ಪತ್ತೆ​ ಪ್ರಕರಣ: ಮೂವರು ಅರೆಸ್ಟ್​

ABOUT THE AUTHOR

...view details