ಕರ್ನಾಟಕ

karnataka

ETV Bharat / bharat

'ಹಾಳಾದ ರಸ್ತೆಗಳಲ್ಲಿ ಕಡಿಮೆ ಅಪಘಾತ, ನೀರಲ್ಲಿ ಬೆರೆಸಿ ಸಾರಾಯಿ ಕುಡಿಯಿರಿ': ಛತ್ತೀಸ್‌ಗಢ ಸಚಿವರ ಉವಾಚ - ರಸ್ತೆ ಉತ್ತಮವಾಗಿದ್ದರೆ ಅಪಘಾತಗಳಾಗುವುದು ಜಾಸ್ತಿ

ರಸ್ತೆಗಳು ಹಾಳಾಗಿದ್ದರೆ ಅಪಘಾತಗಳಾಗುವುದು ಕಡಿಮೆ. ರಸ್ತೆ ಉತ್ತಮವಾಗಿದ್ದರೆ ಅಪಘಾತಗಳಾಗುವುದು ಜಾಸ್ತಿ ಎಂದು ಛತ್ತೀಸಗಢ ಸಚಿವರೊಬ್ಬರು ಹೇಳಿದ್ದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹಾಳಾದ ರಸ್ತೆಗಳಲ್ಲಿ ಕಡಿಮೆ ಅಪಘಾತ: ಚರ್ಚೆಗೆ ಗ್ರಾಸವಾದ ಸಚಿವರ ಹೇಳಿಕೆ
Fewer accidents on bad roads: Minister's statement sparks debate

By

Published : Sep 1, 2022, 11:36 AM IST

ನವದೆಹಲಿ: ಹಾಳಾಗಿರುವ ರಸ್ತೆಗಳಲ್ಲಿ ಅಪಘಾತಗಳಾಗುವುದು ಕಡಿಮೆ. ಇದಕ್ಕೆ ಹೋಲಿಸಿದರೆ ಸುಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಅಪಘಾತಗಳ ಸಂಖ್ಯೆ ಜಾಸ್ತಿ ಎಂದು ಛತ್ತೀಸಗಢ ಸಚಿವ ಪ್ರೇಮಸಾಯಿ ಸಿಂಗ್ ಟೇಕಮ್ ಬುಧವಾರ ಹೇಳಿದ್ದಾರೆ. ರಸ್ತೆಗಳ ರಿಪೇರಿ ಯಾವಾಗ ಎಂದು ಕೇಳಿದ್ದಕ್ಕೆ ಸಚಿವರು ಈ ರೀತಿ ಉತ್ತರ ನೀಡಿದರು.

ವದ್ರಾಫ್ ನಗರದಲ್ಲಿ ನಡೆಯುತ್ತಿರುವ ವ್ಯಸನಮುಕ್ತಿ ಶಿಬಿರವೊಂದರಲ್ಲಿ ಪಾಲ್ಗೊಂಡಿದ್ದ ಸಚಿವರಿಗೆ ರಸ್ತೆಗಳು ಹಾಳಾಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ನಾವು ಈಗಾಗಲೇ ದುರಸ್ತಿ ಕಾರ್ಯ ಆರಂಭಿಸಿದ್ದೇವೆ. ಟೆಂಡರ್ ಪಾಸ್ ಆಗಿದ್ದರೂ ಕೆಲ ಕಾರಣಗಳಿಂದ ಗುತ್ತಿಗೆದಾರರು ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಬಹುಶಃ ಮಳೆಯಿಂದ ಸಮಸ್ಯೆ ಆಗಿರಬಹುದು.

ಅಲ್ಲದೆ ಇದಕ್ಕೆ ಇನ್ನೊಂದು ಕಾರಣವೂ ಇದೆ. ಎಲ್ಲಾದರೂ ರಸ್ತೆಗಳು ಹಾಳಾಗಿದ್ದರೆ ಅವನ್ನು ದುರಸ್ತಿಗೊಳಿಸುವಂತೆ ನಮಗೆ ಕರೆಗಳು ಬರುತ್ತವೆ. ಆದರೆ ಆ ರಸ್ತೆಗಳಲ್ಲಿ ಅಪಘಾತಗಳಾಗುವುದು ಕಡಿಮೆ. ಇಲ್ಲಿ ಸಾವಿನ ಸಂಖ್ಯೆಯೂ ಕಡಿಮೆ.

ಇನ್ನು ರಸ್ತೆ ಉತ್ತಮವಾಗಿದ್ದರೆ ಅಲ್ಲಿ ವಾಹನಗಳು ಅತಿ ವೇಗವಾಗಿ ಚಲಿಸುತ್ತವೆ ಮತ್ತು ದಿನವೂ ಒಂದಿಲ್ಲೊಂದು ಅಪಘಾತಗಳಾಗುತ್ತವೆ. ಹೀಗಾಗಿ ರಸ್ತೆಗಳು ಉತ್ತಮವಾಗಿದ್ದಾಗ ವೇಗದ ಮೇಲೆ ಮಿತಿ ಇರಬೇಕು. ಅಲ್ಲದೆ ಮೊಬೈಲ್, ಡ್ರಗ್ಸ್​ ಮತ್ತು ಅಲ್ಕೊಹಾಲ್​ ವ್ಯಸನಗಳ ಮೇಲೂ ನಿಯಂತ್ರಣವಿರಬೇಕು ಎಂದು ಹೇಳಿದರು. ಈ ಬಗ್ಗೆ ಸಚಿವರು ಮಾತನಾಡಿದ ವೀಡಿಯೊ ಇಲ್ಲಿದೆ ನೋಡಿ.

'ಸಾರಾಯಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಯಿರಿ': ಇದೇ ಸಚಿವರ ಮತ್ತೊಂದು ವೀಡಿಯೋ ಸದ್ಯ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು, ಸಾರಾಯಿ ಸೇವನೆಯ ಬಗ್ಗೆ ಸ್ವಯಂ ನಿಯಂತ್ರಣ ವಿಧಿಸುವಂತೆ ಹೇಳಿದ್ದಾರೆ. ಸಾರಾಯಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಯಬೇಕು ಮತ್ತು ಸಾರಾಯಿಯನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸೇವಿಸಬೇಕೆಂದು ಅವರು ಹೇಳಿದ್ದಾರೆ.

ಛತ್ತೀಸಗಢ ಸಚಿವ ಪ್ರೇಮಸಾಯಿ ಸಿಂಗ್ ಟೇಕಮ್ ಅವರ ಹೇಳಿಕೆಗಳು ಈಗ ಸಾಕಷ್ಟು ವಾದ-ವಿವಾದಕ್ಕೆ ಕಾರಣವಾಗಿವೆ.

ABOUT THE AUTHOR

...view details