ಕರ್ನಾಟಕ

karnataka

By

Published : Mar 5, 2022, 4:08 PM IST

ETV Bharat / bharat

ಪ್ರೀತಿಸಿ ಮದುವೆಯಾದ ಅನ್ಯ ಜಾತಿ ಜೋಡಿ.. ಆಕ್ರೋಶದಲ್ಲಿ ಯುವತಿಯ ಅಪ್ಪನಿಂದ ಯುವಕನ ತಂದೆಯ ಕೊಲೆ!

ಅನ್ಯ ಜಾತಿಯ ಜೋಡಿವೊಂದು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವತಿಯ ತಂದೆ ಯುವಕನ ಅಪ್ಪನನ್ನು ಕೊಲೆ ಮಾಡಿದ್ದಾನೆ.

Tamilnadu crime news
Tamilnadu crime news

ಮಧುರೈ(ತಮಿಳುನಾಡು): ಪರಸ್ಪರ ಪ್ರೀತಿಸುತ್ತಿದ್ದ ಅನ್ಯ ಜಾತಿಯ ಜೋಡಿವೊಂದು ಕುಟುಂಬಸ್ಥರ ವಿರೋಧದ ಮಧ್ಯೆಯೂ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಯುವತಿಯ ಅಪ್ಪ ಯುವಕನ ತಂದೆಯನ್ನ ಕೊಲೆ ಮಾಡಿರುವ ಘಟನೆ ಮಧುರೈನಲ್ಲಿ ಬೆಳಕಿಗೆ ಬಂದಿದೆ.

ಯುವತಿಯ ಅಪ್ಪನಿಂದ ಯುವಕನ ತಂದೆಯ ಕೊಲೆ

ತಿದಿರ್​​ನಗರದಲ್ಲಿ ವಾಸವಾಗಿದ್ದ ರಾಮಚಂದ್ರನ್​ ಎಂಬುವರ ಪುತ್ರ ಶಿವಪ್ರಸಾದ್​ ಅದೇ ಪ್ರದೇಶದ ಹುಡುಗಿಯನ್ನ ಪ್ರೀತಿಸುತ್ತಿದ್ದನು. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದರಿಂದ ಸಂಬಂಧ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹುಡುಗಿಯ ತಂದೆ ಹೇಳಿದ್ದನು. ಆದರೆ, ಮಾರ್ಚ್​​ 4ರಂದು ವಿರೋಧದ ಮಧ್ಯೆ ಕೂಡ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿರಿ:ಆಸ್ಪತ್ರೆಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ.. ಸ್ಥಳದಲ್ಲೇ ಚಿಕಿತ್ಸೆ ನೀಡಿ, ಜೀವ ಉಳಿಸಿದ ವೈದ್ಯರು

ಈ ಮದುವೆಯಿಂದ ಆಕ್ರೋಶಗೊಂಡಿರುವ ಹುಡುಗಿಯ ತಂದೆ ಸದೈಯಾಂಡಿ, ರಾಮಚಂದ್ರನ್​​ ಎಂಬಾತನನ್ನ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ರಾಮಚಂದ್ರನ್​ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ABOUT THE AUTHOR

...view details